![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 13, 2019, 9:33 AM IST
ಇಂಧೋರ್: ದೃಶ್ಯಂ ಸಿನಿಮೀಯ ಮಾದರಿಯಲ್ಲಿ 22 ರ ಹರೆಯದ ಯುವತಿಯನ್ನು ಕೊಲೆಗೈದ ಆರೋಪದಲ್ಲಿ ಬಿಜೆಪಿ ನಾಯಕ, ಆತನ ಮೂವರು ಪುತ್ರರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಬಿಜೆಪಿ ನಾಯಕ ಜಗದೀಶ್ ಕರೋಟಿಯಾ ಅಲಿಯಾಸ್ ಕಲ್ಲು ಪಹಲ್ವಾನ್ (65) ಮೂವರು ಪುತ್ರರಾದ ಅಜಯ್(36)ವಿಜಯ್ (38), ವಿನಯ್(31)ಮತ್ತು ಸಹಚರ ನಿಲೇಶ್ ಕಶ್ಯಪ್(28) ಎಂಬಾತನನ್ನು ಬಂಧಿಸಲಾಗಿದೆ.
ಏನಿದು ಘಟನೆ
ಬಾನ್ಗಂಗಾ ಪ್ರದೇಶದ 22 ರ ಹರೆಯದ ಟ್ವಿಂಕಲ್ ಡಾಗ್ರೆ ಎಂಬಾಕೆ ಜಗದೀಶ್ ರೋಟಿಯಾನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಇದೇ ವಿಚಾರದಲ್ಲಿ ಆಕೆ ಕರೋಟಿಯೂನೊಂದಿಗೆ ವಾಸಿಸಲು ಹಠ ಹಿಡಿದಿದ್ದಳು. ಇದಕ್ಕೆ ಮನೆಯಲ್ಲಿ ವಿರೋಧ ಉಂಟಾದಾಗ ಕರೋಟಿಯಾ ಮತ್ತು ಆತನ ಪುತ್ರರು ಟ್ವಿಂಕಲ್ ಡಾಗ್ರೆಯನ್ನು ಅಕ್ಟೋಬರ್ 12,2016ರಂದು ಹತ್ಯೆಗೈದು ಸುಟ್ಟು ಹಾಕಿದ್ದಾರೆ.
ಇದೇ ವೇಳೆ ದೃಶ್ಯಂ ಸಿನಿಮಾ ನೋಡಿ, ಅದೇ ಸ್ಫೂರ್ತಿಯಲ್ಲಿ ನಾಯಿಯೊಂದನ್ನು ಹೂತು ಹಾಕಿ , ಇಲ್ಲಿ ಯಾರನ್ನೋ ಹೂತು ಹಾಕಿದ್ದಾರೆ ಎಂದು ಸುದ್ದಿ ಹಬ್ಬಿಸಿ ಪ್ರಕರಣದ ದಿಕ್ಕು ತಪ್ಪಿಸಿದ್ದಾರೆ. ಪೊಲೀಸರು ಬಂದು ಗುಂಡಿ ತೆರೆದಾಗ ನಾಯಿಯ ಕಳೇಬರ ಪತ್ತೆಯಾಗಿ ಪ್ರಕರಣದ ದಿಕ್ಕು ತಪ್ಪಿ ಹೋಗಲು ಕಾರಣವಾಗಿತ್ತು.
ಪ್ರಕರಣದ ತನಿಖೆಗಿಳಿದ ಪೊಲೀಸರು ಕಟೋರಿಯಾ ಮತ್ತು ಮೂವರು ಪುತ್ರರಿಗೆ ಬ್ರೇನ್ ಇಲೆಕ್ಟ್ರಿಕಲ್ ಆಸ್ಕಿಲೇಶನ್ ಸಿಗ್ನೇಚರ್ ಪರೀಕ್ಷೆಯನ್ನೂ ನಡೆಸಿದ್ದಾರೆ. ಇಂಧೋರ್ನಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಈ ಪರೀಕ್ಷೆ ಮಾಡಲಾಗಿದೆ.
ಹತ್ಯೆ ನಡೆದ ಸ್ಥಳದಲ್ಲಿ ಪತ್ತೆಯಾದ ಬಳೆ ಮತ್ತು ಇನ್ನೊಂದು ಆಭರಣ ಪ್ರಕರಣದ ತನಿಖೆಗೆ ಮಹತ್ವದ ಸುಳಿವು ನೀಡಿದೆ ಎಂದು ಡಿಐಜಿ ತಿಳಿಸಿದ್ದಾರೆ.
ಸಾವನ್ನಪ್ಪಿದ ಯುವತಿಯ ಕುಟುಂಬಸ್ಥರು ಕಟೋರಿಯಾ, ಮಾಜಿ ಬಿಜೆಪಿ ಶಾಸಕರ ಮನವಿ ಮೇಲೆ ಪೊಲೀಸ್ ಬೆಂಬಲ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.