ಮಣ್ಣು-ನೀರು ಪರೀಕ್ಷಿಸಿ ಪೋಷಕಾಂಶ ನೀಡಿ
Team Udayavani, Oct 30, 2018, 5:13 PM IST
ಕೊಪ್ಪಳ: ರೈತರು ಕಬ್ಬು ಸೇರಿದಂತೆ ಯಾವುದೇ ಬೆಳೆ ಬೆಳೆಯುವ ಮುನ್ನ ಮಣ್ಣು ಹಾಗೂ ನೀರನ್ನು ಪರೀಕ್ಷೆ ಮಾಡಿಸಬೇಕು. ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ಪೋಷಕಾಂಶ ಕೊಡಬೇಕು ಎಂದು ಬೆಳಗಾವಿ ಜಿಲ್ಲಾ ಸದಗಲ್ಗಾ ಪ್ರಗತಿಪರ ರೈತ ರುದ್ರಕುಮಾರ ಹಾಲಪ್ಪನವರ್ ಸಲಹೆ ನೀಡಿದರು. ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಮುಂಡರಗಿಯ ವಿಜಯನಗರ ಶುಗರ್ ಪ್ರೈವೆಟ್ ಲಿ, ಸಹಯೋಗದಲ್ಲಿ ಸೋಮವಾರ ರೈತರ ಆದಾಯ ದ್ವಿಗುಣಗೊಳಿಸುವ ತಾಂತ್ರಿಕತೆಗಳು ಮತ್ತು ಉಪ ಕಸಬುಗಳು, ಕಬ್ಬಿನಲ್ಲಿ ಅಧಿಕ ಇಳುವರಿ ನೀಡುವ ಆಧುನಿಕ ತಾಂತ್ರಿಕತೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಕೃಷಿ ಚಟುವಟಿಕೆಯಲ್ಲಿ ಮಣ್ಣಿನ ಫಲವತ್ತತೆ ಹಾಗೂ ನೀರಿನ ಗುಣಮಟ್ಟ ತಿಳಿಯಲು ಪರೀಕ್ಷೆ ಮಾಡಿಸಬೇಕು. ಬೆಳೆಯನ್ನು ಬೆಳೆಯು ವೇಳೆ ಯಾವ ಪೋಷಕಾಂಶ ಕಡಿಮೆ ಇದೆಯೋ ಅದನ್ನು ಪೂರೈಕೆ ಮಾಡಬೇಕು. ಸುಮ್ಮನೆ ಎಲ್ಲರಂತೆ ರಾಸಾಯನಿಕ ಗೊಬ್ಬರ ಬಳಸುವುದು ಸರಿಯಲ್ಲ. ಜೊತೆಗೆ ಕಬ್ಬು ಬೆಳೆಯುವ ವೇಳೆ ಸಸಿಯಿಂದ ಸಸಿಗೆ ಎರಡು ಅಡಿ ಅಂತರ ಇರಬೇಕು. ಬೀಜೋಪಚಾರ ಮಾಡಬೇಕು ಎಂದರು.
ಪ್ರಸ್ತುತ ದಿನದಲ್ಲಿ ಕೃಷಿಗೆ ನೀರಿನ ಅಭಾವ ಹೆಚ್ಚಿದೆ. ಹನಿ ನೀರಾವರಿ ಪದ್ಧತಿ ಅಳವಡಿಕೆಯಿಂದ ಶೇ. 60ರಷ್ಟು ನೀರು ಉಳಿತಾಯ ಮಾಡಲು ಸಾಧ್ಯವಿದೆ. ಹರಿ ನೀರಾವರಿಯಿಂದ ಬೆಳೆಯ ಇಳುವರಿ ಕಡಿಮೆ ಬರುವುದಲ್ಲದೆ ಸುಮ್ಮನೆ ನೀರು ವ್ಯಯವಾಗಲಿದೆ. ಆದರೆ, ಹನಿ ನೀರಾವರಿ ಮೂಲಕ ಹೆಚ್ಚು ಇಳುವರಿ ಬರಲಿದೆ. ಇದರಿಂದ ಕಬ್ಬಿನ ಬೆಳವಣಿಗೆ ಚೆನ್ನಾಗಿ ಆಗಲಿದೆ. ಸಮಯಕ್ಕೆ ತಕ್ಕಂತೆ ಪೋಷಕಾಂಶ ಕೊಡಬೇಕು. ನೀರಿನ ನಿರ್ವಹಣೆ, ಡೊಣ್ಣೆ ಹುಳುವಿನ ನಿರ್ವಹಣೆ ಮಾಡಬೇಕೆಂದರು.
ಈ ಭಾಗದ ರೈತರು ಹಳೇ ತಳಿಗಳನ್ನೇ ಹೆಚ್ಚು ಬೆಳೆಯುತ್ತಾರೆ. ಇದರಿಂದ ಇಳುವರಿ ಕಡಿಮೆ ಬರುತ್ತದೆ. ಹೊಸ ತಳಿಯ ಬೆಳೆ ಬೆಳೆಯಲು ಮುಂದಾಗಬೇಕು. ಬೆಳಗಾವಿ ಜಿಲ್ಲೆ ಸಂಕೇಶ್ವರದಲ್ಲಿ ಕಬ್ಬು ಸಂಶೋಧನಾ ಕೇಂದ್ರವಿದ್ದು, ಅಲ್ಲಿ 92-93, 92-11 ತಳಿಯ ಬೆಳೆ ಲಭ್ಯ ಇವೆ. ಅದರ ಮಾಹಿತಿ ಪಡೆದು ಹೊಸ ಹೊಸ ತಳಿಗಳನ್ನು ಬೆಳೆದರೆ ಕೃಷಿಯಲ್ಲಿ ಆದಾಯ ದ್ವಿಗುಣ ಕಾಣಲು ಸಾಧ್ಯವಿದೆ ಎಂದರು.
ರಾಯಚೂರಿನ ಕೃಷಿ ವಿಸ್ತರಣಾ ನಿರ್ದೇಶಕ ಡಾ| ಬಿ.ಎಂ. ಚಿತ್ತಾಪೂರ ಮಾತನಾಡಿ, ಉತ್ತರ ಕರ್ನಾಟಕ ಪದೇ ಪದೇ ಬರಕ್ಕೆ ತುತ್ತಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಮಳೆಯಾದರೆ ಈ ಭಾಗದಲ್ಲಿ ಮಳೆಯ ಕೊರತೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ರೈತರು ಹರಿ ನೀರಾವರಿ ಪದ್ಧತಿ ಬಿಟ್ಟು ಹನಿ ನೀರಾವರಿ ಪದ್ಧತಿ ಅಳವಡಿಕೆ ಮಾಡುವುದು ಸೂಕ್ತ. ಭವಿಷ್ಯದಲ್ಲಿ ನೀರಿನ ಅಭಾವ ಎದುರಾಗಿ ಎಲ್ಲೆಡೆಯೂ ಹನಿ ನೀರಾವರಿ ಪದ್ಧತಿ ಅಳವಡಿಕೆಯಾಗುವ ಸಾಧ್ಯತೆಯಿದೆ. ಎಕರೆಯಲ್ಲಿ ಕಬ್ಬು ಬೆಳೆದರೆ, ಅದೇ ನೀರನ್ನು ಹನಿ ನೀರಾವರಿ ಮಾಡಿದರೆ ಎರಡೂವರೆ ಎಕರೆಯಲ್ಲಿ ಬೆಳೆಯನ್ನು ಬೆಳೆಯಬಹುದು ಡ್ರಿಪ್ ಮೂಲಕವೂ ರೈತರು ಬೆಳೆಗೆ ಗೊಬ್ಬರ ಕೊಡಲು ಅವಕಾಶವಿದೆ ಎಂದರು.
ರಾಯಚೂರಿನ ಕೃಷಿ ವಿವಿ ಸಿಂಡಿಕೇಟ್ ಸದಸ್ಯ ಡಾ| ಎಂ. ಶೇಖರಗೌಡ ಮಾತನಾಡಿ, ಕೃಷಿ ವಿಸ್ತರಣಾ ಕೇಂದ್ರದಲ್ಲಿ ರೈತರಿಗೆ ಜಾಗೃತಿ ಮೂಡಿಸುವಂತಹ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಿಜಕ್ಕೂ ಸುವರ್ಣಾಕಾಶವಾಗಿದೆ. ಪ್ರತಿಯೊಬ್ಬ ರೈತರು ಇದರ ಜ್ಞಾನ ಪಡೆದು ಕಬ್ಬು ಸೇರಿದಂತೆ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕೃಷಿ ಜಂಟಿ ನಿರ್ದೇಶಕಿ ಶಬಾನ್ ಶೇಖ್, ಪ್ರಗತಿಪರ ರೈತ ಖಾಜಾ ಹುಸೇನಿ, ಸುಗರ್ ಕಂಪನಿ ಮ್ಯಾನೇಜರ್ ಜಯಚಂದ್ರ ಟಿ.ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿಜ್ಞಾನಿ ಡಾ| ಟಿ.ಆರ್. ಬದ್ರಿಪ್ರಸಾದ ಸ್ವಾಗತಿಸಿದರು. ತೋಟಗಾರಿಕೆ ವಿಷಯ ತಜ್ಞ ಪ್ರದೀಪ ಬಿರಾದರ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppal: ಚಿಕನ್, ಮಟನ್ ಸೆಂಟರ್ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ
100 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ: ಶಿವರಾಜ್ ತಂಗಡಗಿ
Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ
Minister; ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ
Anegundi ಸ್ವಚ್ಛ ಗ್ರಾಮಕ್ಕೆ ಸಹಕರಿಸಿ: ಸಿಇಓ ರಾಹುಲ್ ರತ್ನಂ ಪಾಂಡೆ;ಗ್ರಾ.ಪಂ. ಸಾಮಾನ್ಯ ಸಭೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.