8ನೇ ಆವೃತ್ತಿಯ ಕಲಾ ಉತ್ಸವಕ್ಕೆ ಚಾಲನೆ


Team Udayavani, Nov 3, 2018, 12:17 PM IST

8ne-avru.jpg

ಬೆಂಗಳೂರು: ಅಲ್ಲಿ ನಿಮ್ಮನ್ನು ಸ್ವಾಗತಿಸುವುದು ಅಪರೂಪದ ಕಲಾಕೃತಿಗಳಾದರೂ ಮುಂದುವರಿದಂತೆ ಕಂಡುಬರುವುದು ಕಣ್ಮನ ತಣಿಸುವ ವೈವಿಧ್ಯಮಯ ಬಣ್ಣದ ಚಿತ್ರಗಳು. ನೋಡನೋಡುತ್ತಿದ್ದಂತೆ ನಿಮ್ಮನ್ನು ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡುತ್ತವೆ. ಈ ಅದ್ಭುತ ಕಲಾಕೃತಿಗಳು. ಅವು ಎಲ್ಲಿವೆ ಎಂದು ಯೋಚಿಸುತ್ತಿದೀªರೆ, ಅವುಗಳು ನಗರದ ಯುಬಿ ಸಿಟಿಯ ಕಲೆಕ್ಷನ್‌ ಕೇಂದ್ರದಲ್ಲಿ ಪ್ರದರ್ಶನಗೊಂಡಿವೆ.

ದೇಶದ 17 ಖ್ಯಾತ ಕಲಾವಿದರ ವಿಶಿಷ್ಟ ಕಲಾಕೃತಿಗಳು ಪ್ರದರ್ಶನಗೊಂಡಿರುವುದು ಬಹುನಿರೀಕ್ಷಿತ ಆರ್ಟ್‌ ಬೆಂಗಳೂರು-2018ರ ಕಲಾ ಉತ್ಸವದಲ್ಲಿ. ನ.2 ರಿಂದ 11ರವರೆಗೆ 10 ದಿನಗಳು ನಡೆಯುವ ಈ ಉತ್ಸವದಲ್ಲಿ ದೇಶದ ಖ್ಯಾತ ಕಲಾವಿದರಾದ ಬಾಲನ್‌ ನಂಬಿಯಾರ್‌, ಗುರುದಾಸ್‌ ಶೆಣೈ, ವಿಪ್ತ ಕಪಾಡಿಯ, ಪಲ್ಲನ್‌ ದಾರುವಾಲ, ಡಿ. ವೆಂಕಟಪತಿ, ಚಂದನ್‌ ಭೌಮಿಕ್‌, ರೋಹಲ್‌ ಸುಲೈಮಾನ್‌, ಯುವನ್‌ ಬೋತಿಸತ್ವಾವುರ್‌, ಆಶಿಷ್‌ ದುಬೆ ಮುಂತಾದವರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಆರ್ಟ್‌ ಬೆಂಗಳೂರು ಸಂಸ್ಥಾಪಕಿ ಮತ್ತು ಪ್ರಸ್ಟಿಜ್‌ ಗ್ರೂಪ್‌ ನಿರ್ದೇಶಕಿ ಉಜ್ಮಾ ಇರ್ಫಾನ್‌ ಅವರು ಮಾತನಾಡಿ, ಒಂದು ಸುಂದರ ಕಲಾಕೃತಿಯನ್ನು ಕಂಡು ಮೆಚ್ಚಿಕೊಂಡಾಗ ಬದುಕಿನ ಹಲವಾರು ಒತ್ತಡಗಳು ಕಡಿಮೆಯಾಗುತ್ತವೆ. ಈ ಉತ್ಸವದ ಅಸಂಖ್ಯಾತ ಚಿತ್ರಗಳನ್ನು ಸಾರ್ವಜನಿಕರು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.

ನಮ್ಮಲ್ಲಿ ಗುಣಮಟ್ಟದ ಗ್ಯಾಲರಿಗಳ ಅಲಭ್ಯತೆ, ವಸ್ತು ಸಂಗ್ರಹಾಲಯಗಳು ಹಾಗೂ ಸಾರ್ವಜನಿಕ ಕಲಾ ಸ್ಥಳಗಳ ಕೊರತೆ ಹಾಗೂ ಸುಲಭವಾಗಿ ಪ್ರವೇಶಿಸಬಹುದಾದ ಕಲಾ ಶಿಕ್ಷಣ ಸಂಸ್ಥೆಗಳ ಅಲಭ್ಯದಿಂದ ಕಲೆ ಜನರಿಂದ ಕಡೆಗಣಿಸಲ್ಪಟ್ಟಿದೆ ಎಂದು ಸಂಸ್ಥೆಯ ಕ್ಯೂರೇಟರ್‌ ಅಭಿಷೇಕ್‌ ನಾಯ್ಡು ಬೇಸರ ವ್ಯಕ್ತಪಡಿಸಿದರು.

ಫೆಸ್ಟಿವಲ್‌ನಲ್ಲಿ ಏನೇನಿವೆ: “ಆರ್ಟ್‌ ಬೆಂಗಳೂರು-2018’ರ ಆರ್ಟ್‌ ಫೆಸ್ಟಿವಲ್‌ನ 8ನೇ ಆವೃತ್ತಿಯಲ್ಲಿ ಛಾಯಾಗ್ರಹಣ, ಫೋಟೋ ಮಾಧ್ಯಮ, ಮಿಶ್ರ ಮಾಧ್ಯಮ ಕಲಾಕೃತಿಗಳು, ತೈಲ ವರ್ಣಗಳು, ಅಕ್ರಿಲಿಕ್‌ಗಳು, ಪೆನ್‌ ಮತ್ತು ಇಂಕ್‌ ರೇಖಾಚಿತ್ರಗಳು, ಶಿಲ್ಪಗಳು (ಮರದ, ಉಕ್ಕು ಮತ್ತು ಕಾಗದ) ಮತ್ತು ವಿಡಿಯೋ ಕಲಾಕೃತಿಗಳನ್ನು ಕಾಣಬಹುದು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.