![UDP-DC](https://www.udayavani.com/wp-content/uploads/2024/12/UDP-DC-415x249.jpg)
ಕೋರ್ಟ್ ಆವರಣದಲ್ಲಿ ಕತ್ತಿ ಝಳಪಿಸಿ ಜಡ್ಜ್ ಕುರ್ಚಿಯಲ್ಲಿ ಕುಳಿತ ರೌಡಿ
Team Udayavani, Oct 2, 2018, 5:20 PM IST
![arrested-600.jpg](https://www.udayavani.com/wp-content/uploads/2018/10/2/arrested-600.jpg)
ಶಿವಗಂಗಾ, ತಮಿಳು ನಾಡು : 24ರ ಹರೆಯದ ರೌಡಿಯೋರ್ವ ಕೋರ್ಟ್ ಆವರಣದಲ್ಲಿ ಕತ್ತಿ ಝಳಪಿಸಿ ಅಲ್ಲಿದ್ದವರಿಗೆ ಜೀವ ಬೆದರಿಕೆ ಹಾಕಿ ಬಳಿಕ ಅಲ್ಲಿಂದ ನೇರವಾಗಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟರ ಸ್ಥಾನದೆಡೆಗೆ ಧಾವಿಸಿ ಅವರ ಕುರ್ಚಿಯ ಮೇಲೆ ಕುಳಿತು ಘೋಷಣೆ ಕೂಗಿದ ಘಟನೆ ನಡೆದಿದೆ. ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಆತನು ಮತಿ ಭ್ರಮಿತನೆಂದು ಗೊತ್ತಾಗಿದೆ.
ಬಂಧಿತ ಮತಿ ಭ್ರಮಿತ ಆರೋಪಿಯನ್ನು ಮುನ್ಸಾಮಿ ಎಂದು ಗುರುತಿಸಲಾಗಿದೆ. ರೌಡಿಯಿಸಂ ಗಾಗಿ ಆತನನ್ನು ಬಂಧಿಸಲಾಗಿತ್ತು. ಆತನಿಗೆ ಜಾಮೀನು ಕೂಡ ಸಿಕ್ಕಿತ್ತು.
ಜಾಮೀನು ಸಿಕ್ಕೊಡನೆಯೇ ಆತ ಮೊದಲು ನೇರವಾಗಿ ದೇವಸ್ಥಾನಕ್ಕೆ ಧಾವಿಸಿ ಅಲ್ಲಿ ಕತ್ತಿ ಝಳಪಸಿ ಭಕ್ತಾದಿಗಳಿಗೆ ಬೆದರಿಕೆ ಹಾಕಿದ್ದ. ಅವನ ಅವೇಶ ನೋಡಿದ ಭಕ್ತರ ಬೆಚ್ಚಿ ಬಿದ್ದಿದ್ದರು.
ಬಳಿಕ ಅಲ್ಲಿಂದ ಆತ ಕೋರ್ಟ್ ಆವರಣದೆಡೆಗೆ ಬಂದು ಕತ್ತಿ ಝಳಪಿಸುತ್ತಾ ಎಲ್ಲರಿಗೂ ಪ್ರಾಣ ಬೆದರಿಕೆ ಒಡ್ಡಿದ. ಅನಂತರ ಮ್ಯಾಜಿಸ್ಟ್ರೇಟರ ಸೀಟಿನಲ್ಲಿ ಕೂತ ಆತನನ್ನು ಪೊಲೀಸರು ಕೂಡಲೇ ಆತನನ್ನು ಬಂಧಿಸಿದರು.
ಟಾಪ್ ನ್ಯೂಸ್
![UDP-DC](https://www.udayavani.com/wp-content/uploads/2024/12/UDP-DC-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್](https://www.udayavani.com/wp-content/uploads/2024/12/amith-shah-150x84.jpg)
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
![Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ](https://www.udayavani.com/wp-content/uploads/2024/12/pushpa-2-5-150x94.jpg)
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
![ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್](https://www.udayavani.com/wp-content/uploads/2024/12/kejriwal-6-150x93.jpg)
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
![Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ](https://www.udayavani.com/wp-content/uploads/2024/12/noida-2-150x92.jpg)
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
![Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು](https://www.udayavani.com/wp-content/uploads/2024/12/boat-2-150x83.jpg)
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.