![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 23, 2018, 1:30 PM IST
ಬೆಂಗಳೂರು: ಸಚಿವ ಸಂಪುಟಕ್ಕೆ ಕಾಂಗ್ರೆಸ್ ನಾಯಕರು ಆಯ್ಕೆ ಮಾಡಿದ ಮಾನದಂಡವೇ ಸರಿಯಿಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ,ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಭಾನುವಾರ ತೀವ್ರ ಆಸಮಧಾನ ಹೊರ ಹಾಕಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಲಿಂಗಾ ರೆಡ್ಡಿ ನನಗೆ ಯಾರ ವಿರುದ್ಧವೂ ವೈಯಕ್ತಿಕ ಬೇಸರ ಇಲ್ಲ. ಪಕ್ಷ ಸಚಿವ ಸ್ಥಾನ ನೀಡಲು ಪರಿಗಣಿಸಿದ ಮಾನದಂಡದ ಬಗ್ಗೆ ಬೇಸರ ಇದೆ . ಆರ್.ವಿ.ದೇಶ್ಪಾಂಡೆ, ಕೆ.ಜೆ.ಜಾರ್ಜ್,ಡಿ.ಕೆ.ಶಿವಕುಮಾರ್, ಕೃಷ್ಣ ಭೈರೇಗೌಡ, ಎಂ.ಬಿ.ಪಾಟೀಲ್ ಇವರೆಲ್ಲಾ ಹಿರಿಯರು ಪಕ್ಷಕ್ಕೆ ಅವರ ಸೇವೆ ಅಗತ್ಯವಾಗಿ ಬೇಕು ಮತ್ತು ಸಂಪುಟದಲ್ಲಿ ಅವರ ಹಿರಿತನ ಕಾಣಬೇಕು. ಅವರಿಗೆ ಕೊಟ್ಟಿದ್ದಕ್ಕೆ ನನಗೆ ಬೇಸರ ಇಲ್ಲ. ಅವರಿಗೊಂದು ನ್ಯಾಯ, ನನಗೊಂದು ನ್ಯಾಯ ಯಾಕೆ ಎಂದು ಪ್ರಶ್ನಿಸಿದರು.
ನಾನು ಇದುವರೆಗೆ ಯಾರಿಗೂ ಹೊಗಳಿಯೂ ಇಲ್ಲ, ತೆಗಳಿಯೂ ಇಲ್ಲ .ನನಗೆ ಸಚಿವ ಸ್ಥಾನ ಕೈ ತಪ್ಪಿ ಹೋಗಲು ಒಬ್ಬರು ಪ್ರಮುಖ ಕಾರಣವಾಗಿದ್ದಾರೆ, ಅವರ ಹೆಸರು ಈಗ ಹೇಳುವುದಿಲ್ಲ , ಸಮಯ ಬಂದಾಗ ಹೇಳುತ್ತೇನೆ ಎಂದರು.
ಹೈಕಮಾಂಡ್ಗೆ ನಾಲ್ವರು ಪ್ರಮುಖರು ಇಲ್ಲಿನ ವಿಚಾರಗಳನ್ನು ತಿಳಿಸುತ್ತಾರೆ, ಅವರು ಕೂಡ ನನ್ನ ಬಗ್ಗೆ ತಿಳಿಸಿಲ್ಲ ಅವರ ಹೆಸರುಗಳನ್ನೆಲ್ಲಾ ನಾನು ಹೇಳುವುದಿಲ್ಲ ಎಂದರು.
ನಮ್ಮ ಪಕ್ಷದವರೇ ನನ್ನ ಬಳಿ ಮಾತನಾಡಿಲ್ಲ, ಇನ್ನು ಬೇರೆ ಪಕ್ಷದವರು ಯಾಕೆ ಸಂಪರ್ಕ ಮಾಡುತ್ತಾರೆ ಎಂದರು.
ನನ್ನ ಮಗಳೂ ಟ್ವೀಟ್ ಮಾಡುವ ಮುನ್ನ ನನ್ನ ಅಭಿಪ್ರಾಯ ಕೇಳಿರಲಿಲ್ಲ. ಬೆಂಬಲಿಗರಿಗೆ ಪ್ರತಿಭಟನೆ ಮಾಡಲು ಹೇಳಿರಲಿಲ್ಲ ಎಂದರು.
ನನ್ನ ಮುಂದಿನ ಗುರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರುವುದು. ನನ್ನ ಕೈಲಾದಷ್ಟು ಪಕ್ಷಕ್ಕೆ ದುಡಿದಿದ್ದೇನೆ ಮುಂದೆಯೂ ದುಡಿಯುತ್ತೇನೆ ಎಂದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.