ಕಂಡಿದ್ದೀರಾ ಕೆಂಪು ಬೆಂಡೆ!


Team Udayavani, Aug 20, 2018, 6:00 AM IST

1.jpg

ಕೆಂಪು ಬೆಂಡೆ ಗಿಡದ ಎಲೆಗಳಲ್ಲಿರುವ ದಂಡು, ಕಾಂಡ ಎಲ್ಲವೂ ಕೆಂಪು ಮಿಶ್ರಿತವಾಗಿದೆ. ಗಿಡ ನಾಲ್ಕು ತಿಂಗಳಲ್ಲಿ  ನಾಲ್ಕು ಅಡಿ ಎತ್ತರವಾಗುತ್ತದೆ. ಅನಂತರ ಹೂ ಬಿಡುವುದು ನಿಧಾನವಾಗುತ್ತದೆ. ಆ ತನಕ ವಾರದಲ್ಲಿ ಎರಡು ಸಲ ಪ್ರತಿ ಗಿಡದಿಂದಲೂ ನಾಲ್ಕು ಕಾಯಿಗಳು ಕೊಯ್ಲಿಗೆ ಸಿಗುತ್ತವೆ. 

ಬೆಂಡೆಕಾಯಿಯಲ್ಲಿ ಹಲವು ಬಗೆಗಳಿವೆ. ಘಮಘಮ ಪರಿಮಳವಿರುವ ಕರಾವಳಿಯ ಅಪ್ಪಟ ತಳಿ ಹಾಲು ಬೆಂಡೆ, ಗಿಡದ ತುಂಬ ಬೆಳೆಯುವ ಹಸಿರು ಬೆಂಡೆ, ಬೆರಳಷ್ಟುದ್ದದ ಗೊಂಚಲು ಬೆಂಡೆ, ಪೊದೆಯಂತೆ ಕೊಂಬೆಗಳು ಅರಳುವ ಪೊದೆ ಬೆಂಡೆ- ಇವೆಲ್ಲದರ ಸಾಲಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ ಕೆಂಪು ಬೆಂಡೆ. ತೆಳ್ಳಗಿನ ಹಸಿರಿನ ಲೇಪದ ನಡುವೆ ಕಣ್ಣಿಗೆ ರಾಚುವ ಕೆಂಪು ವರ್ಣ ಹೊಂದಿದ ಈ ತಳಿ ಅಮೆರಿಕದಿಂದ ನಮ್ಮಲ್ಲಿಗೆ ಕಾಲಿಟ್ಟಿದೆ. ತಾರಸಿ ಕೃಷಿಯ ನಿಪುಣ ಮಂಗಳೂರಿನ ಮರೊಳಿಯ ಲಾಲ್‌ಬಹುದ್ದೂರ್‌ ಶಾಸ್ತ್ರಿ ಬಡಾವಣೆಯಲ್ಲಿರುವ ಪಡ್ಡಂಬೈಲು ಕೃಷ್ಣಪ್ಪಗೌಡರು ತಮ್ಮ ಮನೆಯ ತಾರಸಿಯಲ್ಲಿ ಅದನ್ನು ಬೆಳೆಯುತ್ತಿದ್ದಾರೆ.

    ಗೋಣಿಚೀಲದಲ್ಲಿ ಸುಡುಮಣ್ಣು ಮತ್ತು ಒಣ ಸೆಗಣಿಯ ಹುಡಿ ತುಂಬಿಸಿ ಏಪ್ರಿಲ್‌ ತಿಂಗಳಿನಲ್ಲಿ ಗೌಡರು ಬಿತ್ತಿದ ಬೆಂಡೆಯ ಬೀಜ ಹುಟ್ಟಿ 45 ದಿನಗಳಲ್ಲಿ ಹೂ ಬಿಟ್ಟಿದೆ. 60 ದಿನಗಳಲ್ಲಿ ಕಾಯಿ ಕೊಡಲಾರಂಭಿಸಿದೆ. ಈ ತಳಿಗೆ ಹಾಲುಬೆಂಡೆಯ ಹಾಗೆ ಹಳದಿರೋಗ ಬಾಧಿಸಿಲ್ಲ. ಕೀಟದ ಆಕ್ರಮಣ ತಡೆಯಲು ಗೌಡರ ಬಳಿ ಅವರದೇ ಆದ ಅಸ್ತ್ರವಿದೆ.  ಬೇವಿನ ಕಷಾಯಕ್ಕೆ ಅರಶಿನದ ಹುಡಿ ಮತ್ತು ಕಾಳುಮೆಣಸಿನ ಚೂರ್ಣ ಬೆರೆಸಿ ಸಿದ್ಧಪಡಿಸಿದ ಅವರ ಔಷಧದ ಮುಂದೆ ಕೀಟಗಳ ಆಟ ನಡೆಯಲಿಲ್ಲ.

    ಕೆಂಪು ಬೆಂಡೆ ಗಿಡದ ಎಲೆಗಳಲ್ಲಿರುವ ದಂಡು, ಕಾಂಡ ಎಲ್ಲವೂ ಕೆಂಪು ಮಿಶ್ರಿತವಾಗಿದೆ. ಗಿಡ ನಾಲ್ಕು ತಿಂಗಳಲ್ಲಿ  ನಾಲ್ಕು ಅಡಿ ಎತ್ತರವಾಗುತ್ತದೆ ಎನ್ನುತ್ತಾರೆ ಗೌಡರು. ಅನಂತರ ಹೂ ಬಿಡುವುದು ನಿಧಾನವಾಗುತ್ತದೆ. ಆ ತನಕ ವಾರದಲ್ಲಿ ಎರಡು ಸಲ ಪ್ರತಿ ಗಿಡದಿಂದಲೂ ನಾಲ್ಕು ಕಾಯಿಗಳು ಕೊಯ್ಲಿಗೆ ಸಿಗುತ್ತವೆ. ಹದಿನೈದು ಕಾಯಿಗಳು ಒಂದು ಕಿ.ಲೋ ತೂಗುತ್ತವೆ. ಪೇಟೆಯಲ್ಲಿ ಕಿ.ಲೋಗೆ ನೂರು ರೂಪಾಯಿ ತನಕ ಬೆಲೆಯೂ ಇದೆ. ಕಾಯಿ ಅರ್ಧ ಅಡಿ ಉದ್ದವಿದ್ದು ದಪ್ಪವಾಗಿವೆ. ಬಣ್ಣ ಕೆಂಪಗಿದ್ದು ಗಮನ ಸೆಳೆಯುವುದು ಬಿಟ್ಟರೆ ಸಾವಯವದ ಘಮದಲ್ಲಿ ಬೆಳೆದ ಕಾರಣ ಬಹು ಮೃದುವಾಗಿ ಬೇಯುತ್ತದೆ. ಸಿಹಿಯಾಗಿದ್ದು ಪಲ್ಯ, ಸಾಂಬಾರು, ಮಜ್ಜಿಗೆ ಹುಳಿಗಳನ್ನು ತಯಾರಿಸಿದರೆ ಸ್ವಾದಿಷ್ಟವೂ ಆಗಿದೆ ಎನ್ನುತ್ತಾರೆ ಕೃಷ್ಣಪ್ಪರ ಹೆಂಡತಿ.

    ಕೃಷ್ಣಪ್ಪಗೌಡರ ಅಧ್ಯಯನದ ಪ್ರಕಾರ, ಕೆಂಪು ಬೆಂಡೆ ಪೋಷಕಾಂಶದ ಕಣಜವೂ ಹೌದು. ಕಾಬೋìಹೈಡ್ರೇಟ್ಸ್‌, ನಾರು, ಸಕ್ಕರೆ, ಕೊಬ್ಬು, ಪ್ರೋಟೀನು, ಕಬ್ಬಿಣ, ರಂಜಕ, ಮೆಗ್ನೇಷಿಯಂ, ಪೊಟ್ಯಾಷಿಯಂ, ಸತು, ಅಲೆಟಿಕ್‌ ಮತ್ತು ಅನೋಲಿಯಕ್‌ ಆಮ್ಲಗಳ ಜೊತೆಗೆ ಎ, ಬಿ1, 2, 3, 4, ಸಿ, ಇ, ಕೆ ಜೀವಸತ್ವಗಳು ಅದರಲ್ಲಿ ಅಡಕವಾಗಿವೆ ಎಂಬುದನ್ನು ಅವರು ವಿವರಿಸುತ್ತಾರೆ. ಒಣಗಿದ ಬೀಜದಲ್ಲಿ ಶೇ. 40ರಷ್ಟು ತೈಲಾಂಶವಿದೆ. ಕೆಂಪು ಬೆಂಡೆಯ ಎಲೆಗಳಿಂದ ಸಲಾಡ್‌ ಮಾಡುವುದೂ ಉಂಟಂತೆ. ಬೀಜವನ್ನು ಹುರಿದು ಹುಡಿ ಮಾಡಿ ಕಾಫಿಯಂತಹ ಪಾನೀಯ ತಯಾರಿಕೆಗೂ ಉಪಯೋಗಿಸುವ ಅಂಶವನ್ನೂ ಹೇಳುತ್ತಾರೆ. ಇದನ್ನು ದೊಡ್ಡ ಪ್ರಮಾಣದಲ್ಲಿ ರೈತರು ಸಾವಯವದಲ್ಲಿಯೇ ಬೆಳೆಯಬಹುದು, ಬೆಂಡೆಕಾಯಿಯ ಬಣ್ಣವೇ ಅದಕ್ಕೆ ಹೆಚ್ಚಿನ ಬೆಲೆ ತಂದುಕೊಡುತ್ತದೆ. ಪ್ರಾಯೋಗಿಕವಾಗಿಯೂ ಮನೆಯ ತಾರಸಿ ಮೇಲೆ ಬೆಳೆಯಲು ಮುಂದಾಗಬಹುದು ಎನ್ನುವ ಆಶಯ ಅವರದು. 

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.