ನೆರೆ ನೋವಿನ ನಡುವೆಯೂ ಫೈನಲ್‌ಗೆ ಏರಿದ ಸಾಜನ್‌


Team Udayavani, Aug 20, 2018, 6:20 AM IST

sajan-prakash.jpg

ಜಕಾರ್ತಾ: ಕೇರಳದಲ್ಲಿ ಮಳೆ, ನೆರೆ ಅಟ್ಟಹಾಸಗೈದಿದೆ. ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದಕ್ಕೆ ಈಜುಪಟು ಸಾಜನ್‌ ಪ್ರಕಾಶ್‌ ಕುಟುಂಬವೂ ಹೊರತಾಗಿಲ್ಲ. ಸಾಜನ್‌ ದೂರದ ಜಕಾರ್ತಾದಲ್ಲಿ ಈಜುಕೊಳದಲ್ಲಿದ್ದರೆ, ಇತ್ತ ಕೇರಳದಲ್ಲಿ ಅವರ ಕುಟುಂಬ ನೆರೆ ನೀರಿನ ಹೊಡೆತಕ್ಕೆ ತತ್ತರಿಸಿದೆ. ಈ ನೋವು, ಆಘಾತದ ನಡುವೆಯೇ ಏಶ್ಯನ್‌ ಗೇಮ್ಸ್‌ನಲ್ಲಿ ಸಾಜನ್‌ ಪ್ರಕಾಶ್‌ ದಾಖಲೆ ನಿರ್ಮಿಸಿದ್ದಾರೆ.

ಈಜು 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ 1986ರ ಬಳಿಕ ಮೊದಲ ಸಲ ಫೈನಲ್‌ಗೇರಿದ ಭಾರತೀಯನೆಂಬ ಸಾಧನೆ ಮಾಡಿದ್ದಾರೆ ಸಾಜನ್‌. ಅಂದು ಕಜಾನ್‌ ಸಿಂಗ್‌ ಫೈನಲ್‌ ಪ್ರವೇಶಿಸಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು.ಸಾಜನ್‌ ಕುಟುಂಬ ನೆಲೆಸಿರುವ ಇಡುಕ್ಕಿ ಜಿಲ್ಲೆಯಲ್ಲಿ ವ್ಯಾಪಕ ಹಾನಿಯಾಗಿದೆ. ಕುಟುಂಬ ಸಂಕಷ್ಟದಲ್ಲಿರುವುದನ್ನು ತಿಳಿದರೂ ಕ್ರೀಡಾಸ್ಫೂರ್ತಿ ಮೆರೆದ ಸಾಜನ್‌ ಫೈನಲ್‌ನಲ್ಲಿ 5ನೇ ಸ್ಥಾನ (1 ನಿಮಿಷ, 57.75 ಸೆಕೆಂಡ್ಸ್‌)ಪಡೆಯುವಲ್ಲಿ ಯಶಸ್ವಿಯಾದರು.

ಸಾಜನ್‌ ಕುಟುಂಬದ ಸುಳಿವಿಲ್ಲ!
ಕುಟುಂಬದ ಸದಸ್ಯರೆಲ್ಲ ಎಲ್ಲಿದ್ದಾರೆ, ಹೇಗಿದ್ದಾರೆ ಎನ್ನುವ ಮಾಹಿತಿ ಇಲ್ಲದೆ ಸಾಜನ್‌ ಪ್ರಕಾಶ್‌ ಕಂಗಾಲಾಗಿದ್ದಾರೆ. ಫೈನಲ್‌ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಾಜನ್‌, “ನಮ್ಮ ಮನೆಯವರು ಎಲ್ಲಿದ್ದಾರೆ ಎನ್ನುವ ಮಾಹಿತಿ ನನಗೆ ಸಿಕ್ಕಿಲ್ಲ. ಅವರೆಲ್ಲ ಸುರಕ್ಷಿತರಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಅವರನ್ನು ಸೇರುವುದನ್ನು ಎದುರು ನೋಡುತ್ತಿದ್ದೇನೆ’ ಎಂದರು.

ರಾಜ್ಯದ ಶ್ರೀಹರಿಗೆ ನಿರಾಸೆ
ಬೆಂಗಳೂರಿನ ಈಜು ಪಟು ಶ್ರೀಹರಿ ನಟರಾಜ್‌ ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಈಜು ಕೂಟದಲ್ಲಿ ಫೈನಲ್‌ ಪ್ರವೇಶಿಸಿದ್ದರು. ಅಲ್ಲಿ 56.19 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ 8ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದರು.

ಟಾಪ್ ನ್ಯೂಸ್

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

1-ccrr-2

Team India ಮೂರನೇ ಸುತ್ತಿನ ಅಭ್ಯಾಸ

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

1-eee

International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

1-ccrr-2

Team India ಮೂರನೇ ಸುತ್ತಿನ ಅಭ್ಯಾಸ

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.