ಗನ್ ಮ್ಯಾನ್ನಿಂದ ಸಾರ್ವಜನಿಕವಾಗಿ ಬೂಟ್ ಒರೆಸಿಕೊಂಡ ಡಿಸಿಎಂ ಪರಂ
Team Udayavani, Sep 4, 2018, 2:07 PM IST
ಬೆಂಗಳೂರು: ಉಪಮುಖ್ಯಮುಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಾರ್ವಜನಿಕವಾಗಿ ಗನ್ಮ್ಯಾನ್ವೊಬ್ಬರಿಂದ ಶೂಗಳು ಮತ್ತು ಬಟ್ಟೆಗಳ ಕೊಳೆ ಒರೆಸಿಕೊಂಡು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿರುವ ಪರಮೇಶ್ವರ್ ಅವರು ಇಂದು ಮಂಗಳವಾರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ನಗರ ಪ್ರದಕ್ಷಿಣೆಗೆ ಆಗಮಿಸಿದ್ದರು.
ಹಲಸೂರು ಗುರುದ್ವಾರದ ಬಳಿಯಿರುವ ಮಳೆ ನೀರು ಕಾಲುವೆ ಬಳಿ ಆಗಮಿಸಿದ ವೇಳೆ ರಸ್ತೆಯಲ್ಲಿದ್ದ ಕೊಚ್ಚೆ ನೀರು ಡಿಸಿಎಂ ಅವರ ಶುಭ್ರವಾದ ಬಟ್ಟೆಗಳಿಗೆ ಹಾರಿದೆ. ಕೂಡಲೇ ಸ್ಥಳದಲ್ಲಿ ಕಾಂಗ್ರೆಸ್ ಬೆಂಬಲಗರೊಬ್ಬರು ಬಂದು ಅದನ್ನು ಒರೆಸಲು ಮುಂದಾಗಿದ್ದಾರೆ. ಆಗ ನೀನು ಬೇಡ ಎಂದು ಗನ್ ಮ್ಯಾನ್ ಬಳಿ ಒರೆಸಿಕೊಂಡಿದ್ದಾರೆ.
ಗನ್ ಮ್ಯಾನ್ ಮಾಧ್ಯಮಗಳು, ಶಾಸಕರು ಮತ್ತು ನೂರಾರು ಜನರ ಮುಂದೆ ಕರವಸ್ತ್ರ ಬಳಸಿ ನೀರಲ್ಲಿ ಅದ್ದಿ ಕೊಳೆ ಒರೆಸಿದ್ದಾನೆ.
ಡಿಸಿಎಂ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗಳು ಕೇಳಿ ಬಂದಿವೆ. ಅಂಧಾ ದರ್ಬಾರ್ ನಡೆ ಎಂದು ಮಾಧ್ಯಮಗಳು, ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ಪರಮೇಶ್ವರ್ ಅವರು ‘‘ಇದೇನು ಇಂಟರ್ ನ್ಯಾಷನಲ್ ನ್ಯೂಸಾ” ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.