ಕುಸ್ತಿಪಟುಗಳಿಗೂ ಇನ್ನು “ಕೇಂದ್ರ ಒಪ್ಪಂದ’ ಜಾರಿ
Team Udayavani, Nov 1, 2018, 6:00 AM IST
ಹೊಸದಿಲ್ಲಿ: ಭಾರತೀಯ ಕುಸ್ತಿಯಲ್ಲಿ ಬಹುದೊಡ್ಡ ಬದಲಾವಣೆಯಾಗಲಿದ್ದು, ಇದರಿಂದ ಕುಸ್ತಿಪಟುಗಳಿಗೆ ಭಾರೀ ಪ್ರಯೋಜನವಾಗಲಿದೆ. ಭಾರತೀಯ ಕುಸ್ತಿಯಲ್ಲಿ ಕ್ರಿಕೆಟ್ನಲ್ಲಿರುವಂತೆ ಕೇಂದ್ರ ಒಪ್ಪಂದ ನಿಯಮವನ್ನು ಅಳವಡಿಸುವ ಚಿಂತನೆ ನಡೆಸಲಾಗುತ್ತಿದೆ. ಈ ಒಪ್ಪಂದದ ಪ್ರಕಾರ, ಕುಸ್ತಿ ಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನದ ಬಳಿಕ ಶ್ರೇಣಿಗಳನ್ನು ನೀಡಲಾಗುವುದು. ಇದಕ್ಕೆ ತಕ್ಕ ವೇತನವೂ ಲಭಿಸಲಿದೆ.
ನ. 15ರಿಂದ ಈ ಒಪ್ಪಂದ ಜಾರಿಗೆ ಬರಲಿದೆ. ಜೂನಿಯರ್, ಸಬ್-ಜೂನಿಯರ್, ಅಂಡರ್-23 ಕುಸ್ತಿಪಟಗಳೂ ಒಳಗೊಂಡಂತೆ 150 ಕುಸ್ತಿ ಪಟುಗಳಿಗೆ ಈ ಒಪ್ಪಂದ ಸಹಾಯಕವಾಗಲಿದೆ. ಪ್ರತಿ ವರ್ಷ ಈ ಒಪ್ಪಂದ ಪರಿಶೀಲನೆಗೊಳ್ಳಲಿದೆ. 5 ಹಂತಗಳಲ್ಲಿ ಹಿರಿಯ ಕುಸ್ತಿ ಪಟುಗಳಿಗೆ ಹಾಗೂ 4 ಹಂತಗಳಲ್ಲಿ ಕಿರಿಯ ಕುಸ್ತಿಪಟುಗಳಿಗೆ ಶ್ರೇಣಿಗಳನ್ನು ಮೀಸಲಿರಿಸಲಾಗಿದೆ. ಈ ಶ್ರೇಣಿಯಲ್ಲಿ ಒಲಿಂಪಿಕ್ಸ್, ವಿಶ್ವ ಚಾಂಪಿಯನ್ಶಿಪ್, ಏಶ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್, ಯೂತ್ ಒಲಿಂಪಿಕ್ ಹಾಗೂ ಉಳಿದ ಪ್ರಮುಖ ಕೂಟಗಳಲ್ಲಿ ಗೆದ್ದ ಪದಕಗಳನ್ನು ಗಣನೆಗೆ ತೆಗೆದು ಕೊಳ್ಳಲಾಗುತ್ತದೆ. ಇದರೊಂದಿಗೆ ಮೊದಲ ಬಾರಿಗೆ ಕುಸ್ತಿ ಸ್ಪರ್ಧೆಯ ನೇರ ಪ್ರಸಾರಕ್ಕಾಗಿ ವಿವಿಧ ಕ್ರೀಡಾ ವಾಹಿನಿಗಳೊಂದಿಗೆ ಮಾತು ಕತೆ ಕೂಡ ನಡೆದಿದೆ.
ಕುಸ್ತಿಯನ್ನು ಪೂರ್ಣ ಪ್ರಮಾಣದ ವಾಣಿಜ್ಯ ಕ್ರೀಡೆಯಾಗಿಸುವ ಕನಸನ್ನು ನನಸು ಮಾಡಲು ಹತ್ತಿರವಾಗುತ್ತಿದ್ದೇವೆ. ಈ ಮೂಲಕ ನಮ್ಮೆಲ್ಲ ಕುಸ್ತಿ ಪಟುಗಳು ಆರ್ಥಿಕವಾಗಿ ಉತ್ತಮರಾಗುತ್ತಾರೆ.
-ಬ್ರಿಜ್ ಭೂಷಣ್ ಶರಣ್ ಸಿಂಗ್, ಡಬ್ಲ್ಯುಎಫ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.