ಮಾಲೇಗಾಂವ್ ಬ್ಲಾಸ್ಟ್ : ಎಲ್ಲ ಏಳು ಆರೋಪಿಗಳ ವಿರುದ್ಧ ದೋಷಾರೋಪ
Team Udayavani, Oct 30, 2018, 3:22 PM IST
ಮುಂಬಯಿ : 2008ರ ಮಾಲೇಗಾಂವ್ ಬ್ಲಾಸ್ಟ್ ಕೇಸ್ ನಲ್ಲಿ ಲೆ| ಕ| ಪುರೋಹಿತ್ ಸಹಿತ ಎಲ್ಲ ಏಳು ಆರೋಪಿಗಳ ವಿರುದ್ಧ ಇಂದು ಗುರುವಾರ ಎನ್ಐಎ ಕೋರ್ಟ್, “ಉಗ್ರ ಸಂಚು, ಕೊಲೆ ಮತ್ತು ಇತರ ಅಪರಾಧಗಳ’ ಆರೋಪವನ್ನು ಹೊರಿಸಿದೆ.
ವಿಚಾರಣಾ ನ್ಯಾಯಾಲಯ ಇಂದು ಬೆಳಗ್ಗಿನ ವಿಚಾರಣೆಯಲ್ಲಿ ಪ್ರಕರಣ ಓರ್ವ ಆರೋಪಿಯಾಗಿರುವ ಲೆ| ಕ| ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರು “ತಮ್ಮ ವಿರುದ್ಧ ದೋಷಾರೋಪ ಮಾಡುವುದನ್ನು ಮುಂದಕ್ಕೆ ಹಾಕಬೇಕೆಂದು’ ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತಲ್ಲದೆ ದೋಷಾರೋಪಗಳು ಈಗಲೇ ಸಿದ್ಧವಿವೆ ಎಂದು ಹೇಳಿತು.
ವಿಚಾರಣಾ ನ್ಯಾಯಾಲಯ ದೋಷಾರೋಪ ಹೊರಿಸಿದ ತತ್ಕ್ಷಣವೇ ಎಲ್ಲ ಆರೋಪಿಗಳು ತಾವು ಈ ಪ್ರಕರಣದಲ್ಲಿ ನಿರಪರಾಧಿಗಳೆಂದು ಹೇಳಿಕೊಂಡರು.
ನಿನ್ನೆ ಸೋಮವಾರ ಬಾಂಬೆ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ದೋಷಾರೋಪ ಹೊರಿಸುವುದಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹಾಗಿದ್ದರೂ ಅದು ಕ| ಪುರೋಹಿತ್ ಯುಎಪಿಎ ಕಾಯಿದೆಯಡಿ ತಮ್ಮ ವಿರುದ್ದ ನಡೆಸುತ್ತಿರುವ ಕಾನೂನು ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿ ನ.21ರಂದು ಮುಂದಿನ ವಿಚಾರಣೆಯನ್ನು ನಿಗದಿಸಿತು.
2008ರ ಸೆ.29ರಂದು ಮಾಲೇಗಾಂವ್ ಮಸೀದಿಯ ಸಮೀಪ ಮೋಟಾರ್ ಸೈಕಲ್ಗೆ ಬಿಗಿಯಲಾಗಿದ್ದ ಸ್ಫೋಟ ಉಪಕರಣವು ಬ್ಲಾಸ್ಟ್ ಆದ ಪ್ರಕರಣದಲ್ಲಿ ಆರು ಮಂದಿ ಮಡಿದು ಇತರ ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.