ಆರೋಗ್ಯ ವರದಿಗೆ ಆಧಾರ್‌ ಅಡ!


Team Udayavani, Oct 14, 2018, 12:36 PM IST

arogya.jpg

ಬೆಂಗಳೂರು: ಇಲ್ಲಿ ಆರೋಗ್ಯ ತಪಾಸಣೆ ವರದಿ ಬೇಕಿದ್ದರೆ, ಆಧಾರ್‌ ಕಾರ್ಡ್‌ ಅಥವಾ ಪಡಿತರಚೀಟಿ ಅಡಮಾನ ಇಡುವುದು ಕಡ್ಡಾಯ! ಅಷ್ಟೇ ಅಲ್ಲ, ಮೂಲ ದಾಖಲೆ ಸಲ್ಲಿಸಿದರೂ ತಪಾಸಣಾ ವರದಿ ನೋಡಲು ಮಾತ್ರ ಲಭ್ಯ. ತಮ್ಮೊಂದಿಗೆ ಕೊಂಡೊಯ್ಯುವುದು ನಿಷಿದ್ಧ. ಇಂತಹದೊಂದು ವಿಚಿತ್ರ ಷರತ್ತನ್ನು ಕೆ.ಸಿ.ಜನರಲ್‌ ಆಸ್ಪತ್ರೆ ವಿಧಿಸಿದೆ.

ಇದರಿಂದಾಗಿ ದೂರದ ಊರಿನಿಂದ ಬಂದವರು ಮೂಲ ದಾಖಲೆಗಳಿಲ್ಲದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತಪಾಸಣಾ ವರದಿ ಸಿಗದೇ ಅನೇಕ ರೋಗಿಗಳು ಅತ್ತ ವೈದ್ಯರ ಬಳಿಯೂ ಹೋಗುವುದಕ್ಕೆ ಆಗದೆ ಇತ್ತ ಮೂಲ ದಾಖಲೆಗಳನ್ನು ನೀಡಲಾಗದೇ ಪೇಚಾಡುತ್ತಿದ್ದ ಘಟನೆ ಆಸ್ಪತ್ರೆಯ ಕ್ಷ-ಕಿರಣ ವಿಭಾಗದ ಬಳಿ ಕಂಡುಬಂದವು.

ಪ್ರತಿನಿತ್ಯ 50ರಿಂದ 60 ರೋಗಿಗಳು ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಕ್ಷ-ಕಿರಣ ಪರೀಕ್ಷೆ ಮಾಡಿಸುತ್ತಾರೆ. ಕಳೆದ ನಾಲ್ಕು ದಿನದ ಈ ಹೊಸ ನಿಯಮದಿಂದ ಸಾಕಷ್ಟು ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಕೀಲು ಮೂಳೆ ಸಮಸ್ಯೆ ಎಂದು ಆಸ್ಪತ್ರೆಗೆ ಬಂದು ವೈದ್ಯರ ಬಳಿ ಹೋದಾ ಕೂಡಲೇ ಕ್ಷ-ಕಿರಣ ಪರೀಕ್ಷೆಗೆ ಬರೆಯುತ್ತಾರೆ. ಆನಂತರ ನೇರವಾಗಿ ಹೋಗಿ ಕ್ಷ ಕಿರಣ ಪರೀಕ್ಷೆ ಮಾಡಿಸಿದರೆ ಆ ವಿಭಾಗದ ಸಿಬ್ಬಂದಿ ಪರೀಕ್ಷೆಯ ವರದಿ ನೀಡಲು ಮೂಲ ಆಧಾರಕಾರ್ಡ್‌ ಅಥವಾ ಪಡಿತರ ಚೀಟಿ ಕೇಳುತ್ತಾರೆ.

ಆದನ್ನು ನೀಡಿದ ನಂತರ ಕ್ಷ-ಕಿರಣ ವರದಿ ಕೈಗೆ ಕೊಟ್ಟು, ವೈದ್ಯರ ಬಳಿ ಹೋಗಿ ತೋರಿಸಿಕೊಂಡು ಬಂದು ಮರಳಿಸಿ ನಿಮ್ಮ ಮೂಲ ದಾಖಲಾತಿಗಳನ್ನು ಹಿಂಪಡೆಯುವಂತೆ ತಿಳಿಸುತ್ತಾರೆ. ಒಂದು ವೇಳೆ ನಮ್ಮ ಬಳಿ ಮೂಲ ದಾಖಲೆಗಳು ಇಲ್ಲ ಎಂದರೆ ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು ಎನ್ನುತ್ತಾರೆ ಎಂದು ಅಳಲು ತೋಡಿಕೊಂಡರು ರೋಗಿ ಮಂಜಪ್ಪ.

ವರದಿ ಅಲಭ್ಯ: ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಕ್ಷ-ಕಿರಣ ವಿಭಾಗದಲ್ಲಿ ಅಡ ಇಟ್ಟುಕೊಳ್ಳುವ ಪದ್ಧತಿ ಇರುವುದರಿಂದ ತಪಾಸಣಾ ವರದಿಯನ್ನು ರೋಗಿಗಳು ಮನೆಗೆ ಕೊಂಡೋಯ್ಯಲು ನೀಡುವುದಿಲ್ಲ. ಹೀಗಾಗಿ, ಇಲ್ಲಿ ಮಾಡಿಸಿದ ತಪಾಸಣೆ ಮುಂದಿನ ಹಂತದ ಚಿಕಿತ್ಸೆಗೂ ಅಥವಾ ವೈದ್ಯರ ಬಳಿ ಎರಡನೇ ಅಭಿಪ್ರಾಯ ಪಡೆಯಲು ಸಾಧ್ಯವಾಗುವುದಿಲ್ಲ.

ಈ ಕುರಿತು ಪ್ರಶ್ನಿಸಿದರೆ ನಿಮ್ಮ ಸ್ವಂತಕ್ಕೆ ತಪಾಸಣಾ ವರದಿ ಬೇಕಾದರೆ ಖಾಸಗಿ ಆಸ್ಪತ್ರೆ ಅಥವಾ ಪ್ರಯೋಗಾಲಯಗಳಿಗೆ ಹೋಗಿ ಎಂದು ಸಿಬ್ಬಂದಿ ರೇಗಾಡುತ್ತಾರೆ ಎಂದು ಪರೀಕ್ಷೆಗೆ ಬಂದಿದ್ದ ಶೇಷಾದ್ರಿಪುರಂ ನಿವಾಸಿ ಮನೋಜ್‌ ದೂರಿದರು.

ಅಂಕಿ ಸಂಖ್ಯೆ ದಾಖಲೆಗಾಗಿ ಸಂಗ್ರಹ: ಎನ್‌ಎಚ್‌ಎಂ ಯೋಜನೆಯ ರಾಷ್ಟೀಯ ಉಚಿತ ರೋಗಪತ್ತೆ ಸೇವೆಗಳು ಕಾರ್ಯಕ್ರಮದಡಿಯಲ್ಲಿ ಆಸ್ಪತೆಯಲ್ಲಿ 58 ರೋಗಪತ್ತೆ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತಿದೆ. ಈ ಯೋಜನೆ ಅನ್ವಯ ಈ ಹಿಂದೆ 50 ರೂ. ಶುಲ್ಕ ಕಟ್ಟಬೇಕಿದ್ದ  ಕ್ಷ-ಕಿರಣ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಈ ಹಿಂದೆ 50 ರೂ. ಕಟ್ಟಿದರೆ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ರೋಗಿಗಳ ತಪಾಸಣಾ ವರದಿ ಬಿಟ್ಟು ಇನ್ನೆಲ್ಲಾ ವರದಿಗಳನ್ನು ರೋಗಿಗಳಿಗೆ ನೀಡುತ್ತಿದ್ದೆವು.

ಆದರೆ, ಈಗ ಉಚಿತ ಸೇವೆಯಾಗಿರುವುದರಿಂದ ನಮ್ಮ ವಿಭಾಗದಲ್ಲಿ ನಾವು ಮಾಡಿರುವ ಪರೀಕ್ಷೆಗಳ ಅಂಕಿ ಸಂಖ್ಯೆ ದಾಖಲೆ ಮಾಡಿಟ್ಟುಕೊಳ್ಳಲು ರೋಗಿಗಳ ಕ್ಷ-ಕಿರಣ ಫಿಲ್ಮ್ಗಳನ್ನು ಹಿಂದಿರುಗಿಸದೇ ನಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದೇವೆ. ಮೇಲಿನವರು ಆದೇಶ ನೀಡಿದರೆ ರೋಗಿಗಳಿಗೆ ವಿತರಣೆ ಮಾಡುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ವಿಭಾಗದ ಸಿಬ್ಬಂದಿ ತಿಳಿಸಿದ್ದಾರೆ.

ದುರುಪಯೋಗ ತಡೆಯಲು ಈ ಕ್ರಮ: ಪರೀಕ್ಷೆಗಳು ಉಚಿತವಾಗಿರುವುದರಿಂದ ಖಾಸಗಿ ಆಸ್ಪತ್ರೆ ರೋಗಿಗಳು ಹಾಗೂ ಕ್ಷ-ಕಿರಣ ಪರೀಕ್ಷಾ ವಿಭಾಗದ ಸಿಬ್ಬಂದಿಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದು ಈ ವಿಭಾಗದಲ್ಲಿ ಮಾತ್ರ ವರದಿಯನ್ನು ರೋಗಿಗಳಿಗೆ ನೀಡದೇ ದಾಖಲೆಯಾಗಿ ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚಿಸಿದ್ದೆವು. ಆದರೆ, ಸಮಸ್ಯೆಯಾಗುತ್ತಿರುವ ಕುರಿತು ಗಮನಕ್ಕೆ ಬಂದಿದ್ದು, ಕೂಡಲೇ ಅಗತ್ಯಕ್ರಮ ಕೈಗೊಳ್ಳುವೆ ಎಂದು ಕೆ.ಸಿ.ಜನರಲ್‌ ಆಸ್ಪತ್ರೆ ಮೇಲ್ವಿಚಾರಕ ಡಾ.ಭಾನುಮೂರ್ತಿ ತಿಳಿಸಿದ್ದಾರೆ. 

ಮಗಳು ಎದೆನೋವಿನಿಂದ ಬಳಲುತ್ತಿದ್ದು, ಪರೀಕ್ಷೆಗೆ ಬಂದಿದ್ದೇವೆ. ನಮಗೆ ಎಕ್ಸ್‌ರೇ ವರದಿ ನೀಡಲು ಮೂಲ ಆಧಾರ ಕಾರ್ಡ್‌ ಅಥವಾ ಪಡಿತರ ಚೀಟಿ ಕೇಳುತ್ತಿದ್ದಾರೆ. ನಮಗೆ ಈ ಬಗ್ಗೆ ಮಾಹಿತಿ ಇಲ್ಲ. ಪರೀಕ್ಷೆ ಮಾಡಿದ್ದಕ್ಕೆ ಹಣ ಪಾವತಿಸುತ್ತೇನೆ ಎಂದರೂ ವರದಿ ನೀಡುತ್ತಿಲ್ಲ.
-ದಿವ್ಯಾ. ಕುಣಿಗಲ್‌ ನಿವಾಸಿ

ಹೆಚ್ಚುವರಿ ಚಿಕಿತ್ಸೆಗೆ ಅಥವಾ ಎರಡನೇ ಅಭಿಪ್ರಾಯಕ್ಕೆ ಎಕ್ಸ್‌ರೇ ವರದಿ ಕೇಳಿದರೆ ಕೊಡುತ್ತಿಲ್ಲ. ಸೇವೆ ಉಚಿತವಾಗಿ ಇನ್ನಷ್ಟು ಸಮಸ್ಯೆಯಾಗಿದೆ. ನಮ್ಮ ವರದಿ ಇಟ್ಟುಕೊಂಡು ಏನು ಮಾಡುತ್ತಾರೆ ಎಂಬುದು ತಿಳಿಯುತ್ತಿಲ್ಲ. ಪ್ರಶ್ನೆ ಮಾಡಿದರೆ ಸಬೂಬು ನೀಡುತ್ತಾರೆ.
-ಓಬಳೇಶ್‌, ಮಲ್ಲೇಶ್ವರ ನಿವಾಸಿ

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

vidhana-Soudha

Karnataka Government: 21 ಐಎಎಸ್‌ ಅಧಿಕಾರಿಗಳ ವರ್ಗ

rahul gandhi (2)

UP; ಹಾಥರಸ್‌ ಕಾಲ್ತುಳಿತಕ್ಕೆ ಆಡಳಿತ ವೈಫ‌ಲ್ಯ ಕಾರಣ: ರಾಹುಲ್‌

1-weww

Bhojashala dispute: ಜೈನರ ಪರ ಸಲ್ಲಿಸಿದ್ದ ಅರ್ಜಿ ಹಿಂದಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-bng

Bengaluru: ಅಕ್ರಮ ಆಸ್ತಿ: ಬೆಸ್ಕಾಂ ಎಇಇಗೆ 3 ವರ್ಷ ಸಜೆ,1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್‌

10-bng

Bengaluru: ಶೋಕಿಲಾಲನಿಗೆ ನಕಲಿ ಎ.ಕೆ.47 ಕೊಡಿಸಿದ್ದ ವ್ಯಕ್ತಿಗೆ ನೋಟಿಸ್‌

9-crime

Bengaluru: ಬೈಕ್‌ಗೆ ಲಾರಿ ಡಿಕ್ಕಿ : ರಿಯಲ್‌ ಎಸ್ಟೇಟ್‌ ಏಜೆಂಟ್‌ ಸಾವು

8-bng

Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

7-bng

Bengaluru: ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ 2 ಮೊಬೈಲ್‌

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

1-ree

Sworn in; ಜೈಲಲ್ಲಿದ್ದೇ ಆಯ್ಕೆ ಆಗಿದ್ದ ಅಮೃತ್‌ಪಾಲ್‌, ರಶೀದ್‌ ಸಂಸದರಾಗಿ ಪ್ರಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.