ಭತ್ತಕ್ಕೆ ರೋಗ: ಮುನ್ನೆಚ್ಚರಿಕೆಗೆ ತಜ್ಞರ ಸಲಹೆ


Team Udayavani, Oct 29, 2018, 12:28 PM IST

m5-batta.jpg

ಹುಣಸೂರು: ಭತ್ತಕ್ಕೆ ರೋಗ ಕಾಣಿಸಿಕೊಂಡಿರುವ ಪ್ರದೇಶಕ್ಕೆ ಕೃಷಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಜಯಕುಮಾರ್‌ ಕೃಷಿ ತಜ್ಞರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಚೌಡಿಕಟ್ಟೆ ಹಾಗೂ ಬಲ್ಲೇಹಳ್ಳಿ ನಾಲಾ ಬಯಲಿನಲ್ಲಿ ಓಡಾಡಿದ ಅಧಿಕಾರಿಗಳ ತಂಡ ರೈತರೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿ ಸಾರಜನಕ ಹೆಚ್ಚು ಬಳಸಿರುವುದರಿಂದಾಗಿ ಮೇಲ್ನೋಟಕ್ಕೆ ಈ ರೀತಿಯ ರೋಗ ಕಾಣಿಸಿಕೊಂಡಿದ್ದು. ಮಂಡ್ಯ ವಿ.ಸಿ.ಫಾರಂಗೆ ಸ್ಯಾಂಪಲ್‌ ಕಳುಹಿಸಿದ್ದು, ಅಲ್ಲಿಂದ ವರದಿ ಬಂದ ನಂತರವಷ್ಟೆ ನಿಕರ ಕಾರಣ ತಿಳಿಯಲಿದೆ ರೈತರು ಕೃಷಿ ತಜ್ಞರು ಶಿಪಾರಸು ಮಾಡದ ಬಿತ್ತನೆ ಬೀಜ ನಾಟಿ ಮಾಡದಂತೆ ಮನವಿ ಮಾಡಿದರು.

ಹೆಚ್ಚು ಇಬ್ಬನಿ ಬೀಳುತ್ತಿರುವುದರಿಂದಾಗಿ ಭತ್ತದ ಬೆಳೆಯಲ್ಲಿ ಕುತ್ತಿಗೆ ರೋಗ ಕಾಣಿಸಿಕೊಂಡಿದ್ದು, ಸಾರಜನಕ ರಸಗೊಬ್ಬರವನ್ನು ಶಿಫಾರಸು ಮಾಡಿದ ಪ್ರಮಾಣಕ್ಕಿಂತ(ಎಕರೆಗೆ 20 ಕೆ.ಜಿ) ಹೆಚ್ಚು ಬಳಸಿದ್ದಲ್ಲಿ ರೋಗ ಹರಡುವ ಸಾಧ್ಯತೆ ಇದ್ದು, ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕಿದೆ.

ಈ ರೋಗವು ಸದ್ಯಕ್ಕೆ ಚೌಡಿಕಟ್ಟೆ, ಬಲ್ಲೇನಹಳ್ಳಿ ನಾಲಾ ವ್ಯಾಪ್ತಿಯಲ್ಲಿ ಶ್ರೀರಾಮಗೋಲ್ಡ್‌ ಭತ್ತದ ಬೆಳೆಯಲ್ಲಿ ಈಗಾಗಲೇ ಬಾಧಿಸಿದೆ. ತಾಲೂಕಿನ ಇನ್ನಿತರ ಭತ್ತದ ಬೆಳೆ ಬೆಳಯುವಂತ ಪ್ರದೇಶಗಳಾದ ಉದ್ದೂರು ನಾಲಾ, ಹನುಮಂತಪುರನಾಲಾ, ಕೃಷ್ಣಾಪುರ, ಶಿರಿಯೂರುನಾಲಾ ಮತ್ತು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಮುನ್ನಚ್ಚರಿಕೆ ವಹಿಸುವಂತೆ ಸೂಚಿಸಿದರು.

ರೋಗದ ಲಕ್ಷಣಗಳು: ಹೊಡೆದಾಟಿದ ಭತ್ತದ ತೆನೆಯ ಕುತ್ತಿಗೆ ಭಾಗವು ಸುಟ್ಟಂತೆ ಕಾಣುವುದು. ಬಾಧಿಸಿದ ಭತ್ತದ ಬೆಳೆ ತೆನೆ ಬಿಳಿ ತೆನೆಯಂಡ ಕಂಡುಬಂದು ಜೊಳ್ಳನಿಂದ ಕೂಡಿರುತ್ತದೆ. ಭತ್ತದ ಕಾಳುಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವುದು.

ಹತೋಟಿ ಕ್ರಮಗಳು: ರೋಗ ಕಾಣಿಸಿಕೊಂಡಿದ್ದಲ್ಲಿ ಟ್ರೈ ಸೆ„ಕ್ಲೋಜೋಲ್‌ 0.6ಗ್ರಾಂ, ಅಥವಾ ಟೆಬುಕೋನಜೋಲ್‌ ಶೇ.50 ಮತ್ತು ಟ್ರೈಪೊಕ್ಸಿಸ್ಟ್ರೋಬಿನ್‌ 25% ಸಂಯುಕ್ತ ಶಿಲೀಂದ್ರನಾಶಕ 0.4 ಗ್ರಾಂ ಒಂದು ಲೀಟರ್‌ ನೀರಿನಲ್ಲಿ ಬೆರಸಿ ಅಂಟುದ್ರಾವಣದ ಜೊತೆ ಸಿಂಪಡಿಸಬೇಕು.

ಬೆಂಕಿರೋಗದ ಮನ್ನಚ್ಚರಿಕೆಯಾಗಿ ಟ್ರೈಸೆ„ಕ್ಲೋಜೋಲ್‌ 0.6ಗ್ರಾಂ ಶಿಲೀಂದ್ರನಾಶಕವನ್ನು ಅಂಟು ದ್ರಾವಣ ಜೊತೆಗೆ ಬೇರಿಸಿ ಸಿಂಪರಣೆ ಮಾಡಬೇಕು. ಎಕರೆಗೆ ಸುಮಾರು 150-200 ಲೀಟರ್‌ನಷ್ಟು ಸಿಂಪರಣಾ ದ್ರಾವಣ ಸಿಂಪಡಿಸಬೇಕು. ರೈತರು ಕಡ್ಡಾಯವಾಗಿ ಮುನ್ನಚ್ಚರಿಕೆ ಕ್ರಮವಹಿಸಿ ತಜ್ಞರು ಸೂಚಿಸಿರುವ ಹತೋಟಿ ಕ್ರಮಗಳನ್ನು ಕೈಗೊಳ್ಳಲು ಕೃಷಿ ಸಹಾಯಕ ನಿರ್ದೇಶಕ ಜಯಕುಮಾರ್‌ ಸೂಚಿಸಿದರು.

ಟಾಪ್ ನ್ಯೂಸ್

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Mysuru: ಬಾಲ್ಯ ವಿವಾಹ: 12 ಮಂದಿ ವಿರುದ್ಧ ಪ್ರಕರಣ ದಾಖಲು

Mysuru: ಬಾಲ್ಯ ವಿವಾಹ: 12 ಮಂದಿ ವಿರುದ್ಧ ಪ್ರಕರಣ ದಾಖಲು

T. S. Srivatsa;ಮುನಿರತ್ನ ಬಂಧನ ವಿಚಾರದಲ್ಲಿ ಸರ್ಕಾರ ದ್ವಿಮುಖ ನೀತಿ: ಆರೋಪ

T. S. Srivatsa;ಮುನಿರತ್ನ ಬಂಧನ ವಿಚಾರದಲ್ಲಿ ಸರ್ಕಾರ ದ್ವಿಮುಖ ನೀತಿ: ಆರೋಪ

CTCM ಸಿದ್ದರಾಮಯ್ಯರಿಂದ ದ್ವೇಷ ರಾಜಕಾರಣ: ಸಿ.ಟಿ.ರವಿ

CM ಸಿದ್ದರಾಮಯ್ಯರಿಂದ ದ್ವೇಷ ರಾಜಕಾರಣ: ಸಿ.ಟಿ.ರವಿ

Hunsur: ನೀರು ತರಲು ಹೋಗಿದ್ದ ಪತ್ನಿಯ ಕತ್ತು ಕಡಿದ ಪತಿ

Hunsur: ನೀರು ತರಲು ಹೋಗಿದ್ದ ಪತ್ನಿಯ ಕತ್ತು ಕಡಿದ ಪತಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.