ರಾಮಾಯಣ, ರಾಮಚರಿತೆಯ ಮಧುರ ಕಾವ್ಯ


Team Udayavani, Nov 3, 2018, 3:25 AM IST

88.jpg

ರಾಮಾಯಣ, ಎಲ್ಲರೂ ಓದಲೇ ಬೇಕಾದ ಕಾವ್ಯ. ಇದರಲ್ಲಿ ಯಾವುದು ಧರ್ಮ? ಯಾವುದು ಅಧರ್ಮ? ಎಂಬುದು ಬಿಂಬಿತವಾಗಿದೆ. ರಾಮನ ಬಾಲ್ಯ ಮಕ್ಕಳಿಗೆ ಮಾದರಿಯಾದರೆ ಆತನ ಆದರ್ಶ ಮನುಜರಿಗೆಲ್ಲರಿಗೂ ಮಾದರಿ. ಯಾವುದೇ ಓದು ನಮಗೆ ಮುದವನ್ನು ನೀಡುವ ಜೊತೆಗೆ ಒಂದು ಜ್ಞಾನವನ್ನೋ ಅರಿವನ್ನೂ ನೀಡಬೇಕಂತೆ. ಅಂತಹ ಓದಿಗೆ ಹೇಳಿಮಾಡಿಸಿದ್ದು ಈ ರಾಮಾಯಣ. 

ರಾಮಾಯಣವೆಂಬ ಮಹಾನ್‌ ಕಾವ್ಯದ ಪಿತಾಮಹರಾದ ವಾಲ್ಮೀಕಿ ಮಹರ್ಷಿಗಳು ಸದಾ ವಂದನಾರ್ಹರು. ಯುಗಯುಗಗಳೇ ಉರುಳಿದರೂ, ರಾಮಾಯಣ ಜೀವಂತವಾಗಿದೆ. ಅಂತೆಯೇ, ವಾಲ್ಮೀಕಿ ಮಹರ್ಷಿಗಳೂ ಜನಮಾನಸದಲ್ಲಿ ಜೀವಂತವಾಗಿರುವ ಕವಿಶ್ರೇಷ್ಠರು. ಅವರೊಬ್ಬ ಕಾವ್ಯದ ಶಕ್ತಿ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸೇನನ ಮಗ. ಇವರು ಹಲವು ವರ್ಷಗಳ ಕಾಲ ತಪಸ್ಸು ಆಚರಿಸಿದ್ದರು. ಆ ಸಮಯದಲ್ಲಿ ಇವರ ದೇಹದ ಸುತ್ತಲೂ ಹುತ್ತ ಬೆಳೆದುಕೊಂಡಿತ್ತು. ನಂತರ ಆ ಹುತ್ತವನ್ನು ಒಡೆದುಕೊಂಡು ಹೊರಬಂದಿದ್ದರಿಂದ ವಾಲ್ಮೀಕಿ ಎಂಬ ಹೆಸರು ಬಂತು. ಸಂಸ್ಕೃತದಲ್ಲಿ ವಾಲ್ಮೀಕಿ ಎಂದರೆ ಹುತ್ತ ಎಂಬರ್ಥವಿದೆ.

ವಾಲ್ಮೀಕಿ ಮಹರ್ಷಿಗಳ ಬಗ್ಗೆ ದಂತಕಥೆಯೊಂದಿದೆ. ಅವರು ಮೊದಲು ದಾರಿಹೋಕರನ್ನು ದರೋಡೆ ಮಾಡಿಕೊಂಡು ಬದುಕುತ್ತಿದ್ದರಂತೆ. ಒಮ್ಮೆ ನಾರದರನ್ನು ದರೋಡೆ ಮಾಡಲು ಮುಂದಾದಾಗ-“ನೋಡು, ಆ ಮರವನ್ನು ನೋಡಿಕೊಂಡು ಆಮರ.. ಆಮರ..ಆಮರ ಎಂದು ಹೇಳುತ್ತಲೇ ಇರು, ಆಗ ನಿನಗೆ ಸಕಲೈಶ್ವರ್ಯ ದೊರೆಯುತ್ತದೆ ಎಂದು ಹೇಳಿ ಅಲ್ಲಿಂದ ಮಾಯವಾದವರಂತೆ. ಆ ಮರುಕ್ಷಣದಿಂದ ಆ ದರೋಡೆಕೋರ ಆಮರ..ಆಮರ..ಆಮರ ಎಂದು ಜಪಿಸುತ್ತ ಅದು ಆಮರದಿಂದ ರಾಮ, ರಾಮ, ರಾಮ ಎಂದು- ರಾಮಜಪವಾಗಿ ಪರಿವರ್ತಿತವಾಗಿ ರಾಮಾಯಣವನ್ನು ಬರೆದ ಮಹಾನ್‌ ಕವಿ, ಆದಿಕವಿಯಾದರು ಎಂದು ಈ ಕಥೆ ಹೇಳುತ್ತದೆ.

ವಾಲ್ಮೀಕಿ ಮುನಿಗಳು ಸಂಸ್ಕೃತದಲ್ಲಿ ರಚಿಸಿದ ರಾಮಯಾಣ ಕಾವ್ಯವು,  ಹಿಂದೂಧರ್ಮದ ಮಹಾಕಾವ್ಯವಾಗಿ ಪರಿಗಣಿಸಲ್ಪಟ್ಟಿದೆ. ಇಡೀ ರಾಮಾಯಣ ಕಾವ್ಯವು ಜೀವನದ ಸನ್ಮಾರ್ಗವನ್ನು ತೋರಿಸಿಕೊಟ್ಟಿದೆ. ಬಾಲಕರಿಂದ ಹಿಡಿದು ಹಿರಿಯರತನಕ ಅಳವಡಿಸಿಕೊಳ್ಳಬೇಕಾದ ವಿವೇಕ, ಸಾಧನೆ, ಸತ್ಯ, ಸನ್ನಡತೆಗಳನ್ನು ಎಳೆಎಳೆಯಾಗಿ ಪ್ರತಿಯೊಂದು ಪಾತ್ರದ ಮೂಲಕ ಇದರಲ್ಲಿ ಹೇಳಿ¨ªಾರೆ. ವಾಲ್ಮೀಕಿ ರಾಮಾಯಣವು ರಾಮಚರಿತ್ರೆಯನ್ನು ಮಧುರವಾಗಿ ಬಿಡಿಸಿಟ್ಟ ಮುತ್ತಿನ ಕಾವ್ಯ. ಇದು ಎÇÉಾ ಕವಿಗಳಿಗೆ ಸ್ಫೂರ್ತಿಯೂ ಮಾದರಿಯೂ ಆಗಿದೆ. ರಾಮಾಯಣದ ಪ್ರತಿಯೊಂದು ಸನ್ನಿವೇಶವೂ ರೋಚಕ ಮತ್ತು ಕುತೂಹಲಕಾರಿಯಾಗಿದೆ. ಓದಲು ಬರೆಯಲು ಬಾರದ ನಮ್ಮ ಪೂರ್ವಜರಿಗೂ ರಾಮಾಯಣ ಸಂಪೂರ್ಣವಾಗಿ ಗೊತ್ತಿತ್ತು. ವಾಲ್ಮೀಕಿಯ ಬಗ್ಗೆ ಗೊತ್ತಿತ್ತು. ಸಣ್ಣ ಮಕ್ಕಳನ್ನು ಸಂತಸವಾಗಿಡುವ ಹಲವು ಸಂಗತಿಗಳಲ್ಲಿ ರಾಮಾಯಣದ ಕಥೆಗಳೂ ಸೇರಿದ್ದುವು. ಇದು ಕೇವಲ ಕಥೆಯಾಗಿರದೆ ಮಕ್ಕಳ ಮನಸ್ಸಿನಲ್ಲಿ ಸುಸಂಸ್ಕಾರವನ್ನು ಬೆಳೆಸಲು ಸಹಾಯಕವಾಗಿರುವುದು ವಿಶೇಷ.

ಇಂತಹ ವಿಶೇಷ ಕಾವ್ಯವನ್ನು ನಮ್ಮೆಲ್ಲರಿಗೂ ಒದಗಿಸಿಕೊಟ್ಟ ಮಹಾನ್‌ ಚೇತನ ವಾಲ್ಮೀಕಿ ಮಹರ್ಷಿಗಳನ್ನು ನೆನೆದು ವಂದಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ರಾಮಾಯಣ, ಎಲ್ಲರೂ ಓದಲೇ ಬೇಕಾದ ಕಾವ್ಯ. ಇದರಲ್ಲಿ ಯಾವುದು ಧರ್ಮ? ಯಾವುದು ಅಧರ್ಮ? ಎಂಬುದು ಬಿಂಬಿತವಾಗಿದೆ. ರಾಮನ ಬಾಲ್ಯ ಮಕ್ಕಳಿಗೆ ಮಾದರಿಯಾದರೆ ಆತನ ಆದರ್ಶ ಮನುಜರಿಗೆಲ್ಲರಿಗೂ ಮಾದರಿ. ಯಾವುದೇ ಓದು ನಮಗೆ ಮುದವನ್ನು ನೀಡುವ ಜೊತೆಗೆ ಒಂದು ಜ್ಞಾನವನ್ನೋ ಅರಿವನ್ನೂ ನೀಡಬೇಕಂತೆ. ಅಂತಹ ಓದಿಗೆ ಹೇಳಿಮಾಡಿಸಿದ್ದು ಈ ರಾಮಾಯಣ. ಇಂತಹ ರಾಮಾಯಾಣದ ಜನಕನನ್ನು ಮರೆಯುದು ಸಾಧ್ಯವೇ? ಸರಿಯೇ?

ವಾಲ್ಮೀಕಿ ಮಹರ್ಷಿಗಳನ್ನು ಸ್ಮರಿಸುತ್ತ, ಅವರು ರಾಮಾಯಣದ ಮೂಲಕ ಹೇಳಿದ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಆದಿಕವಿಯ ಚರಣಗಳಿಗೆ ವಂದಿಸಿ, ಸನ್ನಡತೆಯ ದಾರಿಯಲ್ಲಿ ನಡೆಯೋಣ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.