ಕರಾಯ: ಚಿರತೆ ಹಿಡಿಯಲು ಬೋನಿಟ್ಟ ಅರಣ್ಯ ಇಲಾಖೆ
Team Udayavani, Nov 4, 2018, 3:11 PM IST
ಉಪ್ಪಿನಂಗಡಿ: ಒಂದು ವಾರದಿಂದ ಪದೇ ಪದೇ ಕಾಣಿಸುತ್ತಿದ್ದ ಚಿರತೆ ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯ ಅಳಕೆ ಎಂಬಲ್ಲಿ ಶನಿವಾರ ಹಗಲಲ್ಲೇ ಕಾಣಿಸಿದ್ದು, ಅರಣ್ಯ ಇಲಾಖೆ ಬೋನು ತಂದಿರಿಸಿ, ಚಿರತೆ ಸೆರೆಹಿಡಿಯಲು ಮುಂದಾಗಿದೆ.
ಕರಾಯ ಆಸುಪಾಸಿನಲ್ಲಿ ಒಂದು ವಾರದಿಂದ ಗ್ರಾಮಸ್ಥರ ಭೀತಿಗೆ ಕಾರಣವಾಗಿದ್ದ ಚಿರತೆ, ಸಾಕು ನಾಯಿಗಳನ್ನು ಬೇಟೆಯಾಡಿ, ಮರೆಯಾಗುತ್ತಿತ್ತು. ಶನಿವಾರ ಎರಡು ಚಿರತೆಗಳು ಗೋಚರಿಸಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬೋನು ತಂದಿರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಸಂಧ್ಯಾ, ಗ್ರಾಮಸ್ಥರಿಗೆ ಕಾಣಸಿಕ್ಕ ಪ್ರಾಣಿ ಚಿರತೆ ಎಂಬ ಕುರಿತು ಇಲಾಖೆಗೆ ಖಚಿತತೆ ಇಲ್ಲ. ಆದರೂ ಬೋನು ತಂದಿರಿಸಿ, ಸೆರೆಹಿಡಿಯುವ ಪ್ರಯತ್ನ ಮಾಡಿದ್ದೇವೆ. ಸ್ಥಳೀಯರು ‘ನಾಯಿ ಪಿಲಿ’ ಎಂದು ಕರೆಯುವ ಕತ್ತೆ ಕಿರುಬ ಆಗಿರುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.