ನನ್ನ ಹೃದಯವೇನು ಸೇಫ್ಟಿ ಲಾಕರ್ರಾ?


Team Udayavani, Oct 30, 2018, 6:00 AM IST

v-1.jpg

ನನಗೆ ಗೊತ್ತಿರುವಂತೆ ನೀನು ಒಳ್ಳೆಯವಳೇ. ಆದರೆ, ನಿನಗೆ ಅತೀ ಅನ್ನಿಸುವಷ್ಟು ಸ್ವಾರ್ಥವಿದೆ. ಜೊತೆಗಿರುವವರನ್ನು ಗಿರಗಿಟ್ಲೆಯಂತೆ ತಿರುಗಿಸಬಲ್ಲ ಚಾಲಾಕಿತನವಿದೆ. ಇದೇ ಕಾರಣದಿಂದ ಹೀರೋಯಿನ್‌ ರೂಪಿನ ನೀನು ಲೇಡಿ ವಿಲನ್‌ ಆಗಿ ಕಾಣಿಸ್ತಿದೀಯ…

ಅದೆಷ್ಟು ವಿಷ ತುಂಬಿದೆಯೇ ನಿನ್ನೊಳಗೆ? ಮಹಾನ್‌ ಮೋಸಗಾತಿ ನೀನು. ವಿಶ್ವಾಸಘಾತುಕಿ.ಕೆನ್ನೆ ಮೇಲಿನ ಮಚ್ಚೆಯಷ್ಟೂ ಲಜ್ಜೆ ಇಲ್ಲವಲ್ಲೇ ನಿನಗೆ? ಕೈಬೆರಳುಗಳಂತೂ ಇಳಿಬಿದ್ದ ಮುಂಗುರುಳುಗಳ ಸುತ್ತುತ್ತಲೇ ನನ್ನ ಮನಸ್ಸನ್ನೂ ನಿನ್ನ ಸುತ್ತ ಸುತ್ತುವಂತೆ ಮಾಡಿದವು. ಸಮಯಸಾಧಕರಂತೆ ಹೊಂಚು ಹಾಕುತ್ತಿರುತ್ತವೆ ನಿನ್ನ ಕಣ್ಣುಗಳು. ಗುರುತ್ವಾಕರ್ಷಣೆಯ ಬಲದಿಂದಾಗಿ, ಭೂಮಿಯೆಡೆಗೆ ಬೀಳುವ ಆಕಾಶ ಕಾಯಗಳಿಗಿಂತಲೂ ವೇಗವಾಗಿ ಜಾರಿದೆ ನಾನು ನಿನ್ನ ಪ್ರೀತಿಯ ಆಕರ್ಷಣೆಗೆ.

ಆದರೆ ನೀನು ಮಾಡಿದ್ದೇನು? ಅದ್ಯಾವುದನ್ನೂ ಅರ್ಥಮಾಡಿಕೊಳ್ಳಲೇ ಇಲ್ಲ. ಬರೀ ನಿನ್ನ ಅನುಕೂಲಕ್ಕೆ ನನ್ನನ್ನು ಬಳಸಿಕೊಂಡೆಯಷ್ಟೇ. ನನ್ನ ಹೃದಯದೊಂದಿಗೆ ಚೆಲ್ಲಾಟವಾಡಿದೆ. ನನ್ನ ಹೃದಯವನ್ನೇನು ಸೇಫ್ಟಿ ಲಾಕರ್‌ ಅಂದುಕೊಂಡೆಯಾ, ನಿನ್ನ ಆಸೆ, ಪ್ರೀತಿ, ಕನಸುಗಳನ್ನೆಲ್ಲಾ ಭದ್ರವಾಗಿಡಲು? ಅವೋ ಒಂದೆರೆಡಲ್ಲಾ, ಟನ್ನುಗಳಷ್ಟು ಕನಸುಗಳು, ಹಿಡಿಸಲಾರದಷ್ಟು ಆಸೆಗಳು, ಜೊತೆಗೊಂದೆರೆಡು ಕಿಲೋಗಳಷ್ಟು ಸ್ವಾರ್ಥ, ಕೆಲವು ಲೀಟರಿನಷ್ಟು ದುಃಖ ಬೇರೆ.ಎಷ್ಟೆಂದು ಸಸಿಕೊಳ್ಳಲಿ ಇವನ್ನೆಲ್ಲಾ? ಇವುಗಳ ಸಂತೈಸುವ ಗೋಜಿನೊಳಗೆ ನನ್ನ ಸ್ವಂತದ ಕನಸುಗಳು ಕರಗಿವೆ, ಪ್ರೀತಿ ಮಾಯವಾಗಿದೆ, ದುಃಖವೂ ದೂರಾಗಿದೆ, ಸ್ವಾರ್ಥವೂ ಸಿಗದಾಗಿದೆ. ಥೇಟು ಬಾಡಿಗೆಗೆ ಬಿಟ್ಟ ಬಂಗಲೆಯಾಗಿದೆ ನನ್ನ ಹೃದಯವೆಂಬ ಪ್ರೇಮಮಂದಿರ.

ದೂರ್ವಾಸನ ಮಗಳು ನೀನು. ಪ್ರೀತಿ ಪ್ರೇಮದ ಅರ್ಥ ತಿಳಿಯದವಳು. ಅದನ್ನೊಂದು ಆಟದ ದಾಳವಾಗಿಸಿಕೊಂಡವಳು ನೀನು. ಪ್ರೀತಿಯ ಬೆಲೆ ತಿಳಿದ ದಿನ ನಿನಗೆ ಖಂಡಿತಾ ಪಾಪಪ್ರಜ್ಞೆ ಕಾಡಲಿದೆ. ರುಜುವಾತಾಗಲಿದೆ ಜಗತ್ತಿನೆದುರು ನಿನ್ನ ಸ್ವಾರ್ಥದ ಬದುಕು. ನಿಜವಾಗಿಯೂ ಹೃದಯವಂತೆ ನೀನು, ಆದರೆ ನಿನ್ನೊಳಗಿರುವ ಒಳಿತುಗಳ ಗುರುತಿಸಲಾರದೆ ಹೀಗಾಗಿದೆಯಷ್ಟೇ. ಈಗಲೂ ಒಂದು ಅವಕಾಶ ನೀಡುವೆ. ಪ್ರೀತಿಯ ಅಮೃತ ಪಾತ್ರೆಯಾಗಿಸುವೆ ನಿನ್ನನ್ನು. ಒಪ್ಪಿ ಬಂದುಬಿಡು, ಜೀವನ ಪೂರ್ತಿ ಜೊತೆಗಿರಲು ಕಾದಿಹೆ ನಾನು.

ಇಂತಿ ನಿನ್ನವ
ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.