ಅಪಾರ್ಟ್ಮೆಂಟ್ನಲ್ಲಿ ಚಿನ್ನ ದೋಚುತ್ತಿದ್ದವಳ ಸೆರೆ
Team Udayavani, Nov 3, 2018, 12:17 PM IST
ಬೆಂಗಳೂರು: ವಿಲಾಸಿ ಜೀವನ ನಡೆಸಲು ಅಪಾರ್ಟ್ಮೆಂಟ್ಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಶಿವಾಜಿನಗರದ ತಿಮ್ಮಯ್ಯ ರಸ್ತೆ ನಿವಾಸಿ ಶಾಂತಿ (38) ಬಂಧಿತೆ. ಈಕೆಯಿಂದ 5 ಲಕ್ಷ ರೂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಕಳವು ಮಾಡಿದ್ದ ಚಿನ್ನಾಭರಣ ಮಾರಾಟ ಮಾಡಿ ಶಾಪಿಂಗ್, ಪಬ್, ವಸ್ತುಗಳ ಖರೀದಿಸಿ ವಿಲಾಸಿ ಜೀವನ ನಡೆಸುತ್ತಿದ್ದಳು. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದಳು. ಬಿಡುಗಡೆ ಬಳಿಕವೂ ಕೃತ್ಯ ಮುಂದುವರಿಸಿದ್ದಳು ಎಂದು ಪೊಲೀಸರು ಹೇಳಿದರು.
ಅಪಾರ್ಟ್ಮೆಂಟ್ಗಳೇ ಟಾರ್ಗೆಟ್: ಕೆಲಸ ಕೇಳುವ ನೆಪದಲ್ಲಿ ಅಪಾರ್ಟ್ಮೆಂಟ್ಗೆ ಹೋಗುತ್ತಿದ್ದಳು. ಯಾವುದಾದರೂ ಮನೆ ಬಾಗಿಲು ತೆಗೆದಿದ್ದರೆ ಕೈಗೆ ಸಿಕ್ಕ ವಸ್ತುಗಳನ್ನು ದೋಚುತ್ತಿದ್ದಳು. ಒಂದು ವೇಳೆ ಮನೆ ಮಾಲಿಕರು ಬಾಗಿಲು ತೆರೆದರೆ ಮನೆ ಕೆಲಸಕ್ಕೆ ಬಂದಿರುವುದಾಗಿ ಹೇಳಿ ವಾಪಸ್ ಆಗುತ್ತಿದ್ದಳು.
ನಕಲಿ ಚಿನ್ನಾಭರಣ!: ಕೆಲ ತಿಂಗಳ ಹಿಂದೆ ಈಕೆ, ಕೋರಮಂಗಲದ ಅಪಾರ್ಟ್ಮೆಂಟ್ವೊಂದರಲ್ಲಿ ಮನೆ ಕೆಲಸಕ್ಕೆ ಸೇರಿಕೊಂಡಿದ್ದಳು. ಮನೆ ಮಾಲಿಕರ ಬಳಿ ನಂಬಿಕೆಗಳಿಸುವ ನಾಟಕವಾಡಿದ್ದ ಶಾಂತಿ, ಮನೆಯಲ್ಲಿನ ಚಿನ್ನಾಭರಣ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಳು.
ಬಳಿಕ ಯಾರು ಇಲ್ಲದ ವೇಳೆ ಆ ಆಭರಣ ಕಳವು ಮಾಡಿ ಅದೇ ಸ್ಥಳದಲ್ಲಿ ನಕಲಿ ಆಭರಣ ಇಡುತ್ತಿದ್ದಳು. ಈ ಮಧ್ಯೆ ಕಬೋರ್ಡ್ನಲ್ಲಿದ್ದ ಮಾಂಗಲ್ಯ ಸರ ಕದ್ದು, ಅದೇ ಮಾದರಿಯ ಮಾಂಗಲ್ಯ ಸರವನ್ನು ಶಿವಾಜಿನಗರದಲ್ಲಿ ಮಾಡಿಸಿ ಕಬೋರ್ಡ್ನಲ್ಲಿ ಇಟ್ಟಿದ್ದಳು. ಈ ಸಂಬಂಧ ಮನೆ ಮಾಲಿಕರು ಕೋರಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.