ರಾಜಧಾನಿಯ ತುಂಬ ಆವರಿಸಿದ ನೀರವ
Team Udayavani, Nov 26, 2018, 12:29 PM IST
ಬೆಂಗಳೂರು: ನಗರದ ಅಲ್ಲಲ್ಲಿ ನೀರವ ಮೌನ, ಅಗಲಿದ ನೆಚ್ಚಿನ ನಾಯಕನ ಭಾವಚಿತ್ರದ ಮುಂದೆ ನಿಂತು ಮಿಡಿವ ಹೃದಯಗಳು, ಬೆಳ್ಳಂಬೆಳಗ್ಗೆಯೇ ಪ್ರೀತಿಪಾತ್ರ ನಟನ ಅಂತಿಮ ದರ್ಶನಕ್ಕೆ ಹೊರಟ ಅಭಿಮಾನಿಗಳ ಗುಂಪು, ಬಿಕೋ ಎನ್ನುತ್ತಿದ್ದ ಗಾಂಧಿನಗರ… ಹಿರಿಯ ನಟ ಅಂಬರೀಶ್ ಅವರ ಅಗಲಿಕೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಕಂಡುಬಂದ ದೃಶ್ಯಗಳಿವು.
ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಮತ್ತು ಆ ಮೂಲಕ ಜನರನ್ನು ಸೆಳೆದ ರೆಬೆಲ್ ಸ್ಟಾರ್ ಕಣ್ಮರೆಗೆ ನಗರದ ಪ್ರಮುಖ ಬೀದಿಗಳು ಕಂಬನಿ ಮಿಡಿದವು. ಅಭಿಮಾನಿಗಳ ಬಳಗಗಳು ಅಂಬರೀಶ್ ಅವರ ವಿವಿಧ ಭಂಗಿಗಳ ಭಾವಚಿತ್ರಗಳನ್ನು ಹಾಕಿ, ಪುಷ್ಪನಮನ ಸಲ್ಲಿಸಿತು. ಅದರ ಮುಂದೆ ಹಾದುಹೋಗುವವರೆಲ್ಲಾ ಅಗಲಿದ ನಟನಿಗೆ ನಮನ ಸಲ್ಲಿಸುತ್ತಿದ್ದುದು ಸಾಮಾನ್ಯವಾಗಿತ್ತು. ಈ ಮಧ್ಯೆ ವಾರಾಂತ್ಯದ ರಜೆ ಕೂಡ ಇದ್ದುದರಿಂದ ಜನ, ವಾಹನ ಸಂಚಾರ ವಿರಳವಾಗಿತ್ತು. ಇದರಿಂದ ಸಾವಿನ ಸೂತಕದ ಛಾಯೆ ಆವರಿಸಿದಂತಿತ್ತು.
ಅಭಿಮಾನಿಗಳು ಸ್ವತಃ ಬಂಧುವೊಬ್ಬ ತಮ್ಮಿಂದ ದೂರವಾಗಿದ್ದಾನೆ ಎಂಬಂತೆ ಭಾರವಾದ ಮುಖಹೊತ್ತು ಕಂಠೀರವ ಕ್ರೀಡಾಂಗಣದತ್ತ ದೌಡಾಯಿಸುತ್ತಿರುವುದು ಕಂಡುಬಂತು. ನಗರದ ವಿವಿಧ ಭಾಗಗಳಿಂದ ಬೆಳಿಗ್ಗೆಯೇ ಬೈಕ್, ಆಟೋಗಳಲ್ಲಿ, ಮಂಡ್ಯ ಸೇರಿದಂತೆ ಮತ್ತಿತರ ಕಡೆಗಳಿಂದ ಬಸ್ಗಳಲ್ಲಿ ತಂಡೋಪತಂಡವಾಗಿ ಧಾವಿಸುತ್ತಿದ್ದರು. ಮೆಜೆಸ್ಟಿಕ್ನಲ್ಲಂತೂ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ, ಅಂತಿಮ ದರ್ಶನಕ್ಕೆ ತೆರಳಿದ್ದರು.
ಯಶವಂತಪುರ ಮಾರುಕಟ್ಟೆ ರಸ್ತೆಯಲ್ಲಿ ವೀರಶೈವ ವೇದಿಕೆ ವೈಪಿಆರ್ ಟ್ರಸ್ಟ್, ಬಿ.ಕೆ. ನಗರದ ಮಹಾತ್ಮ ಗಾಂಧಿ ಯುವಕರ ಸಂಘ, ದಾಸರಹಳ್ಳಿಯ ರಾಕ್ಸ್ಟಾರ್ ಬಾಯ್ಸ, ಬಾಗಲುಗುಂಟೆ, ಯಶವಂತಪುರ ಮಿನಿ ಬಜಾರ್ ಬಳಿ ವಿವಿಧ ಅಭಿಮಾನಿ ಬಳಗಗಳು, ಜೆ.ಪಿ. ಪಾರ್ಕ್ ಬಳಿ ಬಿಜೆಪಿ ಕಾರ್ಯಕರ್ತರು, ಮತ್ತಿಕೆರೆ, ಮಲ್ಲೇಶ್ವರದಲ್ಲಿ ಆಟೋ ಚಾಲಕರ ಸಂಘಗಳು, ಹಡ್ಸನ್ ವೃತ್ತ, ಮೈಸೂರು ಬ್ಯಾಂಕ್ ವೃತ್ತಗಳಲ್ಲಿ ಅಂಬರೀಶ್ ಅವರ ಭಾವಚಿತ್ರದ ಫಲಕ ಹಾಕಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಗಾಂಧಿನಗರದಲ್ಲಂತೂ ಎಂದಿನ ಗೌಜು-ಗದ್ದಲ ಇರಲಿಲ್ಲ. ಜನ ಸಂಚಾರ ವಿರಳವಾಗಿದ್ದು, ಬಿಕೋ ಎನ್ನುತ್ತಿತ್ತು. ಚಿತ್ರಮಂದಿರಗಳು, ನಾಟಕ ಮಂದಿರ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತಿತರ ಕಡೆಗಳಲ್ಲಿ ಮೈಸೂರು ಪೇಟಾಧಾರಿಯಾಗಿ ಸಿಂಹಾಸನದಲ್ಲಿ ವಿರಾಜಮಾನರಾದ ಅಂಬರೀಶ್ ಅವರ ಚಿತ್ರಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯ ಫೋಟೋಗಳು ಅಲ್ಲಲ್ಲಿ ಕಂಡವು.
* ವಿಜಯ್ಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಫೋನ್ ಅಂಗಡಿ!
Bengaluru; ಬಸ್ ಡ್ರೈವರ್ಗೆ ಎದೆನೋವು: ಬ್ರೇಕ್ ಹಾಕಿ ಅಪಾಯ ತಪಿಸಿದ ಎಎಸ್ಐ
Flipkart Big Billion Day ಸೆ. 27 ರಿಂದ ಆರಂಭ
Bengaluru: ನಮ್ಮ ಕ್ಲಿನಿಕ್ಗೆ ಸೀಮಿತವಾದ ತಾಯಿ-ಮಗು ಆಸ್ಪತ್ರೆ
Bengaluru:ಟಿವಿ ರಿಪೇರಿಗೆ ಸ್ಪಂದಿಸದ ಎಲೆಕ್ಟ್ರಾನಿಕ್ಸರ್ವೀಸ್ ಸೆಂಟರ್ಗೆ 12 ಸಾವಿರ ದಂಡ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ: ಬಂಧನವಾಗಿ ನೂರು ದಿನ ಕಳೆಯಿತು!
ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!
Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.