ಶ್ರೀ ರಾಮಚಂದ್ರಾಪುರ ಮಠ ಪುಣೆ ಘಟಕದ ವಿಶೇಷ ಸಭೆ
Team Udayavani, Nov 1, 2018, 4:29 PM IST
ಪುಣೆ: ಶ್ರೀ ರಾಮಚಂದ್ರಾಪುರ ಮಠ ಹಾಗೂ ಪೂಜ್ಯ ಗುರುವರ್ಯರ ಬಗ್ಗೆ ಅಪಾರವಾದ ಗೌರವ ಹೊಂದಿರುವ ನಾವುಗಳು ಮಠದ ಧಾರ್ಮಿಕ ಪರಂಪರೆಯನ್ನು ನಂಬಿಕೊಂಡು ಬಂದಿದ್ದೇವೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಮಠದ ಹಾಗೂ ಗುರುಗಳ ಬಗ್ಗೆ ವ್ಯವಸ್ಥಿತವಾಗಿ ಷಡ್ಯಂತ್ರಗಳು ಅವಿರತವಾಗಿ ನಡೆಯುತ್ತಾ ಇದೆ. ಇತ್ತೀಚೆಗೆ ಷಡ್ಯಂತ್ರಿಗಳು ಕೊಡುವ ತೊಂದರೆಗಳು ತಾರಕಕ್ಕೇರಿದ ಕಾರಣ ಸುಮ್ಮನೆ ಕೂರದೆ ನಾವೆಲ್ಲ ಒಂದಾಗಿ ವಿರೋಧಿಸಬೇಕಾಗಿದೆ. ಗುರುಗಳಿಗೆ ಹಾಗೂ ಮಠಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಪುಣೆಯಲ್ಲಿರುವ ಶ್ರೀ ಮಠದ ಶಿಷ್ಯವರ್ಗವೆಲ್ಲ ಸೇರಿ ನ್ಯಾಯಕ್ಕಾಗಿ ಒಂದಾಗಿ ಧ್ವನಿಯಾಗಬೇಕಾಗಿದೆ ಎಂದು ರಾಮಚಂದ್ರಾಮಠದ ಪುಣೆ ಘಟಕದ ಅಧ್ಯಕ್ಷ ಮದಂಗಲ್ಲು ಆನಂದ ಭಟ್ ನುಡಿದರು.
ನಿವೃತ್ತ ಸೈನಿಕ ಶಾಮ್ ರಾಜ್ ಎಡನೀರು ಅವರ ನೇತೃತ್ವದಲ್ಲಿ ನಡೆದ ರಾಮಚಂದ್ರಾಪುರ ಮಠದ ಪುಣೆ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುಣೆಯಲ್ಲಿರುವ ಶ್ರೀ ಮಠದ ಶಿಷ್ಯವೃಂದದ ಎಲ್ಲರನ್ನೂ ಸಂಪರ್ಕಿಸಿ ಸಮಾಜಹಿತದ ದೃಷ್ಟಿ ಯಿಂದ ಅನ್ಯಾಯದ ವಿರುದ್ಧ ಹೋರಾಡಬೇಕಿದೆ ಎಂದು ಅವರು ನುಡಿದರು.
ನಿವೃತ್ತ ಸೈನಿಕ ಶಾಮ್ರಾಜ್ ಎಡನೀರು, ಪುಣೆ ಘಟಕದ ಉಪಾಧ್ಯಕ್ಷರಾದ ಉದಯ ಕುಮಾರ್ ಕೊಡಕ್ಕಲು, ಮದಂಗಲ್ಲು ಅಶೋಕ್ ಭಟ್, ಕಾರ್ಯದರ್ಶಿ ಶ್ಯಾಮ್ ಸುಂದರ್ ವಳಕ್ಕುಂಜ, ಕೋಶಾಧಿಕಾರಿ ಗಣೇಶ್ ಪ್ರಸಾದ್ ಕೊಣಿಲ, ಮಹಿಳಾ ಕಾರ್ಯಾಧ್ಯಕ್ಷೆ ಮಲ್ಲಿಕಾ ಶ್ಯಾಮ್ ಸುಂದರ್ ವಳಕ್ಕುಂಜ, ಹೇಮಾ ಆನಂದ ಭಟ್ ಉಪಸ್ಥಿತರಿದ್ದರು. ಪುಣೆಯ ಹವ್ಯಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”
Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ
Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ
ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್: ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಯಕ್ಷಧ್ರುವ ಪಟ್ಲ ಫೌಂಡೇಶನ್: 75 ದಿನಗಳ ಯಕ್ಷಯಾನ ಸಮಾರೋಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.