ಪ್ರಸಂಗ: ಬಾಲಲೀಲೆ 


Team Udayavani, Nov 30, 2018, 6:00 AM IST

17.jpg

ಬಾಲ್ಯದ ಜೀವನ ಸುಂದರವಾದ, ಸಂತೋಷದಿಂದ ಕೂಡಿದ ನೆನಪುಗಳಾಗಿರುತ್ತದೆ. ಬಾಲ್ಯದಲ್ಲಿ ಕಲಿತ ಶಿಕ್ಷಣ ನಮ್ಮ ಮುಂದಿನ ಜೀವನದ ಭವಿಷ್ಯವನ್ನು ರೂಪಿಸಬಲ್ಲದು. ಬಾಲ್ಯದಲ್ಲಿ ನಡೆದ ದಾರಿ, ತಿಂದ ತಿಂಡಿಗಳು, ಆಟವಾಡಿದ ಸ್ಥಳಗಳು, ಜಗಳವಾಡಿದ ಕ್ಷಣಗಳು, ಕುಣಿದು ಕುಪ್ಪಳಿಸಿದ ನೃತ್ಯಗಳು ಇಂದು ಕೇವಲ ದೃಶ್ಯದಂತೆ ಕಾಣುತ್ತದೆ. ಯಾವುದೇ ಜಾತಿ, ಮತ, ಧರ್ಮಭೇದವಿಲ್ಲದೆ ಸ್ನೇಹಿತರು ಗುಂಪಾಗಿ ಖುಷಿ ಖುಷಿಯಿಂದ ನಲಿದಾಡುತ್ತಿದ್ದೆವು. ಆ ಒಂದು ಬಾಲ್ಯದ ಪಯಣ ಬಾನಲ್ಲಿ ಹಾರುವ ಹಕ್ಕಿಗಳ ಗುಂಪುಗಳಂತಿತ್ತು. ಬಾಲ್ಯದಲ್ಲಿ ಶಿಕ್ಷಕರು ನಮಗೆ ಬಹಳ ಹತ್ತಿರವಾಗುತ್ತಿದ್ದರು. ನಮ್ಮ ಮನೆಯವರ, ನೆರೆಹೊರೆಯವರ ಮತ್ತು ಆ ಶಾಲೆಗೆ ಒಳಪಟ್ಟ ಊರಿನ ಎಲ್ಲರ ಪರಿಚಯ ಇರುತ್ತಿತ್ತು. ನಮ್ಮ ಮನೆಯಿಂದ ಸರಿಸುಮಾರು ಮೂರು ಕಿ.ಮೀ. ದೂರ ಶಾಲೆಗೆ ಹೋಗಲು ಇರುವುದರಿಂದ ನಮ್ಮಾಚೆಯಿಂದ ಸುಮಾರು ಹತ್ತು ಮಕ್ಕಳು ಗುಂಪಾಗಿ ಹೋಗುತ್ತಿದ್ದೆವು. ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಗುಂಪಾಗಿ ಸ್ನೇಹಿತರೊಡನೆ ಶಾಲೆಗೆ ಹೋಗುವ ಅವಸರವೇ ವೇಗದೂತ ಬಸ್ಸಿನಂತೆ ಇರುತ್ತಿತ್ತು. ಶಾಲೆಗೆ ತಲುಪಿದ ನಂತರ ತರಗತಿಯ ಗೆಳೆಯರು ಬೇರೆಯೇ ಇರುತ್ತಾರೆ. ಒಂದೆಡೆ ಊರಿನ ಶಾಲೆಗೆ ಒಟ್ಟಿಗೆ ಬರುವ ಸ್ನೇಹಿತರಾದರೆ, ಇನ್ನೊಂದೆಡೆ ತರಗತಿಯಲ್ಲಿ ಒಟ್ಟಿಗೆ ಕಲಿತು ಓದುವ ಮತ್ತು ಆಟವಾಡುವ ಸ್ನೇಹಿತರು. ತರಗತಿಯಲ್ಲಿ ಕಲಿಯುವವರು ಒಂದು ಗುಂಪಾದರೆ, ಕಡಿಮೆ ಅಂಕ ಪಡೆಯುವವರ ಇನ್ನೊಂದು ಗುಂಪು. ತರಗತಿಯ ಹೊರಗೆ ಅಂಗಳದಲ್ಲಿ ಇವೆರಡೂ ಗುಂಪು ಒಂದಾಗಿ ಆಟದಲ್ಲಿ ಮಗ್ನರಾಗುತ್ತಿದ್ದರು. ಬಾಲ್ಯದಲ್ಲಿ ಅಂಜಿಕೆ, ಕೋಪ ಇಂತಹ ಕೆಟ್ಟ ಭಾವನೆಗಳು ಉದ್ಭವಿಸುವುದು ಬಹಳ ಕಡಿಮೆ. ಬಾಲ್ಯದ ಸ್ನೇಹಿತರೆಂದರೆ ನಮ್ಮ ಕಷ್ಟ-ಸುಖವನ್ನು ಮತ್ತು ನಮ್ಮ ಗುಣನಡತೆಯನ್ನು ಸರಿಯಾಗಿ ಅರಿತುಕೊಂಡಿರುತ್ತಾರೆ. ತರಗತಿಯ ಹೊರಗೆ ಹೋಗಬೇಕಾದರೆ ಒಟ್ಟಿಗೆ ಹೋಗುವುದು, ಒಟ್ಟಿಗೆ ಶೌಚಾಲಯಕ್ಕೆ ಹೋಗುವುದು, ಒಟ್ಟಿಗೆ ಊಟ ಮಾಡುವುದು, ಟೀಚರ್‌ ಮನೆ ಕೆಲಸ ಕೊಟ್ಟರೆ ಯಾರೂ ಮಾಡದೇ ಒಂದು ಶಿಕ್ಷಕರ ಸಪೂರವಾದ ಬೆತ್ತದಿಂದ ಎಲ್ಲರೂ ಒಟ್ಟಿಗೆ ಪೆಟ್ಟು ತಿನ್ನುವುದು ಇನ್ನಿತರ ನಾನಾ ಸಂದರ್ಭಗಳಲ್ಲಿ ಒಟ್ಟಿಗೆ ಗುಂಪಾಗಿ ಇರುವುದೇ ಬಾಲ್ಯದ ಸ್ನೇಹಿತರು.  

ಹೀಗೆಯೇ ಒಂದೊಂದು ತರಗತಿಯನ್ನು ಕಳೆದು ಮೇಲೆ ಬಂದಂತೆ ಕೊನೆಗೆ ಇಡೀ ಶಾಲೆಗೆ ಏಳನೇ ತರಗತಿಯಲ್ಲಿ ಸೀನಿಯರ್‌ ಆಗಿ ಬಿಡುತ್ತೇವೆ. ಶಾಲೆಯ ಹಲವು ಜವಾಬ್ದಾರಿಗಳು ಒಬ್ಬೊಬ್ಬರ ಮೇಲೆ ಇರುತ್ತದೆ. ಸರಕಾರಿ ಶಾಲೆ ಆದುದರಿಂದ ಸ್ವಲ್ಪ ಮಕ್ಕಳು ಇದ್ದಂತಹ ಶಾಲೆ, ಶಾಲಾ ನಾಯಕ, ಉಪನಾಯಕ, ವಿರೋಧ ಪಕ್ಷದ ನಾಯಕರು ಮತ್ತು ಮಂತ್ರಿಮಂಡಲ ಎಲ್ಲವೂ ನಮ್ಮ ಸ್ನೇಹಿತರೇ. ಬೆಳಿಗ್ಗೆ ಬೇಗ ಬರುವುದು, ಶಾಲೆಯ ಬೀಗ ತೆಗೆಯುವುದು, ಶಿಸ್ತು ಮಂತ್ರಿ ಶಿಸ್ತನ್ನು ಕಾಪಾಡುವುದು, ಸ್ವತ್ಛತಾ ಮಂತ್ರಿ ಸ್ವತ್ಛತೆಯನ್ನು ನೋಡಿಕೊಳ್ಳುವುದು- ಇವೆಲ್ಲವನ್ನು ನೋಡಿಕೊಳ್ಳಲು ನಾವು ಒಟ್ಟಾಗಿ ಹೋಗುತ್ತಿದ್ದೆವು. ಮುಖ್ಯ ಶಿಕ್ಷಕರು ಹೊರಗೆ ಹೋಗಿದ್ದಾಗ ಅವರ ಚೇಂಬರ್‌ನಲ್ಲಿ ಕುಳಿತುಕೊಳ್ಳುವುದು, ನೀರಿನ ಟ್ಯಾಂಕ್‌ ಶಿಕ್ಷಕರ ಕಚೇರಿಯಲ್ಲಿ ಇದ್ದುದರಿಂದ ಬೇಕಂತಲೇ ಅದರ ನೀರನ್ನು ಬಿಟ್ಟು ಅದನ್ನು ಗುಡಿಸಿ ಹೊರಗೆ ಹಾಕಲು ತರಗತಿ ಬಿಟ್ಟು ಹೋಗುವುದು, ಕಸಕ್ಕೆ ಬೆಂಕಿ ಹಾಕಲು ಒಂದು ಗಂಟೆ ತೆಗೆದುಕೊಳ್ಳುವುದು, ಒಂದು ಪಪ್ಪಾಯಿ ಮರದಿಂದ ಪಪ್ಪಾಯಿ ತೆಗೆಯಲು ಎಲ್ಲರೂ ಒಟ್ಟಾಗಿ ಹೋಗಿ ಮರದಡಿಯಲ್ಲಿ ನಿಂತುಕೊಳ್ಳುವುದು, ಸಂಜೆಯ ವೇಳೆಯಲ್ಲಿ ಒಟ್ಟಾಗಿ ಫ‌ುಟ್‌ಬಾಲ್‌ ಆಡುವುದು, ಮಧ್ಯಾಹ್ನದ ಹೊತ್ತು ಗೆಳೆಯರ ಮನೆಗೆ ಹೋಗುವುದು ಇನ್ನಿತರ ಸಂದರ್ಭಗಳನ್ನು ನೆನಪಿಸಿಕೊಂಡಾಗ ಮತ್ತೆ ಬಾಲ್ಯದ ಕಡೆಗೆ ಮರಳುವ ಅನ್ನಿಸುತ್ತೆ. ಸಂಜೆ ಶಾಲೆಬಿಟ್ಟು ಮನೆಗೆ ಹೋಗುವಾಗ ಎಲ್ಲರೂ ಗುಂಪಾಗಿ ಹೋಗಿ ಒಬ್ಬೊಬ್ಬರು ಅವರವರ ಮನೆ ಬಂದಾಗ ತೆರಳುವುದು, ಗುಡ್ಡಗಾಡು ಪ್ರದೇಶವಾದುದರಿಂದ ಗುಡ್ಡೆಯಲ್ಲಿ ಸಿಗುತ್ತಿದ್ದ ನೇರಳೆ, ಮಾವು, ಸರೋಳಿ, ಗೇರುಬೀಜ, ಚೂರಿಕಾಯಿ, ಕೇಪುಳ ಹಣ್ಣು, ಅಂಬಡೆ ಇನ್ನಿತರ ಹಲವು ಕಾಯಿಗಳನ್ನು ತಿಂದುಕೊಂಡು ಮೆಲ್ಲನೆ ಮನೆ ಕಡೆಗೆ ಸಾಗುತ್ತಿದ್ದೆವು. ಈಗ ಯುವಕರಾಗಿ ಕಾಲೇಜಿನಲ್ಲಿ ಸಿಗುವ ಸಂತೋಷಕ್ಕಿಂತ ಬಾಲ್ಯದಲ್ಲಿ ಸ್ನೇಹಿತರೊಡನೆ ಕಳೆದ ಕ್ಷಣಗಳು ಜೀವನದಲ್ಲಿ ಮರೆಯಲಾಗದ ಕ್ಷಣಗಳು. 

ಶ್ರೀಕಾಂತ್‌ ಪೂಜಾರಿ
ತೃತೀಯ ಬಿ.ಕಾಂ. ವಿವೇಕಾನಂದ ಪದವಿ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.