“ನೃತ್ಯ’ಮೇವ ಜಯತೇ!


Team Udayavani, Oct 30, 2018, 6:00 AM IST

9.jpg

ರಿಯಾಲಿಟಿ ಶೋಗಳು, ನೃತ್ಯ ಕಾರ್ಯಕ್ರಮಗಳು, ಅವಾರ್ಡ್‌ ಶೋಗಳು ನಿರಂತರವಾಗಿ ಪ್ರಸಾರವಾಗುತ್ತಿರುವುದರಿಂದ ದೃಶ್ಯ ಮಾಧ್ಯಮದಲ್ಲಿ ಕೊರಿಯೋಗ್ರಾಫ‌ರ್‌ಗಳಿಗೆ ನಿರಂತರ ಬೇಡಿಕೆ ಇದ್ದೇ ಇದೆ…

ಭಾರತೀಯರ ಪಾಲಿಗೆ ನೃತ್ಯವೆಂಬುದು ದೇವಕಲೆ. ಶಿವನ ತಾಂಡವ ನೃತ್ಯ, ವಿಷ್ಣುವಿನ ಮೋಹಿನಿ ನೃತ್ಯ, ಕೃಷ್ಣನ ಬಾಲ ನೃತ್ಯ- ಇವೆಲ್ಲಾ ನೃತ್ಯವೆಂಬುದು ದೇವರ ಕಲೆ ಎನ್ನುವ ಮಾತಿಗೆ ಸಾಕ್ಷಿಯಾಗುವ ದೃಷ್ಟಾಂತಗಳು. ಇವತ್ತಿನ ಸಂದರ್ಭದಲ್ಲಿ ನೃತ್ಯವೆಂಬುದು ಹತ್ತಾರು ಬಗೆಯಲ್ಲಿ ಟಿಸಿಲೊಡೆದಿದೆ. ನೃತ್ಯವನ್ನು ನೋಡುವವರೂ ಹೆಚ್ಚುತ್ತಿದ್ದಾರೆ. ಮತ್ತೂಂದು ಕಡೆಯಲ್ಲಿ ನೃತ್ಯ ಕಲಿಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ದೇಶೀಯ ನೃತ್ಯ ಪ್ರಕಾರಗಳು, ಪಾಶ್ಚಾತ್ಯ ನೃತ್ಯ ಪ್ರಕಾರಗಳಿಗೂ ನಮ್ಮಲ್ಲಿ ಮಹತ್ವವಿದೆ. ಈ ಕಾರಣದಿಂದಲೇ ನೃತ್ಯ ಸಂಯೋಜಿಸುವ ಕೊರಿಯೋಗ್ರಾಫ‌ರ್‌ಗಳಿಗೆ ಬೇಡಿಕೆ ಹೆಚ್ಚತೊಡಗಿದೆ.

ರಿಯಾಲಿಟಿ ಶೋಗಳು, ನೃತ್ಯ ಕಾರ್ಯಕ್ರಮಗಳು, ಅವಾರ್ಡ್‌ ಶೋಗಳು ನಿರಂತರವಾಗಿ ಪ್ರಸಾರವಾಗುತ್ತಿರುವುದರಿಂದ ದೃಶ್ಯ ಮಾಧ್ಯಮದಲ್ಲಿ ಕೊರಿಯೋಗ್ರಾಫ‌ರ್‌ಗಳಿಗೆ ನಿರಂತರ ಬೇಡಿಕೆ ಇದ್ದೇ ಇದೆ. ದೃಶ್ಯ ಮಾಧ್ಯವನ್ನು ಹೊರತುಪಡಿಸಿ ಶಾಲೆ, ಕಾಲೇಜು, ಸಂಘ- ಸಂಸ್ಥೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ಇದ್ದೇ ಇರುತ್ತದೆ. ಬಹಳಷ್ಟು ಬಾರಿ ಅಲ್ಲೆಲ್ಲಾ ಕೊರಿಯೋಗ್ರಾಫ‌ರ್‌ಗಳನ್ನು ಕರೆಸಲಾಗುತ್ತದೆ.

ಒಂದು ಕಡೆ ಮೇಲಿಂದ ಮೇಲೆಸಿಗುವ ಕಾರ್ಯಕ್ರಮಗಳು, ಇನ್ನೊಂದೆಡೆ ಟಿ.ವಿ. ಹಾಗೂ ಇತರೆ ರಿಯಾಲಿಟಿ ಶೋಗಳಿಂದ ಸಿಗುವ ಜನಪ್ರಿಯತೆ, ಅವಕಾಶ ಮತ್ತು ಹಣ, ಈ ಎಲ್ಲಾ ಕಾರಣಗಳಿಂದಾಗಿ ಈ ಕ್ಷೇತ್ರ ಯುವಜನತೆಯನ್ನು ಆಕರ್ಷಿಸುತ್ತಿದೆ. ಹೀಗಾಗಿ ಶೈಕ್ಷಣಿಕವಾಗಿ ಪ್ರಗತಿ ಹೊಂದುವುದರ ಜೊತೆಯಲ್ಲಿಯೇ ಅನೇಕರು ನೃತ್ಯಾಭ್ಯಾಸವನ್ನೂ ಮಾಡುತ್ತಿದ್ದಾರೆ. ಓದಿನ ಜೊತೆಯಲ್ಲಿಯೇ ನೃತ್ಯವನ್ನೂ ಅಭ್ಯಸಿಸುವುದರಿಂದ ಆಯ್ಕೆಯ ಸ್ವಾತಂತ್ರ್ಯ ಅವರಿಗಿರುತ್ತದೆ. ಇದಿಷ್ಟೇ ಅಲ್ಲ, ಉತ್ತಮ ಕೊರಿಯೋಗ್ರಾಫ‌ರ್‌ ಆಗಲು ದೀರ್ಘ‌ ಪರಿಶ್ರಮದ ಅವಶ್ಯಕತೆಯಿದೆ. ದೇಶ ವಿದೇಶದ ನಾನಾ ನೃತ್ಯ ಪ್ರಕಾರಗಳ ಪರಿಚಯ, ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಅನುಭವವೂ ಬೇಕಾಗುತ್ತದೆ. ಉತ್ತಮ ದೇಹ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳಬೇಕಾಗುತ್ತದೆ. 

ವಿದ್ಯಾಭ್ಯಾಸ ಹೀಗಿರಲಿ…
ಪಿಯುನಲ್ಲಿ ಯಾವುದೇ ವಿಷಯ ಅಭ್ಯಾಸ ಮಾಡಿದ ಬಳಿಕ ಪದವಿಯಲ್ಲಿ ನೃತ್ಯ ವಿಷಯವನ್ನು ಆಯ್ಕೆ ಮಾಡಿಕೊಂಡು ಕೋರಿಯೋಗ್ರಾಫ‌ರ್‌ ಆಗಬಹುದು. ಇದಲ್ಲದೆ, ಮತ್ತೂಂದು ಮಾರ್ಗದಲ್ಲಿ ಡ್ಯಾನ್ಸ್‌ ಅಕಾಡೆಮಿಗಳಲ್ಲಿ ತರಬೇತಿ ಪಡೆದೂ ಕೊರಿಯೋಗ್ರಾಫ‌ರ್‌ ಆಗಬಹುದು. ಜತೆಗೆ ಶಾಸ್ತ್ರೀಯ ನೃತ್ಯಶಾಲೆಗಳಲ್ಲಿ ಪರಿಣತಿ ಪಡೆಯಬಹುದು. 

ಈ ಕೌಶಲ್ಯಗಳೂ ಅವಶ್ಯ
– ದೈಹಿಕ ಸ್ವಾಸ್ಥ್ಯ, ಸಾಮರ್ಥ್ಯ, ಸಮತೋಲನ ಅಗತ್ಯ.
– ಸಮೂಹದಲ್ಲಿ ಸೌಹಾರ್ದತೆ ಕಾಯ್ದುಕೊಂಡು ಕಾರ್ಯನಿರ್ವಸುವ ತಂತ್ರಗಾರಿಕೆ.
– ಭಾರತೀಯ ನೃತ್ಯ ಪ್ರಕಾರಗಳ ಚರಿತ್ರೆ, ನಾಟ್ಯಶಾಸ್ತ್ರದ ಬಗ್ಗೆ ಅರಿವು.
– ಸಂಗೀತ, ತಾಳ ಜ್ಞಾನ.
– ಉತ್ತಮ ಸಂವಹನ ಮತ್ತು ನಾಯಕತ್ವ ಗುಣ ಅಗತ್ಯ
.

ಅವಕಾಶಗಳು ಎಲ್ಲೆಲ್ಲಿ?
– ಖಾಸಗಿ ಡ್ಯಾನ್ಸ್‌ ಗ್ರೂಪ್‌ಗ್ಳು
– ಸಿನಿಮಾ ಸ್ಟುಡಿಯೋಗಳು
– ಟಿ.ವಿ. ರಿಯಾಲಿಟಿ ಶೋಗಳು
– ರಂಗಭೂಮಿ 
– ಸ್ವಂತ ಡ್ಯಾನ್ಸ್‌ ಶಾಲೆ

ಓದುವುದು ಎಲ್ಲಿ?
– ಕರ್ನಾಟಕ ಸ್ಟೇಟ್‌ ಡಾ. ಗಂಗೂಬಾಯಿ ಹಾನಗಲ್‌ ಮ್ಯೂಜಿಕ್‌ ಅಂಡ್‌ ಪರ್ಫಾಮಿಂಗ್‌ ಆರ್ಟ್ಸ್ ಯೂನಿವರ್ಸಿಟಿ, ಮೈಸೂರು
– ಆಳ್ವಾಸ್‌ ಕಾಲೇಜು. ಮೂಡಬಿದಿರೆ, ಮಂಗಳೂರು (ಎಂ.ಎ. ಭರತನಾಟ್ಯ) 
– ನಾಟ್ಯ ಇನ್ಸ್‌ಟಿಟ್ಯೂಟ್‌ ಆಫ್ ಕಥಕ್‌ ಅಂಡ್‌ ಕೊರಿಯೋಗ್ರಫಿ, ಬೆಂಗಳೂರು
– ಎ.ಐ.ಎಂ.ಎಸ್‌ ಇನ್ಸ್‌ಟಿಟ್ಯೂಟ್‌, ಪೀಣ್ಯ, ಬೆಂಗಳೂರು (ಬಿ.ಎ. ಇನ್ಸ್‌ ಪರ್ಫಾಮಿಂಗ್‌ ಆರ್ಟ್ಸ್)
– ರೇವಾ ವಿಶ್ವವಿದ್ಯಾಲಯ, ಯಲಹಂಕ, ಬೆಂಗಳೂರು

– ಅನಂತನಾಗ್‌ ಎನ್‌.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.