ಕೆಲವು ತರಕಾರಿ ತುಟ್ಟಿ; ಮಲ್ಲಿಗೆ ಹೂವು ದುಬಾರಿ


Team Udayavani, Oct 14, 2018, 11:08 AM IST

14-october-4.gif

ಮಹಾನಗರ: ನವರಾತ್ರಿ ಹಬ್ಬ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳು ಮತ್ತು ಮಲ್ಲಿಗೆ ಹೂವು ತುಟ್ಟಿಯಾಗಿವೆ; ಕೆಲವೊಂದು ತರಕಾರಿಗಳ ತೀವ್ರ ಅಭಾವ ಕಂಡು ಬಂದಿದೆ. ನವರಾತ್ರಿಯ 9 ದಿನಗಳಲ್ಲಿ ತರಕಾರಿಗಳನ್ನು ಜಾಸ್ತಿ ಬಳಸುತ್ತಿದ್ದು, ಮಾಂಸಾಹಾರವನ್ನು ಕಡಿಮೆ ಬಳಕೆ ಮಾಡುತ್ತಿದ್ದಾರೆ. ಮನೆಗಳಲ್ಲಿ ಮಾತ್ರವಲ್ಲ, ಕೆಲವು ದೇವಸ್ಥಾನಗಳಲ್ಲಿಯೂ ಈಗ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಹಾಗಾಗಿ ತರಕಾರಿಗೆ ಬೇಡಿಕೆ ಜಾಸ್ತಿ.

ಕೆಲವು ತರಕಾರಿಗಳ ಉತ್ಪಾದನೆಯೂ ಕಡಿಮೆ ಆಗಿರುವುದು ಹಾಗೂ ದಸರಾ ಪ್ರಯುಕ್ತ ಬಯಲು ಸೀಮೆಯ ತರಕಾರಿಗಳಲ್ಲಿ ಅಧಿಕ ಪಾಲು ಮೈಸೂರಿಗೆ ರವಾನೆ ಆಗುತ್ತಿರುವುದರಿಂದ ನಗರದಲ್ಲಿ ಕೆಲವು ತರಕಾರಿಗಳ ಕೊರತೆ ಹಾಗೂ ಬೆಲೆ ಏರಿಕೆ ಆಗಲು ಕಾರಣವಾಗಿದೆ ಎಂದು ಸೆಂಟ್ರಲ್‌ ಮಾರ್ಕೆಟ್‌ ಮೂಲಗಳು ತಿಳಿಸಿವೆ.

200ರ ಗಡಿ ದಾಟಿದ ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು ಬೆಲೆ ಗಗನಕ್ಕೇರಿದ್ದು, 200 ರೂ. ಗಡಿ ದಾಟಿದೆ. ನುಗ್ಗೆ ಬೆಲೆ 100 ರೂ. ಗಳಿಗೆ ತಲುಪಿದೆ. ಸ್ಥಳೀಯ ಬೆಂಡೆ 140 ರೂ., ತೊಂಡೆ 100 ರೂ., ಮುಳ್ಳು ಸೌತೆ 100 ರೂ. ಬೀನ್ಸ್‌ 60 ರೂ., ಹಾಗಲ ಕಾಯಿ 60 ರೂ., ಕಾಲಿಫ್ಲವರ್‌ 60 ರೂ., ಅಸಲಂಡೆ 90 ರೂ., ಹರಿವೆ ದಂಟು 50 ರೂ. ಗಳಿಗೆ ತಲುಪಿದೆ.

ದುಬಾರಿ ತರಕಾರಿಗಳನ್ನು ಖರೀದಿ ಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಮನೆಗಳಲ್ಲಿ ನವರಾತ್ರಿ ಆಚರಿಸುವವರು ಮುಖ್ಯವಾಗಿ ಹೊಸ ತೆನೆ ಹಬ್ಬ ಆಚರಣೆ ಮಾಡುವವರು ಮಾತ್ರ ತುರ್ತು ಆವಶ್ಯಕತೆಯ ಹಿನ್ನೆಲೆಯಲ್ಲಿ ಖರೀದಿ ಮಾಡುತ್ತಾರೆ ಎನ್ನುತ್ತಾರೆ ಸೆಂಟ್ರಲ್‌ ಮಾರ್ಕೆಟ್‌ನ ವ್ಯಾಪಾರಿ ಡೇವಿಡ್‌ ಡಿ’ ಸೋಜಾ. ಗುಲಾಬಿ, ಅನಂತವೃಷ್ಟಿ, ಅರಳಿ ಮಾಲೆ, ಸೇವಂತಿಗೆ, ಕನಕಾಂಬರ (ಅಬ್ಬಲಿಗೆ), ಝೀನಿಯಾ, ತಾವರೆ, ಸಂಪಿಗೆ ಇತ್ಯಾದಿ ಹೂವುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ. 

ಮಲ್ಲಿಗೆ ದುಬಾರಿ
ನವರಾತ್ರಿ ಸಂದರ್ಭದಲ್ಲಿ ಶಾರದಾ ದೇವಿಯನ್ನು ಮಲ್ಲಿಗೆ ಅಥವಾ ಜಾಜಿ ಹೂವಿನಿಂದ ಅಲಂಕರಿಸಲಾಗುತ್ತಿದೆ. ಹಾಗಾಗಿ ಮಲ್ಲಿಗೆ ಹೂವು ದುಬಾರಿಯಾಗಿದೆ. ಮಲ್ಲಿಗೆ ಹೂವು ಒಂದು ಅಟ್ಟಿಗೆ 1,200 ರೂ. ಗಳಷ್ಟಿದೆ. ಆದರೆ ಕೊರತೆ ಇಲ್ಲ ಎಂದು ಕಾರ್‌ಸ್ಟ್ರೀಟ್‌ನ ಹೂವು ಮಾರುಕಟ್ಟೆಯ ವ್ಯಾಪಾರಿ ಸುರೇಶ್‌ ಪೈ ತಿಳಿಸಿದ್ದಾರೆ. 

ಟಾಪ್ ನ್ಯೂಸ್

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.