ನಿನ್ನ ಹೆಜ್ಜೆಗಳ ಗುರುತು ಕಂಡು….


Team Udayavani, Oct 2, 2018, 6:00 AM IST

7.jpg

ಯಾಕೆ ಪ್ರೀತಿ ಮಾಡೋದು ಅಂತ ಕೇಳಿದರೆ ಏನು ಹೇಳಲಿ? ನಿನ್ನ ಪ್ರೀತಿಯ ಗಟ್ಟಿಗೆ ನಾನು ಸೋಲದೆ ಇರಲಾಗಲಿಲ್ಲ ಕಣೋ ಹುಡುಗ ಅಂತ ನೀನು ಅಂದಾಗ ಪಕ್ಕನೆ ನನ್ನ ಕಣ್ಣಲ್ಲಿ ಹನಿಯೊಂದು ಜಾರಿತು.

ಒಂಟಿ ಬರಗಾಲಕ್ಕೆ ಒಣಗಿ ಹೋಗಿದ್ದ ಕನಸುಗಳಿಗೆ ನಿನ್ನೆಯಷ್ಟೇ ಒಂದು ಹನಿಯಷ್ಟು ಚಿಗುರು ಮೂಡಿದೆ. ನೋಡು, ಹಾದಿಯೂ ಕೂಡ ಎಷ್ಟು ಸಂಭ್ರಮಿಸುತ್ತಿದೆ?! ಅದಕ್ಕೊಂದು ಫ‌ಲಿತಾಂಶದ ಖುಷಿ. ಹಾದಿಯ ಪಾಲಿಗಿದು ಡಿಸ್ಟಿಂಕ್ಷನ್‌. ನಾನು ಪಾಸಾದೆ. ನನ್ನ ಪ್ರೇಮಕ್ಕೆ, ಕನವರಿಕೆಗೆ ರ್‍ಯಾಂಕ್‌ ಪಡೆದ ಖುಷಿ. ಮಾರ್ಕ್ಸ್ ಕಾರ್ಡ್‌ ಕೊಡಲು ನೀನೇ ಬರುತ್ತೀಯಲ್ವಾ?

ನಿನ್ನನ್ನು ನೋಡಿದ್ದು ಊರ ದಾರಿಯ ಹುಡಿ ಮಣ್ಣಿನಲ್ಲಿ ಮೂಡಿದ ನಿನ್ನ ಪಾದಗಳ ಗುರುತಿನಲ್ಲಿ. ನಿನ್ನ ಹೆಜ್ಜೆ ಊರಿಸಿಕೊಂಡ ಮಣ್ಣು ಕೂಡ ಒಂದೊಳ್ಳೇ ಲಹರಿಯಲ್ಲಿತ್ತು. ಅಷ್ಟು ಚೆಂದದ ಪಾದಗಳನ್ನು ಈ ಬರಗೆಟ್ಟ ಕಣ್ಣುಗಳು ನೋಡಿಯೇ ಇರಲಿಲ್ಲ. ಊರ ತೇರಿನ ನೂರು ಹಬ್ಬಗಳು ಒಮ್ಮೆಲೇ ಆದಂಥ ಖುಷಿ ಮೊದಲ ಬಾರಿಗೆ ನನ್ನ ಕಣ್ಣಲ್ಲಿ. ಪಾದಗಳ ಗುರುತನ್ನು ಬೆನ್ನು ಹತ್ತಿದವನಿಗೆ ಸಿಕ್ಕಿದ್ದು ನೀನು. 

ನಿಜ ಹೇಳಾ!? ನಿನ್ನ ನೋಡಿದಾಗ ಮೊದಲ ಬಾರಿಗೆ ಅನಿಸಿದ್ದು- ಅದ್ಭುತ ರೂಪವತಿ ಅಂತ ಅಂದಾಜು ಮಾಡಿರಿ¤àವಲ್ಲ; ಅಂಥವಳು ದಿಢೀರ್‌ ಎದುರು ನಿಂತಾಗ ಆಗುವ ಪುಳಕ! ಅದೇ ಕಾರಣಕ್ಕೆ ನಾನು ನಿನ್ನ ಮುಂದೆ ಪೆಕರನಂತೆ ನಿಂತುಬಿಟ್ಟೆ. ಇವನ್ಯಾರೋ ಹುಚ್ಚನಿರಬೇಕು ಅಂತ ಎದೆಯ ಮೇಲಿಂದ ಹಾದು ಮಲಗಿದ್ದ ಜಡೆಯನ್ನು ಹಿಂದಕ್ಕೆ ಎಸೆದು ನೀನು ನಡೆದುಬಿಟ್ಟೆ. ಆಮೇಲೆ ನೋಡುತ್ತಾ ನಿಂತಿದ್ದು ನಿನ್ನ ಪಾದಗಳನ್ನು. ಈ ಪತ್ರದೊಂದಿಗೆ ನಾನು ಅವತ್ತು ಕ್ಲಿಕ್ಕಿಸಿದ ಹುಡಿ ಮಣ್ಣಿನಲ್ಲಿ ಮೂಡಿದ ನಿನ್ನ ಹೆಜ್ಜೆ ಗುರುತುಗಳ ಚಿತ್ರಗಳನ್ನು ಲಗತ್ತಿಸಿದ್ದೇನೆ ನೋಡು.

ನೀನು ಪರಿಚಯವಾದ ನಂತರ, ನಿರುದ್ಯೋಗಿಯಾಗಿದ್ದ ನನಗೊಂದು ಕೆಲಸ ಸಿಕ್ಕಿತು ನೋಡು. ಪ್ರೀತಿ ಗೆಲ್ಲಲು ಹೊರಟವನದು ಅದೆಂಥ ರಿಸ್ಕಿನ ಕೆಲಸ ಎಂಬುದು ಈ ಜನರಿಗೇನು ಗೊತ್ತು. ಅವರು ಗೇಲಿ ಮಾಡುವುದನ್ನು ಕಂಡು ಪಾಪ ಎನಿಸುತ್ತದೆ. ನಾನು ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ ಏಳು ವರ್ಷಗಳನ್ನು. ಅಷ್ಟು ದಿನಗಳಲ್ಲಿ ನನ್ನ ಪಾಲಿಗಿದ್ದಿದ್ದು ಕೇವಲ ಮಂಪರಿನಂಥ ಒಂದಿಡೀ ನಿದ್ದೆ, ಬದುಕಲು ನಾಲ್ಕಾರು ತುತ್ತು ಅನ್ನ, ರಾಶಿ ರಾಶಿ ಕನಸುಗಳು, ತೀರದ ಪ್ರಯತ್ನ ಮತ್ತು ನನ್ನ ಹುಚ್ಚಾಟಗಳಿಗೆ ಕ್ಯಾರೇ ಅನ್ನದ ನೀನು.

ಅವತ್ತು ನನ್ನ ಪ್ರೀತಿ ಅರಸುವಿಕೆಯ ಮ್ಯಾರಥಾನ್‌ ಓಟಕ್ಕೆ ಬ್ರೇಕ್‌ ಹಾಕಿಬಿಟ್ಟೆ ನೀನು. ಯಾಕೋ ಹುಡುಗ ಇಷ್ಟು ಹಠ? ನನ್ನಲ್ಲಿ ಅಂಥದ್ದು ಏನಿದೆ? ಯಾಕೆ ಹೀಗೆ ಸಾಯುವಷ್ಟು ಇಷ್ಟ ಪಡ್ತೀಯ? ಅಂದಾಗ ನನ್ನ ಬಳಿ ಮಾತುಗಳಿರಲಿಲ್ಲ. ಯಾಕೆ ಪ್ರೀತಿ ಮಾಡೋದು ಅಂತ ಕೇಳಿದರೆ ಏನು ಹೇಳಲಿ? ನಿನ್ನ ಪ್ರೀತಿಯ ಗಟ್ಟಿಗೆ ನಾನು ಸೋಲದೆ ಇರಲಾಗಲಿಲ್ಲ ಕಣೋ ಹುಡುಗ ಅಂತ ನೀನು ಅಂದಾಗ ಪಕ್ಕನೆ ನನ್ನ ಕಣ್ಣಲ್ಲಿ ಹನಿಯೊಂದು ಜಾರಿತು. ಕದ್ದು ಜಾರಿದ ಹನಿಯನ್ನು ಕೊನೆಗೂ ನೀನು ನೋಡಿಬಿಟ್ಟೆ. ಲೇ ಇದೇನೋ ಹುಡುಗನಾಗಿ ಕಣ್ಣೀರು? ಅಂದಾಗ ಮಾತಾಡದೆ ಸುಮ್ಮನೇ ನಿಲ್ಲುವುದಷ್ಟೇ ನನ್ನಿಂದ ಸಾಧ್ಯವಾಗಿದ್ದು. ನಿಧಾನಕ್ಕೆ ಎದ್ದ ನಿನ್ನ ಕೈಗಳು ನನ್ನ ಕೈ ಹಿಡಿದವು ನೋಡು, ಆಗ ನಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಬಿತ್ತು! 

ಸದಾಶಿವ್‌ ಸೊರಟೂರು.

ಟಾಪ್ ನ್ಯೂಸ್

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್

1-dsad

Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್‌ನಲ್ಲಿ ಸಿಲುಕಿಕೊಂಡ ಮಹಿಳೆ!!

CHandrababu-Naidu

Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

7

Test Cricket: ಲಂಕಾ-ನ್ಯೂಜಿಲ್ಯಾಂಡ್‌ ಟೆಸ್ಟ್‌ ಪಂದ್ಯಕ್ಕೆ ರೆಸ್ಟ್‌

Muloor: ಮಹಿಳೆಗೆ ರಿಕ್ಷಾ ಢಿಕ್ಕಿ ; ಗಾಯ

Muloor: ಮಹಿಳೆಗೆ ರಿಕ್ಷಾ ಢಿಕ್ಕಿ ; ಗಾಯ

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ

Thekkatte: ಇಸ್ಪೀಟು ಜುಗಾರಿ ಅಡ್ಡೆಯ ಮೇಲೆ ದಾಳಿ

Thekkatte: ಇಸ್ಪೀಟು ಜುಗಾರಿ ಅಡ್ಡೆಯ ಮೇಲೆ ದಾಳಿ

Mangaluru: ಬಾಲಕಿಯ ಅತ್ಯಾಚಾರ; ಆರೋಪಿಗೆ 20 ವರ್ಷ ಕಠಿನ ಶಿಕ್ಷೆ

Mangaluru: ಬಾಲಕಿಯ ಅತ್ಯಾಚಾರ; ಆರೋಪಿಗೆ 20 ವರ್ಷ ಕಠಿನ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.