ಏಷ್ಯಾಡ್‌ ಚಿನ್ನ ಸ್ವಪ್ನಾಗೆ ಕಡೆಗೂ ಸಿಗಲಿದೆ ಸರಿಯಾದ ಶೂ


Team Udayavani, Nov 8, 2018, 6:00 AM IST

swapna-barman-shoes.jpg

ನವದೆಹಲಿ: ಈ ಬಾರಿ ಏಷ್ಯನ್‌ ಗೇಮ್ಸ್‌ನ ಹೆಪಾrಥ್ಲಾನ್‌ನಲ್ಲಿ ಬಂಗಾಳದ ಸ್ವಪ್ನಾ ಬರ್ಮನ್‌ ಚಿನ್ನ ಗೆದ್ದಿದ್ದು ಎಲ್ಲರಿಗೂ ಗೊತ್ತು. ಈ ಕ್ರೀಡೆಯಲ್ಲಿ ಭಾರತಕ್ಕೆ ಬಂದ ಮೊದಲ ಏಷ್ಯಾಡ್‌ ಪದಕವಿದು. ಆದರೆ ಸರಿಯಾದ ಶೂಗಳಿಲ್ಲದೇ ಅತ್ಯಂತ ನೋವಿನಲ್ಲಿ ಬರ್ಮನ್‌ ಸ್ಪರ್ಧಿಸಿದ್ದರೆನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಎರಡೂ ಪಾದಗಳಲ್ಲಿ 6 ಬೆರಳು ಹೊಂದಿರುವ ಬರ್ಮನ್‌ಗೆ ಬೇಕಾದಂತಹ ರೀತಿಯಲ್ಲಿ ಶೂ ತಯಾರಿಸಿಕೊಡಲು ಯಾವ ಕಂಪನಿಯೂ ಮನಸ್ಸು ಮಾಡಿರಲಿಲ್ಲ. ಇದೀಗ ಅಡಿಡಾಸ್‌ ಕಂಪನಿ ಆ ಹೊಣೆ ಹೊತ್ತುಕೊಂಡಿದ್ದು ಬರ್ಮನ್‌ಗೆ 7 ಜೊತೆ ಶೂ ನೀಡುವುದಾಗಿ ಘೋಷಿಸಿದೆ.

ಮಾಮೂಲಿಯಾಗಿ ಉತ್ಪಾದನೆಯಾಗುವ ಶೂಗಳು ಬರ್ಮನ್‌ಗೆ ಹೊಂದುವುದಿಲ್ಲ. ಎರಡೂ ಪಾದದಲ್ಲಿ ಒಂದು ಬೆರಳು ಹೆಚ್ಚಾಗಿರುವುದರಿಂದ ಇಂತಹ ಸ್ಥಿತಿ. ಅದಕ್ಕೆ ಪ್ರತ್ಯೇಕವಾಗಿ ಬರ್ಮನ್‌ಗಾಗಿಯೇ ತಯಾರಿಸಲ್ಪಟ್ಟ ಶೂಗಳು ಬೇಕು. ಏಷ್ಯಾಡ್‌ ಮುಗಿದು ಬರ್ಮನ್‌ ಚಿನ್ನ ಗೆದ್ದ ಮೇಲೆ ಈ ಸಮಸ್ಯೆ ಮುಗಿಯುವ ಲಕ್ಷಣ ಕಂಡಿದೆ. ಬರ್ಮನ್‌ ಜರ್ಮನಿಗೆ ತೆರಳಿ ಅಡಿಡಾಸ್‌ ಲ್ಯಾಬ್‌ನಲ್ಲಿ ಪಾದ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಸ್ವಪ್ನಾ ದೇಶದ ಹೆಮ್ಮೆ. ಆಕೆಗೆ ನೆರವು ನೀಡುವುದು ನಮ್ಮ ಕರ್ತವ್ಯ ಎಂದು ಅಡಿಡಾಸ್‌ ತಿಳಿಸಿದೆ. ಹೆಪಾrಥ್ಲಾನ್‌ನಲ್ಲಿ 7 ರೀತಿಯ ಕ್ರೀಡೆಗಳಿರುತ್ತವೆ. 7ರಲ್ಲೂ ನೀಡುವ ಒಟ್ಟಾರೆ ಫ‌ಲಿತಾಂಶ ಗಮನಿಸಿ ಪದಕ ನೀಡಲಾಗುತ್ತದೆ. ಅಡಿಡಾಸ್‌ ಏಳೂ ಕ್ರೀಡೆಗೆ ಪ್ರತ್ಯೇಕವಾಗಿ ಅನುಕೂಲವಾಗುವಂತೆ 7 ಪ್ರತ್ಯೇಕ ಶೂಗಳನ್ನು ತಯಾರಿಸುತ್ತಿದೆ. ಇನ್ನಾದರೂ ಬರ್ಮನ್‌ ದುಸ್ಥಿತಿ ನಿವಾರಣೆಯಾಗುತ್ತದೆನ್ನುವುದು ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯ.

ಏಷ್ಯಾಡ್‌ಗೂ ಮುನ್ನ ಬರ್ಮನ್‌ ಪಾದದ ಸ್ಥಿತಿ ಸುದ್ದಿಯಾಗಿತ್ತು. ಅತ್ಯಂತ ಹಳೆಯ ಶೂಗಳಲ್ಲಿ ಅವರು ಸ್ಪರ್ಧೆ ನಡೆಸಿದ್ದರು. ಕೆಲವು ಗೆಳೆಯರು ಆಕೆಗೆ ಈ ಬೆರಳನ್ನು ಕತ್ತರಿಸಿ ತೆಗೆಯಲೂ ಸಲಹೆ ನೀಡಿದ್ದರು. ಎಲ್ಲ ಸಮಸ್ಯೆಯನ್ನು ನುಂಗಿಕೊಂಡು ಪದಕ ಗೆದ್ದ ಬರ್ಮನ್‌ ತಮ್ಮ ಬೆರಳನ್ನು ಉಳಿಸಿಕೊಳ್ಳುವುದರ ಜೊತೆಗೆ ತಮಗೆ ಬೇಕಾದ ರೀತಿಯ ಶೂ ಪಡೆಯಲು ಯಶಸ್ವಿಯಾಗಿದ್ದಾರೆ.

ಟಾಪ್ ನ್ಯೂಸ್

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.