ಸೈನಿಕರ ನಾಡು ಕೊಡಗು ಈಗ ನೀರ ಮೇಲಿನ ಹಡಗು!


Team Udayavani, Aug 20, 2018, 6:15 AM IST

groundwater-level-kodagu.jpg

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದ್ದರಿಂದ ಆ ಭಾಗಗಳಲ್ಲಿ ಹಾಹಾಕಾರ ಸೃಷ್ಟಿಸಿದೆ. ಆದರೆ, ಅದೇ ಅಂತರ್ಜಲವು ಭೂಮಿಯ ಮೇಲ್ಭಾಗವನ್ನು ತಲುಪಿ, ಇಡೀ ಮಂಜಿನ ನಗರಿ ಕೊಡಗನ್ನು ಬುಡಮೇಲು ಮಾಡುತ್ತಿದೆ!

ಹೌದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೊಡಗಿನ ಅಂತರ್ಜಲಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಭೂಮಿಯ ಒಡಲು ಸಂಪೂರ್ಣವಾಗಿ ತೇವಗೊಂಡಿದ್ದು, ಅದರ ಮೇಲೆ ಎಡಬಿಡದೆ ಮಳೆಯಾಗುತ್ತಿದೆ. ಹೀಗೆ ನಿರಂತರವಾಗಿ ನೆನೆದ ಮಣ್ಣು ಸಡಿಲಗೊಂಡು ಗುಡ್ಡಗಳ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಇದಕ್ಕೆ ಪೂರಕವಾಗಿ ಜುಲೈ ಅಂತ್ಯಕ್ಕೆ ರಾಜ್ಯ ಅಂತರ್ಜಲ ನಿರ್ದೇಶನಾಲಯವು ಕೊಡಗಿನ 35 ಅಂತರ್ಜಲ ಮಾಪನ ಕೇಂದ್ರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದಾಖಲಾದ ಅಂತರ್ಜಲ ಮಟ್ಟದ ಫ‌ಲಿತಾಂಶ ಕೂಡ ಪುಷ್ಟಿ ನೀಡುತ್ತದೆ. 35 ಕೇಂದ್ರಗಳ ಪೈಕಿ 25 ಕಡೆಗಳಲ್ಲಿ ಅಂತರ್ಜಲ ಮಟ್ಟ 10 ಮೀಟರ್‌ಗಿಂತ ಕಡಿಮೆ ಇದ್ದು, ಈ ಪೈಕಿ 15 ಪ್ರದೇಶಗಳಲ್ಲಿ ಕೇವಲ 5 ಮೀಟರ್‌ ಒಳಗೇ ಇದೆ. ಆಗಸ್ಟ್‌ನಲ್ಲಿ ಇದು ಶೂನ್ಯ ತಲುಪಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಕೊಡಗು- ನೀರಿನ ಮೇಲಿನ ಹಡಗು!
ಬೇರೆ ಪ್ರದೇಶಗಳಂತೆ ಕೊಡಗು ಮೇಲ್ನೋಟಕ್ಕೆ ಭೂಮಿಯ ಮೇಲೆ ನಿಂತಂತೆ ಕಾಣುತ್ತಿದೆ. ಆದರೆ, ತಾಂತ್ರಿಕವಾಗಿ ಸಮುದ್ರದ ಮೇಲಿನ ಹಡಗಿನಂತೆ ತೇಲುತ್ತಿದೆ. ಆ ಹಡಗಿನ ಮೇಲೆ ಮಳೆಯ ರುದ್ರನರ್ತನ ಆಗುತ್ತಿದೆ ಎಂದು ವಿಶ್ಲೇಷಿಸುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರದ ನಿರ್ದೇಶಕ ಹಾಗೂ ಭೂವಿಜ್ಞಾನಿ ಡಾ.ಶ್ರೀನಿವಾಸ ರೆಡ್ಡಿ.

ಭೂಮಿಯ ಒಳಭಾಗ ಕೂಡ ಒಂದು ಜಲಾಶಯ ಇದ್ದಂತೆ. ಅದರಲ್ಲೂ ನೀರು ಶೇಖರಣೆ ಆಗುತ್ತದೆ. ಆದರೆ, ಆ ಸಂಗ್ರಹ ಸಾಮರ್ಥ್ಯ ಅಂತಿಮ ಹಂತ ತಲುಪಿದಾಗ, ಓವರ್‌ಫ್ಲೋ ಆಗುತ್ತದೆ. ಹೀಗೆ ತೇವದಿಂದ ನೆನೆದ ಗುಡ್ಡದ ತಳಭಾಗದ ಮಣ್ಣು ಸಡಿಲಗೊಳ್ಳುತ್ತದೆ. ಅಂತಿಮವಾಗಿ ಕುಸಿತದಲ್ಲಿ ಪರಿಣಮಿಸುತ್ತದೆ. ಕೊಡಗಿನಲ್ಲೂ ಇದೇ ಆಗುತ್ತಿದೆ. ಅಲ್ಲಿ ಬಿದ್ದ ಪ್ರತಿಯೊಂದು ಹನಿಯೂ ಇಂಗಲು ಜಾಗವಿಲ್ಲದೆ ಹರಿದುಹೋಗುತ್ತಿದೆ ಎಂದು ಅವರು ಹೇಳುತ್ತಾರೆ.

ಫ‌Åಯಾಟಿಕ್‌ ಝೋನ್‌ನಲ್ಲಿ ನೀರು
ಅಂತರ್ಜಲದಲ್ಲಿ “ಫ‌Åಯಾಟಿಕ್‌ ಝೋನ್‌’ (ಮಣ್ಣಿನ ಪದರದಲ್ಲಿರುವ ನೀರು) ಇರುತ್ತದೆ. ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗಿ, ಮಣ್ಣು ಸಡಿಲಗೊಂಡು ಜಾರುತ್ತದೆ. ಆಗ, ಇಳಿಜಾರು ಯಾವ ಕಡೆ ಇರುತ್ತದೆಯೋ ಅತ್ತ ಗುಡ್ಡ ವಾಲುತ್ತದೆ. ಇನ್ನು ಗುಡ್ಡಗಳು ಸಂಪೂರ್ಣ ಶಿಲೆಗಳಿಂದ ಕೂಡಿರುವುದಿಲ್ಲ. ಮಣ್ಣಿನಿಂದಲೂ ಆವೃತವಾಗಿರುತ್ತದೆ ಎಂದು ಕೊಡಗು ಜಿಲ್ಲೆಯ ಅಂತರ್ಜಲ ಕಚೇರಿ ಹಿರಿಯ ಭೂವಿಜ್ಞಾನಿ ಕೆ.ಜಿ. ಸೌಮ್ಯ ಅಭಿಪ್ರಾಯಪಡುತ್ತಾರೆ.

ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯೊಂದಿಗೆ ಹಸಿರಿನ ಪದರು ಕೂಡ ಕಿತ್ತುಹೋಗಿದೆ. ಕೊನೆಪಕ್ಷ ಮರಗಳು ಇದ್ದರೆ, ನೀರನ್ನು ಸಾಧ್ಯವಾದಷ್ಟು ಹಿಡಿದಿಡುತ್ತಿದ್ದವು. ಈಗ ಒಂದು ಮರ ಧರೆಗುರುಳುತ್ತಿದ್ದಂತೆ, ಆ ಜಾಗದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಇದು ಅನಾಹುತದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಮಳೆ ಬಿದ್ದಾಗ, ಶೇ. 5ರಷ್ಟು ಭೂಮಿಗಿಳಿದರೆ, ಉಳಿದದ್ದು ಹರಿದುಹೋಗುತ್ತದೆ. ಆದರೆ, ಕೊಡಗು ಸಂಪೂರ್ಣ ನೀರಿನಿಂದ ಆವೃತವಾಗಿರುವುದರಿಂದ ನೀರಿನ ಹರಿವು ಅಧಕ್ಕರ್ಧ ಕುಸಿದಿದೆ ಎಂದೂ ಸೌಮ್ಯ ಹೇಳಿದ್ದಾರೆ.

ಹಲವು ಕಾರಣ ಇರಬಹುದು; ಜಿಎಸ್‌ಐ ಗುಡ್ಡಗಳ ಕುಸಿತಕ್ಕೆ ಹಲವು ಕಾರಣಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ನೀರು ಒಳಗೆ ನುಸುಳುವುದು, ಆ ಭಾಗದ ಭೂಮಿಯಲ್ಲಿನ ಶಿಲೆಗಳ ಗುಣಲಕ್ಷಣಗಳು, ಪ್ರಕೃತಿಯಲ್ಲಿ ಮನುಷ್ಯನ ಹಸ್ತಕ್ಷೇಪ ಅಂದರೆ ಇಳಿಜಾರುಗಳಲ್ಲಿ ಮನೆಗಳನ್ನು ನಿರ್ಮಿಸುವುದು, ರಸ್ತೆಗಳನ್ನು ನಿರ್ಮಿಸಿದ ಕೆಳಭಾಗದಲ್ಲಿ ನದಿ ಹರಿಯುತ್ತಿರಬಹುದು. ಹಾಗಾಗಿ, ಇಂತಹದ್ದೇ ಕಾರಣವೆಂದು ಈಗಲೇ ನಿರ್ಧಾರಕ್ಕೆ ಬರುವುದು ಕಷ್ಟ ಎಂದು ಭಾರತೀಯ ಭೂಸರ್ವೇಕ್ಷಣೆ (ಜಿಎಸ್‌ಐ) ನಿರ್ದೇಶಕ ಕೆ.ವಿ. ಮಾರುತಿ ಸ್ಪಷ್ಟಪಡಿಸುತ್ತಾರೆ.

– ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.