ಇಲಾಖಾ ತನಿಖೆಯಲ್ಲಿ ಛಾಯಾಚಿತ್ರ ಮಹತ್ತರ ಪಾತ್ರ: ಲಕ್ಷ್ಮಣ ನಿಂಬರಗಿ
Team Udayavani, Aug 23, 2018, 6:20 AM IST
ಮಲ್ಪೆ: ಪೊಲೀಸ್ಇಲಾಖೆ ಹಾಗೂ ಛಾಯಾಗ್ರಾಹಕರಿಗೆ ಅವಿನಾಭಾವ ಸಂಬಂಧ. ವಿವಿಧ ಅಪರಾಧಗಳ ಇಲಾಖಾ ತನಿಖೆಯಲ್ಲಿ ಛಾಯಾಚಿತ್ರ ಮಹತ್ತರ ಪಾತ್ರವಹಿಸುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹೇಳಿದರು.
ಅವರು ಮಂಗಳವಾರ ಕೆಮ್ಮಣ್ಣು ಹಂಪನಕಟ್ಟೆಯ ಆದರ್ಶ್ನಲ್ಲಿ ಜರಗಿದ ವಿಶ್ವಛಾಯಾಚಿತ್ರಗ್ರಹಣ ದಿನಾಚರಣೆ ಅಂಗವಾಗಿ ದಶ ಮಾನೋತ್ಸವ ಸಂಭ್ರಮದಲ್ಲಿರುವ ಉಡುಪಿ ಪ್ರಸ್ ಫೋಟೋ ಗ್ರಾಪರ್ ಅಸೋಸಿಯೇಶನ್ಸ್ ಕೊಡಮಾಡಲ್ಪಡುವ ಉಪ್ಪಾ ಪುರಸ್ಕಾರವನ್ನು ಆದರ್ಶ ಸ್ಟುಡಿಯೋ ಮಾಲಕ ಶಿವ ಕೆ. ಅಮೀನ್ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಸೌತ್ ಕೆನರಾ ಫೋಟೋಗ್ರಾಫರ್ ಅಸೋಶಿಯೇಶನ್ ಮಂಗಳೂರು, ಉಡುಪಿ ಇದರ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ ಶೆಟ್ಟಿ ಮಾತನಾಡಿ ಹಿರಿಯ ಹಾಗೂ ಪತ್ರಿಕೆ ಯೊಂದಿಗೆ ಸಂಬಂಧವಿರುವ ಛಾಯಾಚಿತ್ರ ಗ್ರಾಹಕರನ್ನು ಹುಡುಕಿ ಅವರ ಸೇವಾ ಹಿರಿಮೆಯನ್ನು ಮನಗಂಡು ಛಾಯಾಸ್ಫೂರ್ತಿ ಬಿರುದು ನೀಡುತ್ತಿರುವ ಉಪ್ಪಾ ಸಂಘಟನೆ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಅಭಿನಂದನಾರ್ಹ ಎಂದರು.
ಈ ಸಂದರ್ಭದಲ್ಲಿ ಶಿವಣ್ಣ ಅವರ ಅಭಿಮಾನಿ ಬಳಗ ಕೆಮ್ಮಣ್ಣು ತಂಡದವರು ಪೋಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರನ್ನು ಅಭಿನಂದಿಸಿದರು. ಸಂಜೀವ ಕೆ.ಅಮೀನ್ ಉಪಸ್ಥಿತರಿದ್ದರು. ಉಪ್ಪಾ ಅಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಆಸ್ಟ್ರೋ ಮೋಹನ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ
Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !
Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ
Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?
Karkala ಕರ್ತವ್ಯಲೋಪ, ಶಿಷ್ಟಾಚಾರ ಉಲ್ಲಂಘನೆ: ಅಂಗನವಾಡಿ ಕಾರ್ಯಕರ್ತೆ ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.