ಒಂಥರಾ… ಪ್ರಚಾರದ ಕೊರತೆ
Team Udayavani, Aug 22, 2018, 11:33 AM IST
ಕಳೆದ ವಾರ “ಒಂಥರಾ ಬಣ್ಣಗಳು’ ಎಂಬ ಸಿನಿಮಾವೊಂದು ಬಿಡುಗಡೆಯಾಗಿತ್ತು. ಕಿರಣ್, ಸೋನುಗೌಡ, ಹಿತ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಚಿತ್ರದ ಬಗ್ಗೆ ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಚಿತ್ರತಂಡ ಒಂದೇ ವಾರಕ್ಕೆ ಚಿತ್ರಮಂದಿರದಿಂದ ಚಿತ್ರವನ್ನು ಹಿಂಪಡೆಯಲು ನಿರ್ಧರಿಸಿದೆ. ಈ ಮೂಲಕ ಸಿನಿಜಾತ್ರೆಯಲ್ಲಿ ಕಳೆದುಹೋಗುವ ಅಪಾಯದಿಂದ ತಪ್ಪಿಸಿಕೊಂಡಿದೆ.
ಎಲ್ಲಾ ಓಕೆ, ತಾವಾಗಿಯೇ ಸಿನಿಮಾವನ್ನು ಹಿಂಪಡೆಯಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಪ್ರಚಾರದ ಕೊರತೆ. ಚಿತ್ರದ ನಿರ್ದೇಶಕ ಸುನೀಲ್ ಭೀಮರಾವ್ ಹೇಳುವಂತೆ, ಚಿತ್ರಕ್ಕೆ ಪ್ರಚಾರದ ಕೊರತೆ ಕಾಡಿದೆಯಂತೆ. “ನಮ್ಮ ಸಿನಿಮಾ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಹೆಚ್ಚಿನ ಮಂದಿಗೆ ಸಿನಿಮಾ ತಲುಪಿಲ್ಲ. ಅದಕ್ಕೆ ಕಾರಣ ಪ್ರಚಾರದ ಕೊರತೆ.
ಒಂದು ಸಿನಿಮಾ ಜನರಿಗೆ ತಲುಪುವಷ್ಟು ಪ್ರಚಾರವನ್ನು ನಾವು ಮಾಡಿಲ್ಲ ಎಂದು ಈಗ ಅನಿಸುತ್ತಿದೆ. “ನಿಮ್ಮ ಸಿನಿಮಾ ಬಿಡುಗಡೆಯಾಗಿರೋದು ನಮಗೆ ಗೊತ್ತೇ ಆಗಲಿಲ್ಲ’ ಎಂದು ಅನೇಕರು ಹೇಳುತ್ತಿದ್ದಾರೆ. ಅದೇ ಕಾರಣದಿಂದ ಪ್ರೇಕ್ಷಕರ ಕೊರತೆ ಕೂಡಾ ಕಾಡಿದೆ. ಈ ವಾರ ಬೇರೆ ಎಂಟು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಹೀಗಿರುವಾಗ ಒಳ್ಳೆಯ ಸಿನಿಮಾವೊಂದು ಕಳೆದು ಹೋಗಬಾರದು ಎಂಬ ಕಾರಣಕ್ಕೆ ನಾವಾಗಿಯೇ ಚಿತ್ರಮಂದಿರದಿಂದ ಚಿತ್ರವನ್ನು ವಾಪಾಸ್ ಪಡೆಯಲು ನಿರ್ಧರಿಸಿದ್ದೇವೆ.
ಮುಂದೆ ಸಿನಿಮಾ ಜನರಿಗೆ ತಲುಪಲು ಎಷ್ಟು ಪ್ರಚಾರ ಬೇಕೋ ಅಷ್ಟು ಮಾಡಿ ಬರುತ್ತೇವೆ. ಹಾಗಂತ ಯಾವಾಗ ಮತ್ತೆ ಬಿಡುಗಡೆ ಮಾಡುತ್ತೇವೋ ಗೊತ್ತಿಲ್ಲ. ಸದ್ಯ ಸಿನಿಮಾ ವಾಪಾಸ್ ಪಡೆಯುವ ನಿರ್ಧಾರವಷ್ಟೇ ಮಾಡಿದ್ದೇವೆ’ ಎನ್ನುವುದು ಸುನೀಲ್ ಮಾತು. ಅಂದಹಾಗೆ, ಮೂವರು ಯುವಕರು ಹಾಗೂ ಇಬ್ಬರು ಯುವತಿಯರು ಒಟ್ಟಾಗಿ ಜರ್ನಿ ಹೊರಡುವ ಕಥೆಯನ್ನು ಹೊಂದಿರುವ “ಒಂಥರಾ ಬಣ್ಣಗಳು’ ಸಿನಿಮಾದ ಇಡೀ ಕಥೆ ಜರ್ನಿಯಲ್ಲಿ ಸಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.