ಸಂಚಾರಿ ನಿಯಮ ಕಡ್ಡಾಯ ಪಾಲಿಸಿ
Team Udayavani, Oct 27, 2018, 11:34 AM IST
ಹುಣಸೂರು: ನಗರದಲ್ಲಿ ಪೊಲೀಸ್ ಇಲಾಖೆ ರೋಟರಿ ಶಾಲಾ ವಿದ್ಯಾರ್ಥಿಗಳ ಸಹಯೋಗದಲ್ಲಿ ದ್ವಿಚಕ್ರವಾಹನ ಸವಾರರು “ಹೆಲ್ಮೆಟ್ ಧರಿಸಿ-ಪ್ರಾಣ ಉಳಿಸಿಕೊಳ್ಳಿ’ ಕುರಿತ ಜಾಗೃತಿ ಅಭಿಯಾನ ಜಾಥಾ ನಡೆಸಿದರು. ನಗರಸಭೆ ಆವರಣದಿಂದ ಹೊರಟ ಜಾಥಾಕ್ಕೆ ಶಾಸಕ ಎಚ್.ವಿಶ್ವನಾಥ್ ಸ್ವತಃ ಹೆಲ್ಮೆಟ್ ಧರಿಸಿಕೊಂಡು ಸ್ಕೂಟರ್ ರೈಡ್ ಮಾಡಿ, ನಗರಸಭಾ ಸದಸ್ಯೆ ಸುನಿತಾಗೆ ಹೆಲ್ಮೆಟ್ ನೀಡಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ವಿಶ್ವನಾಥ್, ತಾಲೂಕಿನಲ್ಲಿ ಹೆಲ್ಮೆಟ್ ಧರಿಸದೆ 25 ದಿನಗಳಲ್ಲಿ 10ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವುದು ನೋವಿನ ಸಂಗತಿ, ಅಲ್ಲದೆ ಬಹುತೇಕರು ವಿಮೆ, ಡ್ರೈವಿಂಗ್ ಲೈಸನ್ಸ್ ಸೇರಿದಂತೆ ದಾಖಲಾತಿಗಳಿಲ್ಲದೆ ಹಾಗೂ ಮದ್ಯಸೇವನೆ ಮಾಡಿ ವಾಹನ ಚಲಾಯಿಸುವುದು, ಚಿಕ್ಕ ಮಕ್ಕಳು ದ್ವಿಚಕ್ರವಾಹನ ಓಡಿಸುವುದು ಹಾಗೂ ಅಲ್ಲಲ್ಲಿ ವೀಲಿಂಗ್, ತ್ರಿಬಲ್ ರೈಡ್ ಮಾಡುವುದು ಅಪಾಯಕಾರಿ. ಯುವ ಪಡೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದರು.
ಹೆಲ್ಮೆಟ್ ಧರಿಸಿ ಜಾಥಾ: ನಗರಸಭೆ ಮೈದಾನದಿಂದ ಹೊರಟ ಜಾಥಾದಲ್ಲಿ 20ಕ್ಕೂ ಹೆಚ್ಚು ಪೊಲೀಸರು ಹೆಲ್ಮೆಟ್ ಧರಿಸಿ ಬೈಕ್ ಓಡಿಸಿದರೆ, ರೋಟರಿ ಶಾಲಾ ಮಕ್ಕಳು ಹೆಲ್ಮೆಟ್ ಧರಿಸಿರಿ-ಪ್ರಾಣ ಉಳಿಸಿಕೊಳ್ಳಿ, ರಸ್ತೆ ನಿಯಮ ಪಾಲಿಸಿ-ಆಗುವ ಅನಾಹುತ ತಪ್ಪಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರ ಗಮನ ಸೆಳೆದರು.
ನಗರಸಭೆ ಅಧ್ಯಕ್ಷ ಎಚ್.ವೈ.ಮಹದೇವ್, ಡಿವೈಎಸ್ಪಿ ಭಾಸ್ಕರ ರೈ, ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ, ರೋಟರಿ ಕಾರ್ಯದರ್ಶಿ ಸುನಿತಾ, ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್, ಸದಸ್ಯ ಪ್ರೇಮೇಗೌಡ, ನಗರಸಭಾ ಸದಸ್ಯರಾದ ಕೃಷ್ಣರಾಜಗುಪ್ತ, ಶರವಣ, ಯೋಗಾನಂದ, ಶಿವಕುಮಾರ್, ಎಸ್ಐಗಳಾದ ಮಹೇಶ್, ಶಿವಪ್ರಕಾಶ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.