ನೆಲದ ಮೇಲಲ್ಲ, ಆಗಸದಲ್ಲೂ ಕನ್ನಡ ಭಾಷೆಯ ತಾತ್ಸಾರ


Team Udayavani, Nov 1, 2018, 6:00 AM IST

b-24.jpg

ಬೆಂಗಳೂರು: ಕನ್ನಡ ಭಾಷೆ ಎಂದರೆ ನಮ್ಮವರಿಗೆ ತಾತ್ಸಾರ ಎಂಬ ಮಾತು ಕೇವಲ ಭೂಮಿ ಮೇಲಲ್ಲ. ಆಕಾಶದಲ್ಲಿ ಹಾರಾಡುವ ವಿಮಾನದಲ್ಲಿಯೂ ಇದೆ! ಪ್ರಾದೇಶಿಕ ವಾಯುಯಾನದಲ್ಲಿ ಕನ್ನಡವೇ ಮೊಳಗುತ್ತಿಲ್ಲ! ಕೇಂದ್ರ ಸರ್ಕಾರ “ಉಡಾನ್‌’ ಯೋಜನೆಯಡಿ
ಪ್ರಾದೇಶಿಕವಾಗಿ ವಿಮಾನಯಾನ ಸೇವೆಯನ್ನು ಆರಂಭಿಸಿದೆ. ಅದರಂತೆ ರಾಜ್ಯದಲ್ಲಿ ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಮಂಗಳೂರು ಹಾಗೂ ಇತರ ನಗರಗಳ ನಡುವೆ ಅನೇಕ ಖಾಸಗಿ ಕಂಪನಿ  ಗಳೂ ವಿಮಾನ ಹಾರಿಬಿಟ್ಟಿವೆ. ಆದರೆ, ಗಗನ ಸಖಿಯರು ಮಾತ್ರ ವಿಮಾನದಲ್ಲಿ ಕನ್ನಡವನ್ನೇ ಬಳಸುತ್ತಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳಲ್ಲಿ ಮಂಗಳೂರಿಗೆ ತೆರಳಬೇಕಿದ್ದರೆ, ಹಿಂದಿ, ಇಂಗ್ಲಿಷ್‌ ಅಥವಾ ಮಲಯಾಳಂನಲ್ಲಿ ಮಾತನಾಡುತ್ತಾರೆ. ಹುಬ್ಬಳ್ಳಿಗೆ ತೆರಳಿದರೆ, ಹಿಂದಿ,
ಇಂಗ್ಲಿಷ್‌ ಜೊತೆ ಮರಾಠಿ ಯಲ್ಲೂ ಮಾತಾಡುತ್ತಾರೆ. ಆದರೆ, ಕನ್ನಡ ಮಾತಾಡುವ ಗಗನಸಖಿ ಮಾತ್ರ ಕಾಣಿಸುತ್ತಲೇ ಇಲ್ಲ.
“ಪ್ರಯಾಣಿಕರು ನಮ್ಮೊಂದಿಗೆ ಯಾವ ಭಾಷೆ ಮಾತಾಡಬಹುದು?’ ಎಂದು ವಿಮಾನ ನೆಲದಿಂದ ಚಿಮ್ಮುವ ಮೊದಲು 
ಗಗನಸಖೀಯರು, ಪ್ರಯಾಣಿಕರಿಗೆ ಸೂಚನೆ ನೀಡುವುದು ವಾಡಿಕೆ. ಇಂಗ್ಲಿಷ್‌, ಹಿಂದಿ, ಮಲಯಾಳಂ, ಮರಾಠಿ, ಪಂಜಾಬಿ ಭಾಷೆಯ 
ನ್ನಷ್ಟೇ ಅವರು ಆ ಕ್ಷಣ ಆಯ್ಕೆಯಾಗಿ ಪ್ರಯಾಣಿಕರ ಮುಂದಿಡುತ್ತಾರೆ.

ಕೇಂದ್ರಕ್ಕೆ ಮನವಿ ಪತ್ರ: ಕನ್ನಡ ಕುರಿತ ವಿಮಾನಯಾನ ಸಂಸ್ಥೆಗಳ ಈ ನಿರ್ಲಕ್ಷದ ಬಗ್ಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಕನ್ನಡ ಗ್ರಾಹಕರ ಕೂಟವು ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರವನ್ನೂ ಬರೆದಿದೆ. ದೇಶೀಯವಾಗಿ ಸೇವೆ ನೀಡುವ ವಿಮಾನಗಳಲ್ಲಿ, ಪ್ರಾದೇಶಿಕ ಭಾಷೆ ಬಳಕೆ ಕಡ್ಡಾಯಗೊಳಿಸುವಂತೆ ಒತ್ತಾಯಿಸಿವೆ. ಅಲ್ಲದೆ, ರಾಜ್ಯದ ಸಂಸದರ ಗಮನಕ್ಕೂ ಈ
ವಿಚಾರವನ್ನು ತಂದಿದ್ದಾರೆ.

ವಿದೇಶಿ ವಿಮಾನಗಳಲ್ಲಿ ಕಂಡ ಕನ್ನಡ ಇಲ್ಲಿಲ್ಲ!
ಸಿಂಗಾಪುರದ ಕ್ಯಾಪೆ ಪೆಸಿಫಿಕ್‌, ಬ್ರಿಟೀಷ್‌ ಏರ್‌ವೆಸ್‌, ಫ್ರಾನ್ಸ್‌ನ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಗಳೂ ಕನ್ನಡದಲ್ಲಿಯೇ ಮೆನು ನೀಡುತ್ತಿವೆ. ಆದರೆ, ಕರುನಾಡಿನ ಆಗಸದಲ್ಲೇ ಕನ್ನಡ ಕಾಣಿಸುತ್ತಿಲ್ಲ 

ಆನ್‌ಲೈನ್‌ ಅಭಿಯಾನ
ವಿಮಾನ ಯಾನ ಸಂಸ್ಥೆಗಳ ಕನ್ನಡ ನಿರ್ಲಕ್ಷ್ಯ ವಿರುದ್ಧ ಕನ್ನಡ ಗ್ರಾಹಕರ ಕೂಟದ ಸದಸ್ಯರು, “ಸರ್ವ್‌ ಇನ್‌ ಮೈ ಲಾಂಗ್ವೇಜ್‌’ ಹೆಸರಿನಲ್ಲಿ ಆನ್‌ಲೈನ್‌ ಅಭಿಯಾನ ಆರಂಭಿಸಿದ್ದಾರೆ. ಇದರೊಂದಿಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಬನವಾಸಿ ಬಳಗವೂ ಈ ಬಗ್ಗೆ ಟ್ವಿಟರ್‌ ಅಭಿಯಾನ ಆರಂಭಿಸಲು ನಿರ್ಧರಿಸಿದೆ.

ಈಗಿನ ತಂತ್ರಜ್ಞಾನ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅವರ ಮಾತೃ ಭಾಷೆಯಲ್ಲಿಯೇ ಕೇಳಿಸುವ ತಂತ್ರಜ್ಞಾನ ಇದೆ.
ವಿಮಾನಯಾನ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬದಲಾಗಬೇಕು. 

ಅರುಣ್‌ ಜಾವಗಲ್‌, ಕನ್ನಡ ಗ್ರಾಹಕರ ಕೂಟ

ಶಂಕರ್ ಪಾಗೋಜಿ

ಟಾಪ್ ನ್ಯೂಸ್

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್‌, ಸಿಮ್ರನ್‌ ಗೆ ಕಂಚು

20

UV Fusion: ವಿಘ್ನ ವಿನಾಯಕನಿಗೆ ನಮನ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Aryna Sabalenka won US Open 2024

US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ‌

2-desiswara-1

Teacher: ಗುರಿಯೊಂದಿಗೆ ಗುರುಕೃಪೆಯಿದ್ದರೆ ಯಶ

21

Ganesh Chaturthi: ಸರಳ, ಪರಿಸರ ಸ್ನೇಹಿಯಾಗಿರಲಿ ಗಣೇಶ

Fresh Manipur Violence

Manipur: ಮುಂದುವರಿದ ಹಿಂಸಾಚಾರ; ಗುಂಡಿನ ಕಾಳಗದಲ್ಲಿ ಆರು ಮಂದಿ ಸಾವು

1-teachers-day

Teacher’s Day ವಿಶೇಷ: ವಿಚಾರ ವಿನಿಮಯ ಶಿಕ್ಷಣದ ಸುತ್ತ: ಆಲೋಚನೆಯಲ್ಲಿ ವೈವಿಧ್ಯತೆ ಇರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.