“ಎಡೆಬಿಡದ ಮಳೆ, ಗಾಳಿ; ಆ ದೃಶ್ಯ ಭಯಾನಕ’: ಪ್ರತ್ಯಕ್ಷದರ್ಶಿ ವಾಲ್ಟರ್
Team Udayavani, Aug 19, 2018, 10:49 AM IST
ಮಂಗಳೂರು: ಕೇರಳದಲ್ಲಿ ಧಾರಾ ಕಾರ ಮಳೆ ಮತ್ತು ಗಾಳಿ ನಿರಂತರವಾಗಿ ಬರು ತ್ತಲೇ ಇತ್ತು. ಆ ದೃಶ್ಯ ಭಯಾನಕ. ಗಂಟೆಗೊಮ್ಮೆ 15 ನಿಮಿಷ ಕಾಲ ಸ್ವಲ್ಪ ಬಿಡುವು ನೀಡುತ್ತಿತ್ತು, ಬಿಡುವು ಸಿಕ್ಕಿದಾಗ ನಾವು ಕೆಲಸ ಮಾಡುತ್ತಿದ್ದೆವು. ಮಳೆ ಬಂದಾಗ ಕೆಲಸವನ್ನು ನಿಲ್ಲಿಸುತ್ತಿದ್ದೆವು- ಇದು ವಾಮಂಜೂರಿನ ಶಿಲ್ಪ ಕಲಾವಿದ ವಾಲ್ಟರ್ ಪಿಂಟೊ ಅವರ ನುಡಿ.
ಪಾಲಕ್ಕಾಡ್ನ ಅತ್ತಿಕೋಡ್ ಸೈಂಟ್ ಆ್ಯಂಟನಿ ಚರ್ಚ್ನ ಆವರಣದಲ್ಲಿ ಫಾತಿಮಾ ಮಾತೆಯ ನೂತನ ಗ್ರೊಟ್ಟೊ (ಗುಡಿ) ನಿರ್ಮಾಣದ ಕಾಮಗಾರಿ ವಹಿಸಿಕೊಂಡಿದ್ದ ವಾಲ್ಟರ್ಪಿಂಟೊ ಮತ್ತು ಐದು ಮಂದಿಯ ತಂಡ ಶುಕ್ರವಾರ ಬೆಳಗ್ಗೆ ಪಾಲಕ್ಕಾಡ್ನಿಂದ ತಮ್ಮ ವಾಹನದಲ್ಲಿ ಹೊರಟು ರಾತ್ರಿ ವೇಳೆ ಮಂಗಳೂರು ತಲುಪಿದೆ. ವಾಲ್ಟರ್ ಪಿಂಟೊ ಅವರು ವಾಹನ ಚಾಲಕ ಪಾವ್ ಡಿ’ಸೋಜಾ, ಮೇಸಿಗಳಾದ ಉಮಾನಾಥ ಮತ್ತು ಹರಿ, ಸಹಾಯಕರಾದ ಚೇತನ್, ದುರ್ಗಾ ಮತ್ತು ಸುರೇಶ್ ಅವರ ಜತೆಗೆ ಒಂದೂವರೆ ತಿಂಗಳ ಹಿಂದೆ ಗ್ರೊಟ್ಟೊ ನಿರ್ಮಾಣಕ್ಕಾಗಿ ಪಾಲಕ್ಕಾಡ್ಗೆ ಹೋಗಿದ್ದರು. ಕಾಮಗಾರಿ ಕೊನೆಯ ಹಂತದಲ್ಲಿದ್ದಾಗ ಬಿರುಸಿನ ಮಳೆ ಆರಂಭವಾಗಿತ್ತು. ವಾಲ್ಟರ್ ಪಿಂಟೊ ಅವರು ಕೆಲಸ ಆರಂಭವಾದ ಕೂಡಲೇ ಹಿಂದಿರುಗಿದ್ದು, ಬಳಿಕ ಕಳೆದ ರವಿವಾರ ಮತ್ತೆ ಪಾಲಕ್ಕಾಡ್ಗೆ ತೆರಳಿದ್ದರು. ಕಾಮಗಾರಿ ಬಹುತೇಕ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಎಲ್ಲರೂ ಮಂಗಳೂರಿಗೆ ಹೊರಟಿದ್ದರು.
“ನಾವು ಪಾಲಕ್ಕಾಡ್ ದಾಟಿ ಸ್ವಲ್ಪ ಮುಂದೆ ತಲುಪಿದಾಗ ಅಲ್ಲಿ ಸೇತುವೆಯೊಂದು ಕುಸಿದಿದ್ದ ಕಾರಣ ಹೆದ್ದಾರಿಯಲ್ಲಿ ಸಂಚಾರವನ್ನು ರದ್ದುಪಡಿಸಿರುವುದು ಗೊತ್ತಾಯಿತು. ಬಳಿಕ ಅಲ್ಲಿಂದ ವಾಪಸ್ ಹೋಗಿ ಒಳ ರಸ್ತೆಯ ಮುಖಾಂತರ ಸಾಗಿ ಮಂಜೇರಿ ಮಾರ್ಗವಾಗಿ ಮುಂದುವರಿದು ಕೋಯಿಕ್ಕೋಡ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಲಭಿಸಿತು. ಅಲ್ಲಿಂದ ನೇರವಾಗಿ ಮಂಗಳೂರಿಗೆ ಬಂದೆವು’ ಎಂದು ವಾಲ್ಟರ್ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.