ರೆಸಾರ್ಟ್ನಲ್ಲೇ ಶಾಸಕ ಗಣೇಶ್ ಬಂಧನವಾಗಲಿಲ್ಲವೇಕೆ?
Team Udayavani, Jan 24, 2019, 7:21 AM IST
ರಾಮನಗರ: ಶಾಸಕ ಆನಂದ್ಸಿಂಗ್ ಮೇಲೆ ಹಲ್ಲೆ ನಡೆಸಿ ಕಂಪ್ಲಿ ಗಣೇಶ್ ಪರಾರಿಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿರುವುದರಿಂದ ಮುಚ್ಚಿಹಾಕುವ ಉದ್ದೇಶದಿಂದಲೇ ತಡವಾಗಿ ಎಫ್ಐಆರ್ ದಾಖಲು ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಭಾನುವಾರವೇ ವರದಿ ರವಾನೆ: ಶಾಸಕ ಆನಂದ್ ಸಿಂಗ್ ವೈದ್ಯಕೀಯ ಚಿಕಿತ್ಸೆ ನೀಡಿದ ಅಪೋಲೋ ಆಸ್ಪತ್ರೆಯ ವೈದ್ಯರು ಮೆಡಿಕೋ ಲೀಗಲ್ ಪ್ರಕರಣದ ಬಗ್ಗೆ ಭಾನುವಾರವೇ ಶೇಷಾದ್ರಿಪುರಂ ಪೊಲೀಸರಿಗೆ ನೀಡಿದ್ದರು. ಆ ವರದಿ ಬಿಡದಿ ಪೊಲೀಸ್ ಠಾಣೆ ಅಧಿಕಾರಿಗಳ ಅದೇ ದಿನ ಕೈ ಸೇರಿದೆ. ಆಗಿನ್ನು ಶಾಸಕ ಗಣೇಶ್ ಮತ್ತು ಇತರ ಶಾಸಕರು ರೆಸಾರ್ಟ್ನಲ್ಲೇ ಇದ್ದರು.
ಉಭಯ ಸಂಕಟಕ್ಕೆ ಸಿಕ್ಕ ಬಿಡದಿ ಪೊಲೀಸರು ಸೋಮವಾರ ಬೆಳಿಗ್ಗೆ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಆನಂದ್ ಸಿಂಗ್ರಿಂದ ಹೇಳಿಕೆ ಪಡೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ಜನವರಿ 21ರ ಸೋಮವಾರ ಆನಂದ್ ಸಿಂಗ್ ಅವರು ದೂರು ಬಿಡದಿ ಠಾಣೆ ತಲುಪಿ ಎಫ್.ಐ.ಆರ್. ದಾಖಲಾಗಿದ್ದು ಮಧ್ಯಾಹ್ನ 1.30. ಅಲ್ಲಿಯವರೆಗೂ ಗಣೇಶ್ ಇನ್ನು ರೆಸಾರ್ಟ್ನಲ್ಲೇ ಇದ್ದರು,
ಆದರೆ ಕೈ ನಾಯಕರು ಪೊಲೀಸ್ ಅಧಿಕಾರಗಳ ಮೇಲೆ ಬಹುಶಃ ಒತ್ತಡ ಹೇರಿದ್ದರಿಂದ ಗಣೇಶ್ರ ಬಂಧನವಾಗಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಎಫ್.ಐ.ಆರ್ ದಾಖಲಾಗುವ ಕೆಲವೇ ಹೊತ್ತಿನ ಮುಂಚೆ ಶಾಸಕ ಗಣೇಶ್ ರೆಸಾರ್ಟ್ನಿಂದ ಹೊರಟು ಹೋಗಿದ್ದಾರೆ. ಅವರು ತಲೆಮರೆಸಿಕೊಂಡ ನಂತರ ಅವರ ಹುಡುಕಾಟ ನಡೆದಿದೆ, ಪ್ರಭಾವಿ ಕೈ ನಾಯಕರ ಒತ್ತಡದಿಂದಲೇ ಗಣೇಶ್ರ ಬಂಧನವಾಗಲಿಲ್ಲ ಎಂದು ಹೇಳಲಾಗಿದೆ.
ರೆಸಾರ್ಟ್ ಪೊಲೀಸರ ಸರ್ಪಗಾವಲು: ಕೈ ಶಾಸಕರು ವಾಸ್ತವ್ಯವಿದ್ದ ವೇಳೆ ಪೊಲೀಸರು ಭಾರಿ ಬಂದೋಬಸ್ತ್ ಏರ್ಪಡಿಸಿದ್ದರು. ಮಾರಾಮಾರಿ ನಡೆದ ವೇಳೆಯೂ ಬಂದೋಬಸ್ತ್ ಇತ್ತು. ಆದರೂ ಗಣೇಶ್ರನ್ನು ವಶಕ್ಕೆ ತೆಗೆದುಕೊಳ್ಳಲಿಲ್ಲ . ಈಗ ಮೂರು ತಂಡಗಳನ್ನು ಮಾಡಿಕೊಂಡು ಶೋಧ ಆರಂಭಿಸಿದ್ಧಾರೆ ಎಂಬ ಕುಹುಕಗಳು ಕೇಳಿ ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡುತ್ತಿದ್ದರಾ ಮುನಿರತ್ನ?
Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ
Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ ಮಾಡಿದ ಮಹಿಳೆ; ಎಫ್ಐಆರ್
Magadi: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬ ಐವರು ಸಾವು
Nandini Milk ಮತ್ತಷ್ಟು ತುಟ್ಟಿ? ಶೀಘ್ರವೇ ದರ ಪರಿಷ್ಕರಣೆ: ಸಿದ್ದರಾಮಯ್ಯ ಸುಳಿವು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.