ಬೆಳ್ತಂಗಡಿ: ತೆಪ್ಪ ಸಾಗುತ್ತಿದ್ದ ನದಿಗೆ ಈಗ ತೂಗು ಸೇತುವೆ 


Team Udayavani, Oct 31, 2018, 10:47 AM IST

31-october-4.gif

ಬೆಳ್ತಂಗಡಿ: ಬೆಳ್ತಂಗಡಿ ನಗರದಿಂದ ಕೇವಲ 4 ಕಿ.ಮೀ. ದೂರದಲ್ಲಿದ್ದರೂ, ಆ ಪ್ರದೇಶದ ಮಂದಿ ನಗರಕ್ಕೆ ಬರಬೇಕಾದರೆ 15 ಕಿ.ಮೀ. ಸುತ್ತು ಬಳಸಿ ಬರಬೇಕಿತ್ತು. ಮಧ್ಯೆ ಸೋಮಾವತಿ ನದಿ ಇರುವ ಕಾರಣ ಇದು ಅನಿವಾರ್ಯವಾಗಿತ್ತು. ಈಗ ಸ್ಥಳೀಯ ವ್ಯಕ್ತಿಯೊಬ್ಬರು 20 ಲಕ್ಷ ರೂ. ವ್ಯಯಿಸಿ ತೂಗು ಸೇತುವೆಯೊಂದನ್ನು ನಿರ್ಮಿಸಿದ್ದಾರೆ. ಈ ತೂಗು ಸೇತುವೆಯಲ್ಲಿ ಸ್ಥಳೀಯರು ಕೂಡ ಸಂಚರಿಸುವುದಕ್ಕೆ ಅವಕಾಶ ನೀಡಿದ್ದಾರೆ.

ತಾಲೂಕಿನ ಬೆಳ್ತಂಗಡಿ ಕಸಬಾ ಗ್ರಾಮದಿಂದ ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಪ್ರದೇಶವನ್ನು ಸಂಪರ್ಕಿಸಬೇಕಾದರೆ ಓಡದಕಡಪು ಪ್ರದೇಶದಲ್ಲಿ ಸೋಮಾವತಿ ನದಿ ದಾಟಿಯೇ ತೆರಳಬೇಕಿತ್ತು. ತೆಪ್ಪವೇ ಆಧಾರವಾಗಿತ್ತು. ಬೆಳ್ತಂಗಡಿ ನಗರವನ್ನು ಸಂಪರ್ಕಿಸಬೇಕಾದರೆ ಇವರು ನದಿ ದಾಟದೆ ಹೋಗಬೇಕಿದ್ದರೆ ನೆಕ್ಕರೆಕೋಡಿಯಿಂದ. ಮಾವಿನಕಟ್ಟೆಯಿಂದ . ಕೊಯ್ಯೂರು ಮೂಲಕ ಲಾೖಲಕ್ಕೆ ಬಂದು ಬಳಿಕ ಬೆಳ್ತಂಗಡಿಗೆ ಬರಬೇಕಿತ್ತು. ಹೀಗೆ ಬರುವುದಾದರೆ ಅವರು 15 ಕಿ.ಮೀ. ಸಾಗುವುದು ಅನಿವಾರ್ಯ.

ಹೀಗಾಗಿ ಸ್ಥಳೀಯರು ಪ್ರತಿವರ್ಷ ತೆಪ್ಪವೊಂದನ್ನು ಮಾಡಿ, ಅದರ ಮೂಲಕ ನದಿ ದಾಟುತ್ತಿದ್ದರು. ಆದರೆ ಪ್ರಸ್ತುತ ಬಿದಿರಿನ ಕೊರತೆಯಿಂದ ತೆಪ್ಪ ಮಾಡುವುದು ಕಷ್ಟವಾಗಿತ್ತು. ಈ ಬವಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಮೆಸ್ಕಾಂನ ನಿವೃತ್ತ ಉದ್ಯೋಗಿ ಕೂಸಪ್ಪ ಗೌಡ ಅವರು ತೂಗು ಸೇತುವೆಯೊಂದನ್ನು ನಿರ್ಮಿಸಿದ್ದಾರೆ.

ಒಂದು ತಿಂಗಳಲ್ಲಿ ಸೇತುವೆ
ತೂಗು ಸೇತುವೆ ನಿರ್ಮಿಸಲು ನಿರ್ಧರಿಸಿದ್ದ ಕೂಸಪ್ಪ ಗೌಡ ಅವರಿಗೆ ನೆನಪಾದುದು ತೂಗು ಸೇತುವೆಗಳ ಸರದಾರ ಗಿರೀಶ್‌ ಭಾರಧ್ವಾಜ್‌. ನೇರವಾಗಿ ಅವರನ್ನು ಸಂಪರ್ಕಿಸಿ, ತೂಗು ಸೇತುವೆಯ ಕುರಿತು ಪ್ರಸ್ತಾಪಿಸಿದರು. ಬಳಿಕ ಗಿರೀಶ್‌ ಅವರ ಪುತ್ರ ಪತಂಜಲಿ ಭಾರದ್ವಾಜ್‌ ಅವರು ತಿಂಗಳೊಳಗೆ ಸೇತುವೆ ನಿರ್ಮಾಣದ ಕಾರ್ಯವನ್ನು ಮುಗಿಸಿದ್ದಾರೆ. ಆರಂಭದ 10 ದಿನಗಳಲ್ಲಿ ಪಿಲ್ಲರ್‌ ನಿರ್ಮಿಸಿ, ಬಳಿಕ ಮಧ್ಯದ ಸೇತುವೆ ಜೋಡಣೆ ಕಾರ್ಯ ನಡೆಸಲಾಗಿದೆ. ಒಟ್ಟಿನಲ್ಲಿ ತಿಂಗಳಲ್ಲಿ ಸೇತುವೆ ನಿರ್ಮಿಸಲಾಗಿದ್ದರೂ, ಸುಮಾರು 20 ದಿನಗಳ ಕ್ಯೂರಿಂಗ್‌ ನಡೆದಿದೆ. ಸೇತುವೆ ನಿರ್ಮಾಣದ ಬಳಿಕ ಸ್ಥಳೀಯ ಮೂರ್‍ನಾಲ್ಕು ಮನೆಯವರು ಅದೇ ಸೇತುವೆಯಲ್ಲಿ ಬೆಳ್ತಂಗಡಿ ನಗರನ್ನು ಸಂಪರ್ಕಿಸುತ್ತಿದ್ದಾರೆ.

ಕಾಲ್ನಡಿಗೆಗೆ ಮಾತ್ರ ಅವಕಾಶ
ಪ್ರಸ್ತುತ ಸೇತುವೆಯಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಿಲ್ಲ. ಕೇವಲ ಕಾಲ್ನಡಿಗೆಯಲ್ಲಿ ಸಾಗುವುದಕ್ಕೆ ಮಾತ್ರ ಅವಕಾಶವಿದೆ. ಸೇತುವೆಯ ಒಂದು ಬದಿ ನೇರವಾಗಿ ತನ್ನ ತೋಟವನ್ನು ಸಂಪರ್ಕಿಸುವುದರಿಂದ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ವಾಹನಕ್ಕೆ ಅವಕಾಶ ನೀಡಿಲ್ಲ ಎಂದು ಕೂಸಪ್ಪ ಗೌಡರು ಹೇಳುತ್ತಾರೆ.

ಪ್ರತಿವರ್ಷ ತೆಪ ನಿರ್ಮಾಣ
ಸ್ಥಳೀಯರು ಪ್ರತಿವರ್ಷ ಬಿದಿರು ಹಾಗೂ ಸಲಾಕೆಗಳನ್ನು ಬಳಸಿ ತೆಪ್ಪ ನಿರ್ಮಿಸುತ್ತಿದ್ದರು. ಬಿದಿರಿನ ತುಂಡುಗಳಿಗೆ ಅಡ್ಡಲಾಗಿ ಸಲಾಕೆ ಇಟ್ಟು ಕಬ್ಬಿಣದ ಸರಿಗೆಯ ಮೂಲಕ ಅದನ್ನು ಜೋಡಿಸಬೇಕಿತ್ತು. ಬಳಿಕ ಅದನ್ನು ರೋಪ್‌ ಹಾಗೂ ರಾಟೆಯ ಮೂಲಕ ಎಳೆದು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಬೇಕಿತ್ತು. ಆದರೆ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿದ್ದರೆ ತೆಪ್ಪವೂ ಮುಂದಕ್ಕೆ ಸಾಗುವುದು ಕಷ್ಟವಾಗುವ ಜತೆಗೆ ಅಪಾಯಕಾರಿಯೂ ಆಗಿದೆ. ಇನ್ನೊಂದೆಡೆ ಪ್ರಸ್ತುತ ದಿನಗಳಲ್ಲಿ ಬಿದಿರು ಕೂಡ ಅಪರೂಪವಾಗಿದ್ದು, ಬಿದಿರಿನ ಅಭಾವ ಸಾಕಷ್ಟಿತ್ತು. ಹೀಗಾಗಿ ಇಂತಹ ಸಮಸ್ಯೆಗಳಿಗೆ ತಿಲಾಂಜಲಿ ನೀಡುವ ದೃಷ್ಟಿಯಿಂದ ಕೂಸಪ್ಪ ಗೌಡರು ತೂಗು ಸೇತುವೆ ನಿರ್ಮಾಣದ ನಿರ್ಧಾರಕ್ಕೆ ಬಂದಿದ್ದರು.

 ಕಿರಣ್‌ ಸರಪಾಡಿ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.