ನಿಧಿ ಹುಡುಕಲು ಅಳಿಲಿಗೊಂದು ನಕಾಶೆ ಕೊಡಿ


Team Udayavani, Aug 30, 2018, 6:00 AM IST

lead-alilu-1.jpg

ನಿಧಿಯನ್ನು ಒಂದು ಜಾಗದಲ್ಲಿ ಹೂತಿಟ್ಟು, ಅನುಕೂಲಕರ ಸಮಯ ನೋಡಿ ನಿಧಿಯನ್ನು ಹೊರತೆಗೆಯುವವರನ್ನು ನಿಧಿ ಶೋಧಕರೆಂದು ಕರೆಯುತ್ತೇವೆ. ಪುರಾತನ ಕಾಲದಲ್ಲಿ ಯಾವುದೋ ಅಪರಿಚಿತ ಕಾರಣದಿಂದಾಗಿ ಕಳೆದುಹೋದ ಸಂಪತ್ತು ಅದೆಷ್ಟೋ. ಅವುಗಳ ಶೋಧನೆಯಲ್ಲಿ ಮನುಷ್ಯ ಅನಾದಿ ಕಾಲದಿಂದಲೂ ತೊಡಗಿದ್ದಾನೆ. ಭೂಮಿಯಡಿ, ಸಮುದ್ರದಡಿ ಮುಂತಾದ ಕಡೆಗಳಲ್ಲೆಲ್ಲಾ ಮನುಷ್ಯ ಕಳೆದುಹೋದ ನಿಧಿಗಾಗಿ ಹುಡುಕುತ್ತಲೇ ಇದ್ದಾನೆ. 

ನಿಧಿಯನ್ನು ಹೂತಿಟ್ಟು ಅದನ್ನು ಮರೆತುಬಿಡುವ ಜೀವಿ ಯಾವುದೆಂದು ನಿಮಗೆ ಗೊತ್ತೇ? ಅಳಿಲು. ಅಳಿಲಿಗೆ ಯಾಕೆ ಚಿನ್ನಾಭರಣಗಳ ಗೊಡವೆ ಎಂದು ತಪ್ಪು ತಿಳಿಯಬೇಡಿ. ನಮಗಿರುವಂತೆ ಅವುಗಳಿಗಿನ್ನೂ ಚಿನ್ನದ ಮೇಲೆ ವ್ಯಾಮೋಹ ದೇವರ ದಯೆಯಿಂದ ಬಂದಿಲ್ಲ. ಅವುಗಳಿಗೆ ನಿಧಿ ಎಂದರೆ “ಆಹಾರ’. ಅಳಿಲು ಸೇವಿಸಿ ಮಿಕ್ಕುಳಿದ ಆಹಾರವನ್ನು ಭವಿಷ್ಯದಲ್ಲಿ ಆಹಾರದ ಕೊರತೆ ಉಂಟಾದರೆ ಇರಲಿ ಎಂಬ ದೂರಾಲೋಚನೆಯಿಂದ ಭೂಮಿಯಡಿ ಹುಗಿದು ಇಡುತ್ತದೆ. ಆದರೆ ಅದರ ಸೀಮಿತ ನೆನಪಿನ ಶಕ್ತಿಯ ದೆಸೆಯಿಂದ ಬಹಳ ಬೇಗ ತಾನು ಆಹಾರ ಇಟ್ಟಿರುವುದನ್ನೇ ಮರೆತು ಬಿಡುತ್ತದೆ. 

“ಬಚ್ಚಿಟ್ಟಿದ್ದು ಪರರಿಗೆ’ ಎಂಬ ಹಳೆಯ ಚಿತ್ರಗೀತೆಯ ಸಾಲು ಅಳಿಲಿನ ವಿಷಯದಲ್ಲಿ ನಿಜವಾಗಿದೆ. ನಾವು ಮನುಷ್ಯರು ನೆನಪಿಡುವ ವಿಷಯದಲ್ಲಿ ಜಾಣರು ಎಂದು ಬೀಗುವಂತಿಲ್ಲ. ಏಕೆಂದರೆ ನಿಧಿ ಹೂತಿಟ್ಟಿರುವ ಜಾಗವನ್ನು ನೆನಪಿಡಲೇ ಅಲ್ಲವೆ ನಕಾಶೆ ಮಾಡುವುದು. ಪಾಪ ಅಳಿಲಿಗೂ ನಕಾಶೆ ಮಾಡುವುದು ಗೊತ್ತಿರುತ್ತಿದ್ದರೆ ತಾನು ಹೂತಿಟ್ಟ ಅಹಾರವನ್ನು ಮರೆಯುತ್ತಿರಲಿಲ್ಲ. ಆದರೆ ಸೃಷ್ಟಿ ಎಷ್ಟು ಸೋಜಿಗ ಎಂದರೆ ಅಳಿಲಿನ ಮರೆಗುಳಿತನದಿಂದ ಪ್ರಕೃತಿಗೇ ಹೆಚ್ಚಿನ ಲಾಭವಾಗಿದೆ. ಹೇಗೆ ಅಂತೀರಾ? ಇದನ್ನು ತಿಳಿಯುವುದಕ್ಕೆ ಮೊದಲು ಅಳಿಲಿನ ಆಹಾರ ಯಾವುದೆಂದು ನೀವು ತಿಳಿದುಕೊಳ್ಳಬೇಕು. ಅಳಿಲಿನ ಪ್ರಮುಖ ಆಹಾರ ಬೀಜಗಳು. ಈಗ ಹೊಳೆದಿರಬೇಕಲ್ಲ? ಅಳಿಲು ಭೂಮಿಯಡಿ ಹುಗಿದು ಮರೆತ ಬೀಜಗಳೇ ಬೆಳೆದು ಅಸಂಖ್ಯ ಮರಗಳಾಗಿವೆ. 

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.