![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 3, 2018, 1:00 PM IST
ಲಕ್ನೋ/ಶಿಮ್ಲಾ: ಉತ್ತರ ಪ್ರದೇಶ ದಾದ್ಯಂತ ಮತ್ತೆ ಮಳೆಯ ಅಬ್ಬರ ತೀವ್ರಗೊಂಡಿದ್ದು, ಒಂದೇ ದಿನದಲ್ಲಿ 16 ಮಂದಿ ಮೃತ ಪಟ್ಟು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿ ದ್ದಾರೆ. ಇನ್ನೂ 2 ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಶಹಜಹಾನ್ಪುರವೊಂದರಲ್ಲೇ ಶನಿವಾರ ರಾತ್ರಿ ಸಿಡಿಲಿಗೆ ಕನಿಷ್ಠ 6 ಮಂದಿ ಬಲಿಯಾಗಿದ್ದು, 7 ಮಂದಿ ಗಾಯಗೊಂಡಿ ದ್ದಾರೆ. ಸೀತಾಪುರ ಜಿಲ್ಲೆಯಲ್ಲಿ ಮೂವರು, ಔರಯ್ನಾ ಮತ್ತು ಅಮೇಠಿಯಲ್ಲಿ ತಲಾ ಇಬ್ಬರು, ಲಖೀಂಪುರ ಖೇರಿ, ರಾಯ ಬರೇಲಿ, ಉನ್ನಾವ್ನಲ್ಲಿ ತಲಾ ಒಬ್ಬರು ಮಳೆ ಸಂಬಂಧಿ ದುರಂತಗಳಿಗೆ ಬಲಿಯಾಗಿದ್ದಾರೆ. 18 ಜಾನುವಾರುಗಳೂ ಅಸುನೀಗಿದ್ದು, 461 ಮನೆಗಳು ಹಾನಿಗೀಡಾಗಿವೆ.
ಡೋಪ್ಲಾರ್ ರೇಡಾರ್
ಇದೇ ವೇಳೆ, ಹಿಮಾಚಲ ಪ್ರದೇಶ ದಲ್ಲಿ ಮೂರು ಡೋಪ್ಲರ್ ರೇಡಾರ್ಗಳು, ಸ್ನೋ ಗೇಜರ್ಗಳು ಹಾಗೂ ಅಟೋಮ್ಯಾಟಿಕ್ ಹವಾಮಾನ ಕೇಂದ್ರಗಳನ್ನು ನಿರ್ಮಿಸುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಇವುಗಳ ಮೂಲಕ ಹವಾಮಾನ, ಹಿಮಪಾತ ಹಾಗೂ ಭೂಕುಸಿತಗಳ ಕುರಿತು ನಿಖರ ಮಾಹಿತಿ ಪಡೆಯಬಹುದಾಗಿದೆ ಎಂದಿದೆ.
You seem to have an Ad Blocker on.
To continue reading, please turn it off or whitelist Udayavani.