ರಕ್ತನಾಳ ಹೆಪ್ಪುಗಟ್ಟುವಿಕೆ ತಡೆಗೆ ಉಪಕರಣ


Team Udayavani, Nov 30, 2018, 11:43 AM IST

rakta-hep.jpg

ಬೆಂಗಳೂರು: ಕೋಮಾ ಸ್ಥಿತಿ ತಲುಪಿರುವ ರೋಗಿಗಳು ರಕ್ತನಾಳ ಹೆಪ್ಪುಗಟ್ಟುವಿಕೆ (ಡೀಪ್‌ ವೇಯ್ನ ಥ್ಯಾಂಬೋಸಿಸ್‌) ಸಮಸ್ಯೆಗೆ ಎದುರಾಗದಂತೆ ಇಂಟರ್‌ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್ ಇನ್ಫಾರ್ಮೇಷನ್‌ ಟೆಕ್ನಾಲಜಿ ಹಾಗೂ ನಿಮ್ಹಾನ್ಸ್‌ ಸಂಸ್ಥೆಗಳು ರೋಬೋಟಿಕ್‌ ಉಪಕರಣಗಳನ್ನು ಅಭಿವೃದ್ಧಿಪಡಿಸಿವೆ.

ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ವಿಜ್ಞಾನ ಇಲಾಖೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ “ಇನ್ನೋವೇಷನ್‌ ಅಂಡ್‌ ಇಂಪ್ಯಾಕ್ಟ್’ ಘೋಷವಾಕ್ಯದಡಿ ಗುರುವಾರ ಆರಂಭವಾದ ಮೂರು ದಿನಗಳ “ಬೆಂಗಳೂರು ಟೆಕ್‌ ಸಮಿಟ್‌’ ಕಾರ್ಯಕ್ರಮದಲ್ಲಿ ರೋಬೋಟಿಕ್‌ ಯಂತ್ರೋಪಕರಣಗಳು ಅನಾವರಣಗೊಂಡಿದ್ದು, ರಕ್ತನಾಳ ಹೆಪ್ಪುಗಟ್ಟುವಿಕೆ ತಡೆಯುವ ಉಪಕರಣಗಳು ಗಮನ ಸೆಳೆದವು.

ಅಪಘಾತ, ಪಾರ್ಶ್ವವಾಯು, ಮೆದುಳು ಜ್ವರ ಕಾಣಿಸಿಕೊಂಡ ಸಂದರ್ಭಗಳಲ್ಲಿ ರೋಗಿಗಳು ಕೋಮಾ ಸ್ಥಿತಿ ತಲುಪುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ಅರವಳಿಕೆ (ಅನಸ್ತೀಶಿಯಾ) ನೀಡುವ ವೇಳೆ ಯಡವಟ್ಟಾದರೂ ರೋಗಿಗಳು ಕೋಮಾ ಸ್ಥಿತಿ ತಲುಪುವ ಅಪಾಯವಿರುತ್ತದೆ. ರೋಗಿಗಳು ಕೋಮಾ ಸ್ಥಿತಿ ತಲುಪಿದಾಗ ಅವರ ಕೈ-ಕಾಲುಗಳಲ್ಲಿ ಚಲನೆ ಸ್ಥಗಿತಗೊಳ್ಳುತ್ತದೆ. 

ಫಿಸಿಯೋ ಥೆರಪಿಸ್ಟ್‌ಗಳು ಚಿಕಿತ್ಸೆ ನೀಡಿದರೂ ಹೆಚ್ಚು ಸಮಯ ಕೈ-ಕಾಲುಗಳು ಒಂದೇ ಕಡೆ ಚಲನೆಯಿಲ್ಲದೆ ಇರುವುದರಿಂದ ರಕ್ತನಾಳ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಒಂದೊಮ್ಮೆ ರೋಗಿಯು ಕೋಮಾ ಸ್ಥಿತಿಯಿಂದ ಚೇತರಿಸಿಕೊಂಡರೂ, ಕೈ-ಕಾಲುಗಳ ಚಲನೆಯಿಲ್ಲದೆ ಕಾಣಿಸಿಕೊಳ್ಳುವ ರಕ್ತನಾಳ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಮತ್ತೆ ಆಸ್ಪತ್ರೆ ಸೇರಬೇಕಾಗುತ್ತದೆ.

ಅಂತಹ ರೋಗಿಗಳ ಅನುಕೂಲಕ್ಕಾಗಿ ಐಐಐಟಿ ಬೆಂಗಳೂರು ಹಾಗೂ ನಿಮ್ಹಾನ್ಸ್‌ ಸಂಸ್ಥೆಗಳ ಸರ್ಜಿಕಲ್‌ ಆಂಡ್‌ ಅಸಿಸ್ಟೀವ್‌ ರೋಬೋಟಿಕ್ಸ್‌ ಲ್ಯಾಬ್‌ನಲ್ಲಿ ರಕ್ತನಾಳ ಹೆಪ್ಪುಗಟ್ಟುವಿಕೆ ತಡೆಯುವ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೈಗಳಿಗೆ ಅಂತ್ರೋಮೆಟ್ರಿಕ್‌ ಅಸೆಸ್ಟೀವ್‌ ಎಲೆಕ್ಟ್ರೋಮೆಕಾನಿಕಲ್‌ ಡಿವೈಸ್‌ ಹಾಗೂ ಕಾಲುಗಳಿಗೆ ಡಿವಿಟಿ ಪ್ರೋಫಿಲ್ಯಾಕ್ಸಿಸ್‌ ಡಿವೈಸ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಮೆದುಳಿನ ಸಮಸ್ಯೆ ತಿಳಿಸುತ್ತೆ ಹೆಲ್ಮೆಟ್‌: ಸರ್ಕಾರದ ಸಹಯೋಗದಲ್ಲಿ ಮಷೀನ್‌ ಇಂಟಿಲಿಜೆನ್ಸ್‌ ಆಂಡ್‌ ರೋಬೋಟಿಕ್ಸ್‌ ಸೆಂಟರ್‌ ಸಂಸ್ಥೆ ಮೆದುಳಿನ ಸಮಸ್ಯೆಗಳನ್ನು ತಿಳಿಯುವ ಹೆಲ್ಮೆಟ್‌ ತಯಾರಿಸಿದ್ದು, ಈ ಹೆಲ್ಮೆಟ್‌ ಮೆದುಳಿನಲ್ಲಿರುವ ಎಲೆಕ್ಟ್ರಾನಿಕ್‌ ತರಂಗಗಳ ಆಧಾರದ ಮೇಲೆ ಮೆದುಳಿನ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಈ ಚಿತ್ರಗಳನ್ನು ಕಂಪ್ಯೂಟರ್‌ನಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಮೆದುಳಿನ ಯಾವ ಭಾಗದಲ್ಲಿ ತೊಂದರೆಯಾಗಿದೆ ಎಂಬುದು ಸುಲಭವಾಗಿ ತಿಳಿಯಲಿದ್ದು, ಇದರಿಂದಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.  

ಉಪಕರಣಗಳು ಕಾರ್ಯನಿರ್ವಹಣೆ ಹೇಗೆ?: ಎರಡು ರೀತಿಯ ಉಪಕರಣಗಳನ್ನು ರೋಗಿಯ ಕೈ-ಕಾಲುಗಳಿಗೆ ಅವಳವಡಿಸಲಾಗುತ್ತದೆ. ಈ ರೋಬೋಟಿಕ್‌ ಉಪಕರಣಗಳು ವ್ಯಕ್ತಿಯ ಹೃದಯ ಬಡಿತಕ್ಕೆ ಅನುಗುಣವಾಗಿ ಕೈ-ಕಾಲುಗಳಿಗೆ ಚಲನೆ ನೀಡುತ್ತವೆ. ಜತೆಗೆ ರಕ್ತನಾಳ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಳ್ಳದಂತೆ ಎಚ್ಚರ ವಹಿಸುತ್ತವೆ. ಈ ಉಪಕರಣಗಳನ್ನು ಬಳಸಿದ ರೋಗಿಯು ಕೋಮಾದಿಂದ ಚೇತರಿಸಿಕೊಂಡ ನಂತರವೂ ಆರೋಗ್ಯವಾಗಿಬಹುದು ಎನ್ನುತ್ತಾರೆ ಐಐಐಟಿ ಬೆಂಗಳೂರು ಸಂಸ್ಥೆಯ ವ್ಯವಸ್ಥಾಪಕಿ ಕಲ್ಪನಾ.

ಟಾಪ್ ನ್ಯೂಸ್

KJ-Goerge

Pending: ಸರಕಾರಿ ಕಚೇರಿಗಳ 6 ಸಾವಿರ ಕೋಟಿ ವಿದ್ಯುತ್‌ ಬಿಲ್‌ ಬಾಕಿ: ಸಚಿವ ಕೆ.ಜೆ.ಜಾರ್ಜ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

1-prayag

Mahakumbh; ಪ್ರಯಾಗ್‌ರಾಜ್‌ ಸಂಗಮ್‌ ನಿಲ್ದಾಣ ಫೆ.28ರ ವರೆಗೆ ಬಂದ್‌

1-us

ಹಾವು, ಮೊಸಳೆಗಳಿದ್ದ ಹಾದಿಯಲ್ಲಿ ದಿನಕ್ಕೆ 12 ಗಂಟೆ “ಅಕ್ರಮ’ ಪಯಣ

IND VS PAK

Champions Trophy; ಕರಾಚಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜವಿಲ್ಲ?

1-adani

Adani ಕಂಪೆನಿಯಿಂದ ಚಿಕ್ಕ ರಾಕೆಟ್‌ ಉತ್ಪಾದನೆ?

Hardik Pandya

IPL ಮೊದಲ ಪಂದ್ಯದಲ್ಲೇ ನಿಷೇಧಕ್ಕೊಳಗಾಗುವ ಹಾರ್ದಿಕ್‌ ಪಾಂಡ್ಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮೇ 30 ರೊಳಗೆ ಜಿ.ಪಂ-ತಾ.ಪಂ ಅಂತಿಮ ಮೀಸಲಾತಿ ಪಟ್ಟಿ ಆಯೋಗಕ್ಕೆ ಸಲ್ಲಿಕೆ

ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆ: ಮೇ 30 ರೊಳಗೆ ಮೀಸಲಾತಿ ಪಟ್ಟಿ ಸಲ್ಲಿಕೆ

Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ

Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ

Bengaluru: ಈ ವಾರವೇ ಕಾವೇರಿ ನೀರಿನ ದರ ಏರಿಕೆ ಬಿಸಿ?

Bengaluru: ಈ ವಾರವೇ ಕಾವೇರಿ ನೀರಿನ ದರ ಏರಿಕೆ ಬಿಸಿ?

Theft Case: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ 2 ಕೆ.ಜಿ. ಚಿನ್ನ ಕಳವು ಮಾಡಿದ್ದವರ ಸೆರೆ

Theft Case: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ 2 ಕೆ.ಜಿ. ಚಿನ್ನ ಕಳವು ಮಾಡಿದ್ದವರ ಸೆರೆ

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

KJ-Goerge

Pending: ಸರಕಾರಿ ಕಚೇರಿಗಳ 6 ಸಾವಿರ ಕೋಟಿ ವಿದ್ಯುತ್‌ ಬಿಲ್‌ ಬಾಕಿ: ಸಚಿವ ಕೆ.ಜೆ.ಜಾರ್ಜ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

Udupi: ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಯಶ್‌ಪಾಲ್‌

1-prayag

Mahakumbh; ಪ್ರಯಾಗ್‌ರಾಜ್‌ ಸಂಗಮ್‌ ನಿಲ್ದಾಣ ಫೆ.28ರ ವರೆಗೆ ಬಂದ್‌

1-us

ಹಾವು, ಮೊಸಳೆಗಳಿದ್ದ ಹಾದಿಯಲ್ಲಿ ದಿನಕ್ಕೆ 12 ಗಂಟೆ “ಅಕ್ರಮ’ ಪಯಣ

IND VS PAK

Champions Trophy; ಕರಾಚಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತದ ತ್ರಿವರ್ಣ ಧ್ವಜವಿಲ್ಲ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.