ವಿಪಕ್ಷಗಳು ದೇಶವನ್ನೇ ವಿರೋಧಿಸುತ್ತಿವೆ:ಸಂಸತ್ನಲ್ಲಿ ಗುಡುಗಿದ ಪಿಎಂ
Team Udayavani, Feb 7, 2019, 1:19 PM IST
ಹೊಸದಿಲ್ಲಿ: ಮೋದಿಯನ್ನು ವಿರೋಧಿಸುವ ವಿಚಾರದಲ್ಲಿ ವಿಪಕ್ಷಗಳು ದೇಶವನ್ನೇ ವಿರೋಧಿಸಲು ಆರಂಭಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಗುರುವಾರ ಬಜೆಟ್ ಅಧಿವೇಶನದ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು ವಿಪಕ್ಷಗಳ ವಿರುದ್ಧ ನಿರಂತರ ಗಂಟೆಯ ಕಾಲ ವಾಗ್ಧಾಳಿ ನಡೆಸಿದರು. ತನ್ನ ಸರ್ಕಾರದ ಯೋಜನೆಗಳನ್ನು ಉಲ್ಲೇಖೀಸಿ ಕಾಂಗ್ರೆಸ್ ಸಾಧನೆಯನ್ನು ಪ್ರಶ್ನಿಸಿ ನೇರ ಸವಾಲುಗಳನ್ನು ಹಾಕಿದರು.
ಕಾಂಗ್ರೆಸ್ ಪಕ್ಷ 55 ವರ್ಷ ಆಡಳಿತ ನಡೆಸಿದೆ, ನಾನು 55 ತಿಂಗಳು ನಡೆಸಿದ್ದೇನೆ. ಕಾಂಗ್ರೆಸ್ಗೆ ಮನಸ್ಸಿದ್ದರೆ 20 ವರ್ಷಗಳ ಒಳಗೆ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ತಲುಪಿಸಬಹುದಿತ್ತು , ಯಾಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.
ದಿಲ್ಲಿಯ ಗಲ್ಲಿ ನೋಡದ ಬಡವ ಆಡಳಿತ ಮಾಡುತ್ತಿದ್ದಾನೆ ಎನ್ನುವುದು ವಿಪಕ್ಷಗಳಿಗೆ ಅಸೂಹೆ. ಬಡವರಿಗಾಗಿ ನಾನು ಜೀವಿಸುತ್ತಿದ್ದೇನೆ. ಅವರಿಗಾಗಿ ನಾನು ಇಲ್ಲಿದ್ದೇನೆ ಎಂದರು.
ಎನ್ಡಿಎ ಸರಕಾರ ಬಡವರ ಪರ, ಭ್ರಷ್ಟಾಚಾರಿಗಳ ವಿರೋಧಿ, ಅಭಿವೃದ್ಧಿಯ ಪರವಾಗಿರುವ ಪಾರದರ್ಶಕ ಸರಕಾರ ಎಂದರು.
ಆರೋಗ್ಯಕರ ಸ್ಫರ್ಧೆ ಇರಲಿ
ಮುಂದಿನ ಚುನಾವಣೆಯಲ್ಲಿ ಆರೋಗ್ಯಕರವಾದ ಸ್ಫರ್ಧೆ ಇರಲಿ ಎನ್ನುವುದು ನನ್ನ ಆಶಯ. 2019ರಲ್ಲಿ ಹೊಸ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅವರು ದೇಶದ ಅಭಿವೃದ್ಧಿಗೆ ಆಕಾರ ನೀಡಲಿದ್ದಾರೆ ಎಂದರು.
ಬಿಸಿ,ಎಡಿ ಹೊಸ ವ್ಯಾಖ್ಯಾನ
ಬಿಸಿ ಎಂದರೆ ‘ಬಿಫೋರ್ ಕಾಂಗ್ರೆಸ್’ಅಲ್ಲಿ ಏನೂ ಆಗಲಿಲ್ಲ, ಎಡಿ ಎಂದರೆ ‘ಆಫ್ಟರ್ ಡೈನಾಸ್ಟಿ’ , ಇಲ್ಲಿ ಎಲ್ಲವೂ ಸಾಧ್ಯವಾಗುತ್ತಿದೆ ಎಂದರು.
ಖರ್ಗೆ ವಿರುದ್ಧವೂ ಕಿಡಿ
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವೂ ಅಸಮಾಧಾನ ಹೊರ ಹಾಕಿದ ಪ್ರಧಾನಿ ಮೋದಿ, ಖರ್ಗೆ ಅವರು ಅಸಮ್ಮತಿಯ ವ್ಯಕ್ತಿ ಎನಿಸುತ್ತದೆ. ಈಗ ಅವರು ಪ್ರತಿಯೊಂದಕ್ಕೂ ಅಸಮ್ಮತಿ ತೋರುತ್ತಿದ್ದಾರೆ ಎಂದರು.
ಮಹಾಘಟಬಂಧನ್ ವಿರುದ್ಧವೂ ಆಕ್ರೋಶ
ಮಹಾಘಟಬಂಧನ್ ಕಥೆ ಏನಾಗುತ್ತದೆ ನೋಡಿ, ಒಬ್ಬರ ಮುಖ ಒಬ್ಬರು ನೋಡದವರು ಈಗ ಒಂದಾಗಿದ್ದಾರೆ ಎಂದು ಲೇವಡಿ ಮಾಡಿದರು. ಮಿಲಾವಟ್ ಸರ್ಕಾರಗಳು ದೇಶದ ಪ್ರಗತಿಗೆ ಪೂರಕವಲ್ಲ, ಮಿಲಾವಟ್ ಇನ್ನು ಬರುವುದಿದೆ. ಅದನ್ನು ಇಲ್ಲಿಗೆ ಬರಲು ಬಿಡುವುದಿಲ್ಲ,ಕೋಲ್ಕತಾದಲ್ಲೇ ಒಟ್ಟುಗೂಡಿಸಿಡಿ ಎಂದರು.
ಕಾಂಗ್ರೆಸ್ ಮುಕ್ತ ಭಾರತ ಘೋಷಣೆ ನನ್ನದಲ್ಲ
‘ಕಾಂಗ್ರೆಸ್ ಮುಕ್ತ ಭಾರತ ಘೋಷಣೆ’ ನನ್ನದಲ್ಲ. ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಮುಂದಾಗಿದ್ದರು. ನಾನು ಗಾಂಧೀಜಿ ಅವರ ಆಶಯವನ್ನು ಸಾಕಾರಗೊಳಿಸಲು ಮುಂದಾಗಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು
Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!
Jammu – Kashmir: ಮತ್ತೆ ಉಗ್ರರಿಂದ ಗುಂಡಿನ ದಾಳಿ… ಓರ್ವ ವಲಸೆ ಕಾರ್ಮಿಕನಿಗೆ ಗಾಯ
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
Female CFO: ಭಾರತದ ಪಾಮ್ ಕೌರ್ಗೆ ಎಚ್ಎಸ್ಬಿಸಿ ಸಿಎಫ್ಒ ಹುದ್ದೆ
MUST WATCH
ಹೊಸ ಸೇರ್ಪಡೆ
UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು
India: ಮತ್ತೆ ಏರ್ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್ ಬೆದರಿಕೆ ಕರೆ
INDvsNZ: ವಾಷಿಂಗ್ಟನ್ ಸ್ಪಿನ್ ಜಾಲಕ್ಕೆ ಸಿಲುಕಿದ ಕಿವೀಸ್; 259 ರನ್ ಗೆ ಆಲೌಟ್
Salaar 2: ಪ್ರಭಾಸ್ – ಪ್ರಶಾಂತ್ ನೀಲ್ ʼಸಲಾರ್ -2ʼ ಶೂಟಿಂಗ್ ಆರಂಭ?
Udupi: ಸಂಸ್ಕೃತ ಎಲ್ಲ ಭಾಷೆಗಳ ಮೂಲ.. ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟಿಸಿ ಬಾಬಾ ರಾಮ್ ದೇವ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.