ನಕ್ಸಲ್‌ ಯಲ್ಲಪ್ಪ ಎನ್‌ಕೌಂಟರ್‌ಗೆ ಆರು ವರ್ಷ!


Team Udayavani, Sep 5, 2018, 10:30 AM IST

5-september-4.jpg

ಸುಬ್ರಹ್ಮಣ್ಯ: ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ದ.ಕ. ಜಿಲ್ಲೆಯ ಪುತ್ತೂರು ತಾಲೂಕು ಹಾಗೂ ಬಿಸಿಲೆ ಗಡಿಭಾಗದಲ್ಲಿ ನಡೆದ ಈ ಭಾಗದ ಮೊದಲ ನಕ್ಸಲ್‌ ಎನ್‌ ಕೌಂಟರ್‌ಗೆ ಆರು ವರ್ಷ ಸಂದಿದೆ. 2012ರ ಸೆ. 4ರಂದು ಬಾಗಿಮಲೆ ಅರಣ್ಯದಲ್ಲಿ ನಡೆದ ಎಎನ್‌ಎಪ್‌ ಎನ್‌ಕೌಂಟರ್‌ ನಲ್ಲಿ ನಕ್ಸಲ್‌ ಸದಸ್ಯ ರಾಯಚೂರಿನ ಯಲ್ಲಪ್ಪ (39) ಬಲಿಯಾಗಿದ್ದು, ರಕ್ತಸಿಕ್ತ ಹೋರಾಟಕ್ಕೆ ಒಂದು ಹಂತದ ನಾಂದಿ ಹಾಡಿತ್ತು. 2012ರಲ್ಲಿ ಆ. 30 ಮತ್ತು 31ರಂದು ಮೊದಲ ಬಾರಿಗೆ ಈ ಭಾಗಕ್ಕೆ ಪ್ರವೇಶ ಪಡೆದ 9 ಮಂದಿ ಸಶಸ್ತ್ರ ನಕ್ಸಲರು, ಪಳ್ಳಿಗದ್ದೆಯ ನಾಲ್ಕು ಮನೆಗಳಿಗೆ ಭೇಟಿ ನೀಡಿದ್ದರು. ಅಡ್ಡಹೊಳೆ, ಚೇರು, ಭಾಗ್ಯ, ಎರ್ಮಾಯಿಲ್‌ ನಡುತೋಟ ಮೊದಲಾದೆಡೆ ಓಡಾಡಿದ್ದರು. ಈ ಮನೆಗಳಿಂದ ಆಹಾರ ಸಾಮಗ್ರಿ ಪಡೆದು ಮರಳಿದ್ದರು. ತಾವು ಭೇಟಿ ನೀಡಿದ ವಿಚಾರವನ್ನು ಯಾರಿಗೂ ತಿಳಿಸಬಾರದೆಂದು ತಾಕೀತು ಮಾಡಿದ್ದರು. ಬಾಯಿಬಿಟ್ಟರೆ ಕೊಲ್ಲುವ ಬೆದರಿಕೆ ಒಡ್ಡಿದ್ದರು. ಆದರೆ, ಈ ಮಾಹಿತಿ ಅದು ಹೇಗೋ ಪೊಲೀಸರಿಗೆ ತಲುಪಿ, ಉನ್ನತ ಅಧಿಕಾರಿಗಳ ತಂಡ ಹಾಗೂ ನಿಗ್ರಹ ಪಡೆ ಯೋಧರು ಆಗಮಿಸಿ, ದಟ್ಟ ಅರಣ್ಯಗಳಲ್ಲಿ ಕೂಂಬಿಂಗ್‌ ನಡೆಸಿದ್ದರು.

ಸೆ. 1ರಂದು ಪಳ್ಳಿಗದ್ದೆ ಸಮೀಪದ ಅರಣ್ಯದಲ್ಲಿ ಎಎನ್‌ಎಫ್ ಮತ್ತು ನಕ್ಸಲ್‌ ತಂಡದ ಸದಸ್ಯರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಅಂದು ಕೂದಲೆಳೆಯ ಅಂತರದಿಂದ ನಕ್ಸಲರು ಪಾರಾಗಿದ್ದರು. ಬಳಿಕ ನಕ್ಸಲ್‌ ನಿಗ್ರಹ ಪಡೆಯ ಯೋಧರು ಕೂಂಬಿಂಗ್‌ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಪಶ್ಚಿಮ ಘಟ್ಟ ತಪ್ಪಲಿನ ದ.ಕ. ಮತ್ತು ಬಿಸಿಲೆ ಗಡಿ ಭಾಗದ ಕಾಡುಗಳಲ್ಲಿ ನಕ್ಸಲರಿಗಾಗಿ ತೀವ್ರ ಶೋಧ ನಡೆಸಿದ್ದರು.

ಎಎನ್‌ಎಫ್ ಅಧಿಕಾರಿಯಾಗಿದ್ದ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ಸೆ. 4ರಂದು ಬಿಸಿಲೆಯ ಬಾಗಿಮಲೆ ಅರಣ್ಯದೊಳಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಕೋಟೆಸಾರ್‌ ಎಂಬಲ್ಲಿ ನಕ್ಸಲರೊಂದಿಗೆ ಭಾರೀ ಪ್ರಮಾಣದ ಗುಂಡಿನ ಚಕಮಕಿ ನಡೆಯಿತು. ಈ ಹೋರಾಟದಲ್ಲಿ ನಕ್ಸಲ್‌ ತಂಡದ ಸದಸ್ಯ ರಾಯಚೂರಿನ ಯಲ್ಲಪ್ಪ ಅಸುನೀಗಿದ.

ಇತ್ತಿಚಿನ ತನಕ ಓಡಾಟವಿತ್ತು
ಪಶ್ಚಿಮ ಘಟ್ಟದ ತಪ್ಪಲಿನ ಜನವಸತಿ ಇರುವ ಪ್ರದೇಶಗಳಲ್ಲಿ ನಕ್ಸಲ್‌ ಚಟುವಟಿಕೆ ಸಕ್ರಿಯವಾಗಿತ್ತು. ಶಿರಾಡಿ ಅಡ್ಡಹೊಳೆ, ಕಡಮಕಲ್ಲು, ಕುಲ್ಕುಂದ, ಸುಬ್ರಹ್ಮಣ್ಯ, ಮಡಪ್ಪಾಡಿ, ಸಂಪಾಜೆ, ಮಡಿಕೇರಿ, ಗಾಳಿಬೀಡು, ವನಚ್ಚಿಲ್‌ ಮೊದಲಾದ ಮೀಸಲು ಅರಣ್ಯಗಳಲ್ಲಿ ನಕ್ಸಲರು ಆಗಾಗ್ಗೆ ಕಾಣಿಸಿಕೊಂಡಿದ್ದರು. ಇತ್ತೀಚಿನ ತನಕವೂ ಈ ಭಾಗದಲ್ಲಿ ನಕ್ಸಲರು ಓಡಾಡಿ ಸುದ್ದಿಯಲ್ಲಿದ್ದರು. ಮೂರು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕಾಡು ಹಾಸನ-ಕೊಡಗು ಜಿಲ್ಲೆಗಳಿಗೆ ನಕ್ಸಲರು ಸಂಚರಿಸಲು, ಪೊಲೀಸರ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಹೇಳಿ ಮಾಡಿಸಿದಂತಿದೆ. ಇದನ್ನು ಅಡಗುದಾಣ ಮಾಡಿಕೊಳ್ಳಲು ನಕ್ಸಲರು ಯತ್ನಿಸಿದ್ದರು.

ಪರಿಹಾರ ಮರೀಚಿಕೆ
ಪಳ್ಳಿಗದ್ದೆಯ ನಾಲ್ಕು ಮನೆಗಳಿಗೆ ಸರಕಾರ ಜಿಲ್ಲಾಡಳಿತದ ಮೂಲಕ ರಕ್ಷಣೆ, ನಿವೇಶನ, ಸವಲತ್ತು, ಭದ್ರತೆ ಒದಗಿಸುವ ಭರವಸೆ ನೀಡಿದ್ದರು. ಕೆಲ ದಿನ ಪೊಲೀಸರ ಬೂಟು, ವಾಹನಗಳು ಇವರ ಮನೆ ಪರಿಸರದಲ್ಲಿ ಸದ್ದು ಮಾಡಿದ್ದು ಬಿಟ್ಟರೆ ರಕ್ಷಣೆಯೂ ಇಲ್ಲ, ಬದುಕಿಗೆ ನೆಲೆಯೂ ಇಲ್ಲದಾಗಿದೆ. ಇನ್ನು ಕುಟುಂಬಗಳ ಬದುಕಿಗೆ ಶಾಶ್ವತ ಪರಿಹಾರ ದೊರಕಿಲ್ಲ ಎಂಬುದು ಸ್ಥಳೀಯರ ಅಳಲು.

ಅನನುಭವಿ ಯಲಪ್ಪ 
ನಕ್ಸಲ್‌ ಯಲ್ಲಪ್ಪ ಎನ್‌ಕೌಂಟರ್‌ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆತ ಕೆಲವು ದಿನಗಳ ಹಿಂದಷ್ಟೇ ನಕ್ಸಲ್‌ ಸಂಘಟನೆಗೆ ಸೇರಿಕೊಂಡಿದ್ದ. ಸರಕಾರ ಈ ಎನ್‌ಕೌಂಟರನ್ನು ಸಮರ್ಥಿಸಿಕೊಂಡಿತ್ತು. ಈ ವೇಳೆ ಕೆಲ ಮಾನವ ಹಕ್ಕು ಹೋರಾಟಗಾರರು ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ಅಪಸ್ವರ ಎತ್ತಿದ್ದರು. ನಕ್ಸಲ್‌ ಸದಸ್ಯನ ನೆತ್ತರು ಹರಿದಿದ್ದರಿಂದ ಈ ಭಾಗದಲ್ಲಿ ಹೋರಾಟಕ್ಕೆ ಹಿನ್ನಡೆಯಾಯಿತು.

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.