ಹೂ ಮಾರುವ ಹುಡುಗಿ ಪಾಠ ಕಲಿಸಿದಳು


Team Udayavani, Oct 23, 2018, 6:00 AM IST

2.jpg

ಹಲವಾರು ಆಸೆ ಕನಸುಗಳನ್ನು ಹೊತ್ತು ಬೆಂಗಳೂರಿಗೆ ಪ್ರಯಾಣ ಬೆಳೆಸುವವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚುತ್ತಿದೆ. ಅದರಲ್ಲೂ ಅಧ್ಯಯನಕ್ಕೆಂದು ಬರುವ ಎಳೆ ಮನಸ್ಸುಗಳಿಗೆ ಬೆಂಗಳೂರು ಅವಕಾಶಗಳ ಬಾಗಿಲಿದ್ದ ಹಾಗೆ. ಮಸ್ತಿ ಮಾಡಲೆಂದೇ ಬರುವವರೂ ಇದ್ದಾರೆ. ಇಲ್ಲಿನ ಪಾರ್ಕ್‌, ಮಾಲ್‌ಗ‌ಳು, ಗಗನಚುಂಬಿ ಕಟ್ಟಡಗಳು ನಮ್ಮಂಥ ಹಳ್ಳಿ ಜನರಿಗೆ ವಿದೇಶ ಪ್ರವಾಸದಂತೆ ಭಾಸವಾಗುತ್ತದೆ. 

ಶಾಪಿಂಗ್‌ ಮಾಡುವವರ ಸ್ವರ್ಗವೆಂದೇ ಪರಿಗಣಿತವಾದ ಎಂ.ಜಿ ರೋಡ್‌ನ‌ಲ್ಲಿ ನನಗೊಂದು ವಿಚಿತ್ರ ಅನುಭವವಾಯಿತು. ರವಿವಾರ ಕಾಲೇಜಿಗೆ ರಜೆ ಇದ್ದಿದ್ದರಿಂದ ನನ್ನ ಸ್ನೇಹಿತೆಯರೆಲ್ಲ ಎಂ.ಜಿ ರೋಡ್‌ಗೆ ಹೋಗುವುದೆಂದು ತೀರ್ಮಾನಿಸಿದರು. ಮೆಟ್ರೊ ರೈಲಿನಲ್ಲಿ ಹೊರಟೆವು. ನನಗೆ ಅದೇ ಮೊದಲ ಮೆಟ್ರೊ ರೈಲು ಪ್ರಯಾಣ. ಸೆಲ್ಫಿ ಕ್ಲಿಕ್ಕಿಸಲು ಇದಕ್ಕಿಂತ ಒಳ್ಳೆಯ ಕಾರಣ ಬೇಕೆ? ಅರ್ಧ ಗಂಟೆಯೊಳಗೆ ಎಂ.ಜಿ ರೋಡ್‌ ತಲುಪಿದೆವು.

ಅಲ್ಲಿನ ಜನರ ಗಮ್ಮತ್ತೇ ಬೇರೆ ಬಿಡಿ. ಯಾರೊಬ್ಬರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಓಡಾಡುತ್ತಿರುತ್ತಾರೆ. ಅವರ ಬಟ್ಟೆ, ಹಾವಭಾವಗಳನ್ನು ದಿಟ್ಟಿಸುತ್ತಾ, ಕಣ್ಣು ಕುಕ್ಕುವ ಅಂಗಡಿ ಮಳಿಗೆಗಳನ್ನು ಬಾಯಿ ಬಿಟ್ಟುಕೊಂಡು ನೋಡುತ್ತಾ ಹೋಗುತ್ತಿರುವಾಗ ಪುಟ್ಟ ಹುಡುಗಿಯೊಬ್ಬಳು ನಮ್ಮನ್ನು ತಡೆದಳು. ತಲೆ ತಗ್ಗಿಸಿ ನೋಡಿದೆ. “ಅಕ್ಕ ಹೂ ತಗೋ, ಬರೀ 20 ರೂಪಾಯಿ, ಊಟ ಮಾಡಿಲ್ಲ ತಗೋಟ ಎಂದು ಗಂಟು ಬಿದ್ದಳು.

“ನನಗೆ ಹೂವು ಬೇಡಮ್ಮ, ಅದನ್ನು ತಗೊಂಡು ನಾನೇನು ಮಾಡಲಿ?’ ಎಂದು ಮುಂದೆ ಹೋದೆ. ಆದರೆ ಅವಳ ಹಸಿವು ನಮ್ಮ ಹೆಜ್ಜೆಗೆ ಅಡ್ಡಗಾಲಿಕ್ಕಿತ್ತು. ನಮ್ಮಿಬ್ಬರ ಮಾತಿನ ಚಕಮಕಿಯಲ್ಲಿ ಜಯ ಅವಳದಾಯಿತು.

ನನಗೆ ಹೂವಿನ ಅವಶ್ಯಕತೆ ಇಲ್ಲದಿದ್ದರಿಂದ ಆ ಪುಟ್ಟ ಹುಡುಗಿಗೆ “ಈ 20 ರೂಪಾಯಿ ತಗೋ. ನನಗೆ ಹೂವು ಬೇಡ ಎಂದು 20 ರೂಪಾಯಿಯನ್ನು ಅವಳ ಕೈಲಿಟ್ಟು ಮುಂದೆ ಹೋದೆ. ಅಷ್ಟರೊಳಗೆ ಆ ಪುಟ್ಟ ಹುಡುಗಿ ಹಿಂದಿನಿಂದ ಓಡಿ ಬಂದು ಹೂವನ್ನು ಕೈಲಿಟ್ಟು ಹೋದಳು. ಮುಖದಲ್ಲೊಂದು ನಿಸ್ವಾರ್ಥ ಪ್ರಾಮಾಣಿಕತೆಯ ನಗುವೊಂದಿತ್ತು. ನಾನು ಹಿಂದೆ ತಿರುಗಿ ನೋಡುತ್ತಲೇ ಇದ್ದೆ. ಆ ಪುಟ್ಟ ಹುಡುಗಿ, ಮಹಾತ್ಮ ಗಾಂಧಿ ರಸ್ತೆಯಲ್ಲಿ ಪ್ರಾಮಾಣಿಕತೆಯ ಪಾಠವನ್ನು ಸದ್ದಿಲ್ಲದೆ ಹೇಳಿಕೊಟ್ಟು ಹೋಗಿದ್ದಳು.

ಅಕ್ಷತ ಕುಲಕರ್ಣಿ, ಹೊಸಪೇಟೆ

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.