ಕಣ್ಮನ ರಂಜಿಸಿದ ಕೃಷ್ಣಲೀಲೆ   – ಕಂಸವಧೆ


Team Udayavani, Oct 26, 2018, 1:00 PM IST

kansa-lile-1.jpg

ಯಕ್ಷ ಕಲಾಭಿಮಾನಿ ಬಳಗ ಟೌನ್‌ ಹಾಲ್‌ ಉಡುಪಿ ಇವರ ಆಶ್ರಯದಲ್ಲಿ ಉಡುಪಿಯ ಟೌನ್‌ಹಾಲ್‌ನಲ್ಲಿ ಪ್ರದರ್ಶನಗೊಂಡ “ಕೃಷ್ಣಲೀಲೆ-ಕಂಸವಧೆ’ ಅಖ್ಯಾನ ಜನ ಮನ ರಂಜಿಸಿತು.

ಕೃಷ್ಣಲೀಲೆ ಪ್ರಸಂಗ ರಾಮಕೃಷ್ಣ ಹೆಗಡೆ ಹಿಲ್ಲೂರು ಇವರ ಕಂಠಸಿರಿಯಲ್ಲಿ ಉತ್ತಮವಾಗಿ ಪ್ರದರ್ಶನಗೊಂಡಿತು. ಬಾಲಕೃಷ್ಣನಾಗಿ ಬಾಲ ಪ್ರತಿಭೆ ಸ್ವಸ್ತಿಶ್ರೀಯವರ ಅಭಿನಯ ಉತ್ತಮವಾಗಿತ್ತು. ಯಶೋಧ ಪಾತ್ರಕ್ಕೆ ಜೀವ ತುಂಬಿದವರು ಅರಳು ಪ್ರತಿಭೆ ಸುಧೀರ್‌ ಉಪ್ಪೂರ. ಮಾಯಾ ಪೂತನಿಯಾಗಿ ನಿಲ್ಕೋಡುರವರ ಭಾವಾಭಿನಯ ಮನಸಿನಲ್ಲಿ ಉಳಿಯುವಂತಿತ್ತು. ಮುಂದೆ ಕೃಷ್ಣನ ಪಾತ್ರ ಮಾಡಿದವರು ಕಡಬಾಳ ಉದಯ ಹೆಗಡೆಯವರ ನಾಟ್ಯಾಭಿನಯ ಮನಸೂರೆಗೊಂಡಿತ್ತು. ವಿಜಯನ ಪಾತ್ರದಲ್ಲಿ ಕಾಸರಕೋಡು ಶ್ರೀಧರ ಭಟ್‌ ಹಾಸ್ಯದ ಹೊನಲನ್ನು ಹರಿಸಿದರು.

ಗೋಪಿಕಾ ಸ್ತ್ರೀಯರಾಗಿ ನಿಲ್ಕೋಡು ಬೀಜಮಕ್ಕಿ ಇವರ ನಾಟ್ಯ- ಮಾತು ಹಿತಮಿತವಾಗಿತ್ತು. ಶಕಟಾ ಧೇನುಕರ ಪಾತ್ರ ತಕ್ಕಮಟ್ಟಿಗೆ ಯಶಸ್ಸು ಕಂಡಿತು. ನಂತರ ಪ್ರದರ್ಶಗೊಂಡ ಕಂಸವಧೆ ಪ್ರಸಂಗವು ಅದ್ಭುತವಾಗಿ ಮೂಡಿ ಬಂತು. ಜನ್ಸಾಲೆ ಭಾಗವತರ ಏರು ಶೃತಿಯಲ್ಲಿ ಹಾಡಲ್ಪಟ್ಟ ಪದ್ಯಗಳು ಮಂತ್ರ ಮುಗ್ಧಗೊಳಿಸಿತು. ಕಂಸನಾಗಿ ಮೆರೆದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ನಾಟ್ಯ ಹಾಗೂ ಮಾತುಗಾರಿಕೆ ಅದ್ಭುತವಾಗಿತ್ತು. ಏನ ಮಾಡಲೀ ನಾನು… ನೆತ್ತಿಗೆ ತೈಲವ ಒತ್ತುತ್ತಾ… ಉರಿಯುವುದೊಂದೇ ದೀಪವು… ಮುಂತಾದ ಪದ್ಯಗಳಿಗೆ ಅವರ ಭಾವಾಭಿನಯ ವರ್ಣಿಸಲಸದಳ. 

ಕಂಸನು ಅಂತ್ಯಕಾಲದಲ್ಲಿ ಕಾಣುವ ದುಃಸ್ವಪ್ನ, ದುಗುಡ, ಭಯವನ್ನು ಅದ್ಭುತ ಅಭಿನಯದ ಮೂಲಕ ಅಭಿವ್ಯಕ್ತಿಗೊಳಿಸಿದರು. ಕೃಷ್ಣನಾಗಿ ನಾಟ್ಯಚತುರ ತೀರ್ಥಹಳ್ಳಿ ಗೋಪಾಲಾಚಾರ್ಯರ ಪಾದರಸದಂತ ಚುರುಕಿನ ಪಾದಚಲನೆಯ ನಾಟ್ಯಾಭಿನಯ ಪರಿಪೂರ್ಣವಾಗಿತ್ತು. ಬಲರಾಮನಾಗಿ ಯುವ ಕಲಾವಿದ ತೊಂಬಟ್ಟು ವಿಶ್ವನಾಥ ಆಚಾರ್ಯರ ನಾಟ್ಯಾಭಿನಯ ಮೋಹಕವಾಗಿತ್ತು. ರಾಜ ರಜಕನಾಗಿ ಕಾಸರಕೋಡು ಶ್ರೀಧರ ಭಟ್‌ ಮೊನಚಾದ
ಮಾತುಗಳಿಂದ ರಂಜಿಸಿದರು. ಚೆಂಡೆ ಮದ್ದಳೆಯಲ್ಲಿ ಸಹಕರಿಸಿದವರು ಸುನಿಲ್‌ ಭಂಡಾರಿ ಕಡತೋಕ, ಮತ್ತು ಶಿವಾನಂದ ಕೋಟ. 

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.