ತಿರುಪತಿ ಲಡ್ಡು ವಿತರಣೆಗೆ ಪೇಪರ್ ಬಾಕ್ಸ್ ಬಳಕೆ?
Team Udayavani, Dec 1, 2018, 6:00 AM IST
ತಿರುಪತಿ: ಇಲ್ಲಿನ ವೆಂಕಟೇಶ್ವರ ಸನ್ನಿಧಾನದ ಕೌಂಟರ್ಗಳಲ್ಲಿ ನೀಡಲಾಗುವ ವಿಶ್ವ ವಿಖ್ಯಾತ ಲಡ್ಡು ಪ್ರಸಾದವನ್ನು (ತಿರು ಪತಿ ಲಡ್ಡು) ಇನ್ನು ಕೆಲವೇ ದಿನಗಳಲ್ಲಿ ಫುಡ್ ಗ್ರೇಡ್ ಪೇಪರ್ ಬಾಕ್ಸ್ಗಳಲ್ಲಿ ನೀಡುವ ಸಾಧ್ಯತೆಯಿದೆ. ಇತ್ತೀಚೆಗೆ, ತಿರುಪತಿಯನ್ನು ಪೂರ್ತಿಯಾಗಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲಾಗಿದ್ದು ಇದೀಗ, ದೇಗುಲದೊಳಗೂ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸುವತ್ತ ಈ ಹೆಜ್ಜೆಯಿಡಲಾಗುತ್ತಿದೆ.
ಸದ್ಯಕ್ಕೆ ತಿರುಪತಿಯಲ್ಲಿ ಲಡ್ಡು ಪ್ರಸಾದವನ್ನು ಪಾಲಿಥಿನ್ (ಪ್ಲಾಸ್ಟಿಕ್) ಬ್ಯಾಗ್ಗಳಲ್ಲಿ ವಿತರಿಸಲಾಗುತ್ತಿದೆ. ಇದರ ಬದಲಿಗೆ ಬಯೋ-ಡೀಗ್ರೇಡಬಲ್(ಜೈವಿಕ ವಿಘಟ ನೀಯ) ಪ್ಲಾಸ್ಟಿಕ್ ಕವರ್ಗಳು, ಬಟ್ಟೆ ಬ್ಯಾಗುಗಳನ್ನು ಉಪಯೋಗಿಸಲು ಟಿಟಿಡಿ ಆಲೋಚಿಸಿತ್ತಾದರೂ, ಫುಡ್ ಗ್ರೇಡ್ ಕಾಗದದ ಬಾಕ್ಸ್ಗಳೇ ಉತ್ತಮ ಎಂಬ ನಿರ್ಧಾರಕ್ಕೆ ಟಿಟಿಡಿ ಬಂದಿದೆ. ಈ ಬಾಕ್ಸ್ಗಳು ಬೇಕರಿ, ಸಿಹಿ ತಿನಿಸುಗಳ ಅಂಗಡಿಗಳಲ್ಲಿ ನೀಡುವ ಪೇಪರ್ ಬಾಕ್ಸ್ಗಳಂತೆಯೇ ಇರಲಿದ್ದು, ಈಗಾಗಲೇ ಶ್ರೀಶೈಲ ದೇಗುಲದಲ್ಲಿ ಪ್ರಸಾದ ವಿನಿಯೋಗಕ್ಕಾಗಿ ಈ ಮಾದರಿಯ ಬಾಕ್ಸ್ಗಳ ಉಪಯೋಗ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ತಿರುಪತಿಯಲ್ಲೂ ಇದನ್ನೇ ಟಿಟಿಡಿ ಆಯ್ಕೆ ಮಾಡುವುದು ಬಹುತೇಕ ಖಚಿತ ಎಂದು “ದಿ ಹಿಂದೂ’ ವರದಿ ಮಾಡಿದೆ. ಇದು ಜಾರಿಗೊಂಡಲ್ಲಿ ಲಡ್ಡುಗಳ ಸಂಖ್ಯೆಗೆ ಅನುಗುಣವಾಗಿ ಮೂರು ಅಳತೆಯ ಬಾಕ್ಸ್ಗಳನ್ನು ತಯಾರಿಸಲಾಗುತ್ತದೆ.
ಪೇಪರ್ ಬಾಕ್ಸ್ಗಳ ಬಗ್ಗೆ ಸದ್ಯಕ್ಕೆ ಭಕ್ತಾದಿಗಳ ಪ್ರತಿಕ್ರಿಯೆ ಸಂಗ್ರಹಿಸಲಾಗುತ್ತಿದೆ. ಬಾಕ್ಸ್ಗಳ ಮೇಲೆ ದರ ವಿಧಿಸಬೇಕೇ, ಬೇಡವೇ ಎಂಬುದಿನ್ನೂ ನಿರ್ಧಾರವಾಗಿಲ್ಲ.
ಅನಿಲ್ ಕುಮಾರ್ ಸಿಂಘಾಲ್, ಟಿಟಿಡಿ ಆಡಳಿತಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul : ಅಂಬಾನಿ ಮದುವೆಯಲ್ಲಿ ಬಳಸಿದ್ದು ಜನರ ದುಡ್ಡು: ರಾಹುಲ್ ಗಾಂಧಿ ಟೀಕೆ
Bihar; ಪ್ರವಾಹ ಪೀಡಿತ ಸ್ಥಳಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
MUDA Case: ಮೂರೇ ದಿನದಲ್ಲಿ ಪಿಎಂಎಲ್ಎ ಪ್ರಕರಣ ಹೇಗೆ ದಾಖಲಿಸಿದ್ರು?: ಅಭಿಷೇಕ್ ಸಿಂಘ್ವಿ
Me Too: ಕೇರಳದಲ್ಲಿ ಮತ್ತೊಬ್ಬ ನಟನ ವಿರುದ್ಧ ಮೀ ಟೂ ಪ್ರಕರಣ!
Viral Video: ವಿದ್ಯಾರ್ಥಿಯನ್ನು ಗೋಡೆಗೆ ಗುದ್ದಿಸಿ, ಥಳಿಸಿದ ಶಿಕ್ಷಕ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-52: ಯುದ್ಧ ಮೂಲ ಸ್ವಾರ್ಥ, ಪಕ್ಷಪಾತ
MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ ಹೋರಾಟ: ಅಶೋಕ್
Karkala: ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಕಾರ್ಕಳದ ಅಮೂಲ್ಯ ಹೆಗ್ಡೆಗೆ ಕಂಚು
Bajpe: ಮರವೂರಿನಲ್ಲಿ ನೀರುಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ
Uppinangady: ಕೆಎಸ್ಆರ್ಟಿಸಿ ಬಸ್ಸುಗಳ ಢಿಕ್ಕಿ; ದಂಪತಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.