ಗ್ಲೋಬಲ್‌ ಶ್ರೇಣಿ ವಾಹನ ಮಾರುಕಟ್ಟೆಗೆ ಬಿಡುಗಡೆ


Team Udayavani, Jan 24, 2019, 7:01 AM IST

gul-8.jpg

ಕಲಬುರಗಿ: ಕಳೆದ 25 ವರ್ಷಗಳ ಗೂಡ್ಸ್‌ ಹಾಗೂ ಮಿನಿ ಬಸ್‌ಗಳ ಹಾಗೂ ಲಘು ವಾಹನಗಳ ತಯಾರಿಕೆಯಲ್ಲಿ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿರುವ ಎಸ್‌ಎಂಎಲ್‌ ಇಸೂಝ್ ಕಂಪನಿ ಗ್ಲೋಬಲ್‌ ಶ್ರೇಣಿ ಎರಡು ಸರಕು ವಾಹನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ಬಿಡುಗಡೆಯಾದ ನಂತರ ಬುಧವಾರ ಸಂಜೆ ನಗರದಲ್ಲಿ ನಡೆದ ಸಮಾರಂಭದಲ್ಲಿ ಎಸ್‌ಎಂಎಲ್‌ ಇಸೂಝ್ ಕಂಪನಿಯ ಎಸ್‌ಎಂಎಲ್‌ ಸಾರಥಿ-ಜಿಎಸ್‌ ಗೂಡ್ಸ್‌ ವಾಹನಗಳನ್ನು ಬಿಡುಗಡೆ ಮಾಡಲಾಯಿತು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿ ಮಾರುಕಟ್ಟೆ ಮುಖ್ಯ ಮ್ಯಾನೇಜರ್‌ ಆರ್‌. ಭಾಸ್ಕರ್‌ ಅವರು, ಎಲ್ಲ ಹಂತದ ಸರಕುಗಳನ್ನು ಸಾಗಿಸಲು ಅನುಕೂಲವಾಗುವಂತೆ ವಿವಿಧ ಶ್ರೇಣಿ ಹಾಗೂ 5 ಲಕ್ಷ ರೂ. ದಿಂದ 12 ಲಕ್ಷ ರೂ. ವರೆಗಿನ ಮೊತ್ತದ ವಾಹನಗಳನ್ನು ಸಮರ್ಪಿಸಲಾಗುತ್ತಿದೆ ಎಂದು ವಿವರಿಸಿದರು.

ವಾಹನಗಳು ಎಲ್ಲಿಯಾದರೂ ಕೆಟ್ಟು ನಿಂತರೆ ಅಲ್ಲಿಂದಲೇ ಒಂದು ಮೆಸೆಜ್‌ ಕಳುಹಿಸಿದರೆ ಅಲ್ಲೇ ಸಮೀಪದ ಡೀಲರ್‌ದಿಂದ ಮೆಕ್ಯಾನಿಕರು ಬರುತ್ತಾರೆ. ಬಹು ಮುಖ್ಯವಾಗಿ ಬೇರೆ ಕಂಪನಿ ವಾಹನಗಳಿಗೆ ಎರಡು ವರ್ಷಗಳ ವಾರಂಟಿ ಇದ್ದರೆ, ತಮ್ಮ ವಾಹನಗಳಿಗೆ ಮೂರು ವರ್ಷ ವಾರಂಟಿ ಇದೆ. ಜತೆಗೆ ಕಂಪನಿ ವತಿಯಿಂದ 3 ವರ್ಷ ವಾಹನ ಚಾಲಕನಿಗೆ ಜೀವ ವಿಮೆ ಇದೆ. ಏನಾದರೂ ಅನಾಹುತವಾದರೆ 5 ಲಕ್ಷ ರೂ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.

ಎಸ್‌ಎಂಎಲ್‌ ಐಎಸ್‌ಯುಐಡ್‌ಯು ಕಂಪನಿ ಸ್ವರಾಜ್‌ ಮಜಾಡಾ ಸೇರಿದಂತೆ ಕಂಪನಿಯ ವಿವಿಧ ವಾಹನಗಳು ಸೇರಿದಂತೆ ಒಟ್ಟು 2.80 ಲಕ್ಷ ವಾಹನಗಳು ದೇಶದಲ್ಲಿ ರಸ್ತೆಗಿಳಿದಿವೆ. ಈಗ ಬಿಡುಗಡೆಯಾಗುವ ಹೊಸ ಶ್ರೇಣಿಗಳು ಪರಿಸರ ಸ್ನೇಹ ಹೊಂದಿದ್ದಲ್ಲದೇ ಉತ್ತಮ ಮೈಲೇಜ್‌ ಹೊಂದಿವೆ. ಒಟ್ಟಾರೆ ಮಲೇಷಿಯಾ ದೇಶದ ಮಾದರಿ ಹೊಂದಿವೆ ಎಂದು ಭಾಸ್ಕರ್‌ ತಿಳಿಸಿದರು. ಎಸ್‌ಎಂಎಲ್‌ ಇಸೂಝ್ ಮಾರುಕಟ್ಟೆ ಮ್ಯಾನೇಜರ್‌ ವಿಲಾಸ್‌, ಮೆ| ನಿಷ್ಠಿ ಅಟೋಮೋಟಿವ್ಸ್‌ ವ್ಯವಸ್ಥಾಪಕ ನಿರ್ದೇಶಕ ದೊಡ್ಡಪ್ಪ ಅಪ್ಪ ಇದ್ದರು.
ಗ್ರಾಹಕರಿಗೆ ನೂತನ ವಾಹನಗಳ ಕೀ ಹಸ್ತಾಂತರಿಸುವ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ಎಸ್‌ಎಂಎಲ್‌ ಇಸೂಝ್ ಕಂಪನಿ

ಕಲಬುರಗಿ-ಬೀದರ ಹಾಗೂ ಯಾದಗಿರಿ ಜಿಲ್ಲೆಗೆ ಮೆ| ನಿಷ್ಠಿ ಅಟೋಮೋಟಿವ್ಸ್‌ ಅಧಿಕೃತ ಡೀಲರರಾಗಿದ್ದು, ಈಗಾಗಲೇ ಬುಕ್ಕಿಂಗ್‌ ಶುರುವಾಗಿದೆ. ಟ್ರಕ್‌ಗಳನ್ನು ಹಿಂದೆಂದಿಗಿಂತಲೂ ಅಭಿವೃದ್ಧಿಗೊಳಿಸಲಾಗಿದೆ. ಇದು ಮಾಲೀಕರಿಗೆ ಮತ್ತಷ್ಟು ಹಿಡಿಸಲಾರಂಭಿಸಿದೆ. ಹಲವು ಸೌಲಭ್ಯಗಳಿರುವುದು ವಾಹನಗಳ ಖರೀದಿ ಉತ್ಸಾಹ ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ಆರ್‌. ಭಾಸ್ಕರ್‌, ಮುಖ್ಯ ಮಾರುಕಟ್ಟೆ ಮ್ಯಾನೇಜರ್‌, ಎಸ್‌ಎಂಎಲ್‌ ಇಸೂಝ್ ಕಂಪನಿ

ಟಾಪ್ ನ್ಯೂಸ್

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewewqe

Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

Kalaburagi; ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ! ಸಿಎಂ ಸಿದ್ದರಾಮಯ್ಯ ಘೋಷಣೆ

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

ಸೆ.22ಕ್ಕೆ ತುಂಗಭದ್ರಾ ನದಿಗೆ ಸಿಎಂ ಸಿದ್ದರಾಮಯ್ಯ ಬಾಗಿನ: ಡಿಸಿಎಂ ಡಿ.ಕೆ.ಶಿವಕುಮಾರ್‌

SIddu-Phone

Kalaburagi: ಪತಿ ಕೊಲೆ ಪ್ರಕರಣ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ ಪತ್ನಿ; ಎಸ್‌ಪಿಗೆ ಕರೆ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.