ವ್ಯರ್ಥವಾಗುತ್ತಿದೆ ಲಕ್ಷಾಂತರ ರೂ. ಮೌಲ್ಯದ ಸರಕಾರಿ ಆಸಿಪಾಸ್ತಿ 


Team Udayavani, Oct 27, 2018, 11:07 AM IST

27-october-5.gif

ಪುತ್ತೂರು: ಪುತ್ತೂರಿಗೆ ಯಾವುದೇ ಸರಕಾರಿ ವ್ಯವಸ್ಥೆಗಳು ಬರುವ ಸಂದರ್ಭದಲ್ಲಿ ಅದರ ಅನುಷ್ಠಾನಕ್ಕೆ ಜಾಗವಿಲ್ಲ ಎನ್ನುವ ಕೂಗು ಕಂದಾಯ ಇಲಾಖೆಯ ಕಡೆಯಿಂದ ಬರುತ್ತದೆ. ಆದರೆ ಇರುವ ಸರಕಾರಿ ಜಾಗ, ಕಟ್ಟಡ ನಿರುಪಯುಕ್ತವಾಗಿ ವ್ಯರ್ಥವಾಗುತ್ತಿದ್ದರೂ ಅದಕ್ಕೆ ಉತ್ತರವೇ ಇಲ್ಲಿಲ್ಲ!

ನಗರದ ದರ್ಬೆ ಸಮೀಪ ಸರಕಾರಿ ಅಧಿಕಾರಿಗಳ ವಸತಿ ಕಟ್ಟಡಗಳಿವೆ. ಇದರಲ್ಲಿ ನ್ಯಾಯಾಧೀಶರಿಗೆ ಸಂಬಂಧಪಟ್ಟ ವಸತಿ ಕಟ್ಟಡಗಳು ಹಲವು ವರ್ಷಗಳಿಂದ ನಿರುಪಯುಕ್ತವಾಗಿದೆ. ಲಕ್ಷಾಂತರ ರೂ. ವೆಚ್ಚದ ಸರಕಾರಿ ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ಸೂಕ್ತ ನಿರ್ವಹಣೆಯ ಕೊರತೆಯಿಂದ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಜತೆಗೆ ಈ ಕಟ್ಟಡಗಳು ಈಗ ಅನೈತಿಕ ವ್ಯವಹಾರದ ಆಶ್ರಯತಾಣವಾಗಿ ಪರಿವರ್ತನೆಗೊಂಡಿದೆ.

ನ್ಯಾಯಾಧೀಶರ ವಸತಿಗೆ ಸಂಬಂಧಪಟ್ಟ ಈ ಮೂರು ವಸತಿ ಕಟ್ಟಡಗಳಲ್ಲಿ 2 ಕಟ್ಟಡಗಳನ್ನು 1966ರಲ್ಲಿ ನಿರ್ಮಿಸಲಾಗಿದ್ದರೆ, ಇನ್ನೊಂದು ಕಟ್ಟಡವನ್ನು 1980ರಲ್ಲಿ ನಿರ್ಮಿಸಲಾಗಿದೆ. ಸುಮಾರು 50 ಸೆಂಟ್ಸ್‌ ಜಾಗದಲ್ಲಿರುವ ಕಟ್ಟಡದಲ್ಲಿ ಸಾಕಷ್ಟು ಸ್ಥಳಾವಕಾಶಗಳಿವೆ. ಆದರೆ ನಿರ್ವಹಣೆಯ ಕೊರತೆಯಿಂದ ಕಟ್ಟಡ ಶಿಥಿಲಗೊಳ್ಳುತ್ತಿದೆ. ಕೆಲವು ಕಡೆ ಛಾವಣಿ ಕುಸಿತ ಉಂಟಾಗಿದೆ. ಆದರೆ ಬಳಸಿಕೊಳ್ಳುವ ಇರಾದೆ ಇದ್ದರೆ ಸಮರ್ಪಕಗೊಳಿಸುವಷ್ಟು ಸುಸ್ಥಿತಿಯಲ್ಲಿದೆ.

ಸರಕಾರಿ ಆಸ್ತಿ ವ್ಯರ್ಥವಾಗುತ್ತಿರುವ ಕುರಿತು ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿಯು ಕಳೆದ 4 ವರ್ಷಗಳಿಂದ ಹೋರಾಟವನ್ನೇ ನಡೆಸುತ್ತಿದೆ. ಕಟ್ಟಡವನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿ ಅದರ ಪ್ರಗತಿಯ ಕುರಿತು ಬೆನ್ನುಹತ್ತಿದೆ. ಆದರೆ ಯಾವುದೇ ರೀತಿಯ ಅಂತಿಮ ಫ‌ಲಿತಾಂಶ ದೊರೆತಿಲ್ಲ.

ಅನುಮೋದನೆ ಸಿಗದ ಸಮಸ್ಯೆ
2014 -15ರ ಸಾಲಿನಲ್ಲಿ ಈ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ರೂ. ಮಂಜೂರಾಗಿತ್ತು. ಆದರೆ ಪುತ್ತೂರಿನಲ್ಲಿ ಜಿಲ್ಲಾ ನ್ಯಾಯಾಲಯ ಆಗುವ ಸಂದರ್ಭದಲ್ಲಿ ಹೆಚ್ಚುವರಿ 8 ವಸತಿಗೃಹಗಳು ಬೇಕಾಗುವುದರಿಂದ ಅದಕ್ಕೆ ಮತ್ತೆ 6 ಕೋಟಿ ರೂ. ಆವಶ್ಯಕತೆ ಇದೆ ಎಂದು ಪ್ರಸ್ತಾವನೆ ಕಳುಹಿಸಲಾಗಿತ್ತು. ಬನ್ನೂರು ಆನೆಮಜಲಿನಲ್ಲಿ ಪ್ರತ್ಯೇಕ ನ್ಯಾಯಾಲಯ ಸಂಕೀರ್ಣವೂ ನಿರ್ಮಾಣವಾಗುವುದರಿಂದ 2017 -18ನೇ ಸಾಲಿನಲ್ಲಿ ಇಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ 5.35 ಕೋಟಿ ರೂ. ಪ್ರಸ್ತಾವನೆಯನ್ನು ಮತ್ತೆ ಕಳುಹಿಸಲಾಗಿದೆ.

ಪ್ಲ್ಯಾನ್‌ ಬದಲಾವಣೆ ಮಾಡಿರುವ ಕಾರಣದಿಂದ ಆಡಳಿತಾತ್ಮಕ ಅನುಮೋದನೆ ಲಭಿಸದೆ ಇನ್ನೂ ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ಹಾಲಿ ಲೋಕೋಪಯೋಗಿ ಇಲಾಖೆಯ ಮೇಲಧಿಕಾರಿಗಳ ಕಡೆಯಿಂದ ಯಾವುದೇ ಸೂಚನೆಗಳು ಬಾರದಿರುವುದರಿಂದ ಮತ್ತು ಹೊಸದಾಗಿ ಅಭಿವೃದ್ಧಿ ಕಾರ್ಯಕ್ಕೆ ಅನುಮೋದನೆ ಸಿಗದೇ ಇರುವುದರಿಂದ ಹಳೆಯ ಕಟ್ಟಡವನ್ನು ತೆರವುಗೊಳಿ ಸಲು ಸಾಧ್ಯವಾಗಿಲ್ಲ ಎನ್ನುವುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮಾತು.

ಅನೈತಿಕ ಚಟುವಟಿಕೆಗಳ ತಾಣ!
ಕಟ್ಟಡಗಳು ಇರುವ ಅಷ್ಟೂ ಜಾಗದಲ್ಲಿ ವ್ಯಾಪಕ ಪೊದೆಗಳು ಬೆಳೆದಿವೆ. ನಿರ್ವಹಣೆ ಇಲ್ಲದೆ ಅನೈತಿಕ ವ್ಯವಹಾರಗಳನ್ನು ನಡೆಸುವವರಿಗೆ ಆಶ್ರಯ ತಾಣವಾಗಿ ಈ ಕಟ್ಟಡಗಳು ಪರಿವರ್ತನೆಗೊಂಡಿದ್ದು, ಕಟ್ಟಡಗಳ ಒಳಗೆ ಕಂಡುಬರುವ ವಸ್ತುಗಳು, ಗೋಡೆ ಬರಹಗಳು ಇದಕ್ಕೆ ಸಾಕ್ಷಿ. ಹೆದ್ದಾರಿಗೂ ಸಮೀಪದಲ್ಲೇ ಇರುವುದರಿಂದ ರಾತ್ರಿಯಾದ ಮೇಲೆ ಅನೈತಿಕ ವ್ಯವಹಾರಗಳನ್ನು ಮಾಡುವವರು ಇಲ್ಲಿ ಕಂಡು ಬರುತ್ತಾರೆ ಎನ್ನುವುದು ಸ್ಥಳೀಯರ ಆರೋಪ.

 ಕ್ರಮಕ್ಕೆ ಸೂಚನೆ
ಸರಕಾರಿ ಕಟ್ಟಡ ವ್ಯರ್ಥವಾಗುತ್ತಿರುವ ಕುರಿತು ಗಮನಕ್ಕೆ ಬಂದಿಲ್ಲ. ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಸೂಚನೆ ನೀಡುತ್ತೇನೆ. ಹಳೆಯ ಕಟ್ಟಡವನ್ನು ಕೆಡವಲು ತತ್‌ಕ್ಷಣ ಪಿಡಬ್ಲ್ಯುಡಿ ಇಲಾಖೆಗೆ ಹಾಗೂ ಅದರ ಮೇಲಧಿಕಾರಿಗಳಿಗೆ ಪತ್ರ ಬರೆದು ಸೂಚಿಸಲಾಗುವುದು.
ಎಚ್‌.ಕೆ. ಕೃಷ್ಣಮೂರ್ತಿ
ಪುತ್ತೂರು ಸಹಾಯಕ ಕಮಿಷನರ್‌

ನಿರಂತರ ಒತ್ತಡ
ಸರಕಾರ ವ್ಯವಸ್ಥೆ ವ್ಯರ್ಥವಾಗುತ್ತಿದೆ. ಹೊಸ ಕಟ್ಟಡ ಮಂಜೂರಾದ ಬಳಿಕ ಕಟ್ಟಡವನ್ನು ತೆಗೆಯುತ್ತೇವೆ. ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಪಿಡಬ್ಲ್ಯುಡಿ ಇಲಾಖೆಯವರು ಹೇಳುತ್ತಿದ್ದಾರೆ. ಹಾಲಿ ಆನೆಮಜಲುನಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗುತ್ತಿರುವುದರಿಂದ ನ್ಯಾಯಾಧೀಶರಿಗೆ ಸಂಬಂಧಪಟ್ಟಂತೆ ಆನೆಮಜಲಿನಲ್ಲಿ 3 ಹಾಗೂ ದರ್ಬೆಯಲ್ಲಿ 5 ವಸತಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಹೋಗಿದೆ. ಆಡಳಿತಾತ್ಮಕ ಅನುಮೋದನೆ ಹಾಗೂ ಜಾರಿಗೆ ಸರಕಾರದ ಮಟ್ಟದಲ್ಲಿ ನಿರಂತರ ಒತ್ತಡ ಹಾಕುತ್ತಿದ್ದೇವೆ.
– ಸಂಪತ್‌ ಕುಮಾರ್‌ ಜೈನ್‌ ಕಲಿಯುಗ ಸೇವಾ ಸಮಿತಿ, ಚಿಕ್ಕಮುಡ್ನೂರು

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Tirupati Case; Hurtful work for Hindus by converted Jagan: KS Eshwarappa

Tirupati Case; ಮತಾಂತರಗೊಂಡ ಜಗನ್‌ ರಿಂದ ಹಿಂದೂಗಳಿಗೆ ನೋವುಂಟು ಮಾಡುವ ಕೆಲಸ: ಈಶ್ವರಪ್ಪ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Bellary; poor food supply; Protest in SC, ST hostel

Bellary; ಕಳಪೆ ಆಹಾರ ಪೂರೈಕೆ; ಎಸ್‌ಸಿ, ಎಸ್ಟಿ ವಸತಿ ನಿಲಯದಲ್ಲಿ ಪ್ರತಿಭಟನೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

West Bengal ಕೋರ್ಟ್‌ ಗಳಲ್ಲಿ ಭಯದ ವಾತಾವರಣ-ಸಿಬಿಐಗೆ ಸುಪ್ರೀಂಕೋರ್ಟ್ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.