ಮತ್ತೆ ನಭಕ್ಕೆ ನೆಗೆದ ಸೂರ್ಯ ಕಿರಣ
Team Udayavani, Feb 24, 2019, 11:08 AM IST
ಬೆಂಗಳೂರು: ಲಘು ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್ಗಳಾದ, ತೇಜಸ್, ಸಾರಂಗ್, ಧ್ರುವ್, ನೇತ್ರಾ, ರುದ್ರ, ಧನುಷ್ ಜತೆಗೆ ಸೂರ್ಯ ಕಿರಣ ತಂಡ ಕೂಡ ಶನಿವಾರ ನಭದಲ್ಲಿ ನರ್ತನ ಮಾಡಿದೆ. ತಾಲೀಮು ವೇಳೆಯಲ್ಲಿ ಸಂಭವಿಸಿದ್ದ ದುರಂತದಿಂದ ಈ ಬಾರಿಯ ಏರೋ ಇಂಡಿಯಾ ಶೋನಲ್ಲಿ ಸೂರ್ಯ ಕಿರಣ ಹಾರಾಟ ಅನುಮಾನ ಎಂದು ಅಂದಾಜಿಸಲಾಗಿತ್ತು. ಆದರೆ, ಶನಿವಾರ ಸೂರ್ಯಕಿರಣ ತಂಡ ಏಳು ವಿಮಾನಗಳ ಹಾರಾಟದ ಮೂಲಕ ಎಲ್ಲರನ್ನು ರಂಜಿಸಿದ್ದರು.
ಸಾಮಾನ್ಯವಾಗಿ ಏರ್ ಶೋಗಳಲ್ಲಿ ಸಾರಂಗ್, ಸಾರಸ್ ಹಾಗೂ ಸೂರ್ಯಕಿರಣ್ನ ಹಾರಾಟವೇ ಪ್ರೇಕ್ಷಕರಿಗೆ ಹೆಚ್ಚು ಖುಷಿ ಕೊಡುತ್ತದೆ. ಕಾರಣ, ಇವುಗಳು ಮಾತ್ರ ಆಕಾಶದಲ್ಲಿ ನರ್ತನ ಮಾಡ ಬಲ್ಲವು. ಸೂರ್ಯಕಿರಣ ತಂಡ ಶನಿ ವಾರ 7 ವಿಮಾನಗಳ ಮೂಲಕ ಸುಮಾರು 10 ನಿಮಿಷ ವಿವಿಧ ಆಯಾಮಗಳಲ್ಲಿ ಹಾರಾಟ ನಡೆಸಿ, ಎಲ್ಲರನ್ನು ನಿಬ್ಬೆರಗಾಗಿಸಿತು.
ಸೂರ್ಯಕಿರಣ್ 9 ವಿಮಾನಗಳೊಂದಿಗೆ ಹಾರಾಟ ನಡೆಸಲಾಗುತ್ತಿದೆ. ಆದರೆ, ಈ ಬಾರಿ ಏಳು ವಿಮಾನಗಳು ಮಾತ್ರ ಹಾರಾಟ ನಡೆಸಿವೆ. ಎದುರು ಬದುರಾದ ಹಾರಾಟ, ಹಕ್ಕಿಗಳಂತೆ ಒಂದರ ಹಿಂದೆ ಒಂದು ಸಾಗುವುದು ಸೇರಿದಂತೆ ಆಕಾಶದಲ್ಲೇ ಚಮತ್ಕಾರ ನಡೆಸಿದವು. ಬೆಳಗ್ಗೆ ಮತ್ತು ಮಧ್ಯಾಹ್ನ ಏಳು ವಿಮಾನ ಹಾರಾಟ ನಡೆಸಿವೆ.
ಜನ ಸಾಗರ: ಲೋಹದ ಹಕ್ಕಿಗಳ ಹಾರಾಟ ವೀಕ್ಷಣೆಗೆ ಶನಿವಾರ ಸಾರ್ವಜನಿಕರಿಗೂ ಅವಕಾಶ ನೀಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು. ವಾಯನೆಲೆಯ ಮಧ್ಯ ಭಾಗದಲ್ಲಿ ಸಾರ್ವಜನಿಕರ ವೀಕ್ಷಣೆಗಾ ಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 9 ಗಂಟೆಗೆ ವಿಮಾನಗಳ ಹಾರಾಟ ಆರಂಭವಾಗುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿ ಭರ್ತಿಯಾಗಿತ್ತು.
ಪ್ರತಿ ವಿಮಾನವೂ ಹಾರಾಡುತ್ತಿದ್ದಾಗ ಸೆಲ್ಪಿ, ವಿಡಿಯೋಗಳು ತೆಗೆದುಕೊಳ್ಳುತ್ತಿದ್ದರು. ರನ್ ವೇಗೆ ಸಮೀಪದಲ್ಲಿ ನಿಲ್ಲಿಸಿದ್ದ ಧ್ರುವ್, ರುದ್ರ ಹೆಲಿಕ್ಯಾಪ್ಟರ್, ತೇಜಸ್ ಮೊದಲಾದ ವಿಮಾನಗಳ ಮುಂದೆ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಎಂದಿನಂತೆ ನಡೆದ ಪ್ರದರ್ಶನ ಮಧ್ಯಾಹ್ನ 12 ಗಂಟೆಗೆ ಸಂಭವಿಸಿದ್ದ ಅಗ್ನಿ ದುರಂತದಿಂದ ಪಾರ್ಕಿಂಗ್ ಪ್ರದೇಶದಲ್ಲಿ ದಟ್ಟಹೊಗೆ ಕಾಣಿಸಿಕೊಂಡಿದ್ದರಿಂದ ತಾತ್ಕಾಲಿಕವಾಗಿ ಕೆಲವು ನಿಮಿಷ ವಿಮಾನ ಹಾರಾಟ ಪ್ರದರ್ಶನ ನಿಲ್ಲಿಸಲಾಗಿತ್ತಾದರೂ, ಮಧ್ಯಾಹ್ನ ಶೋ ಎಂದಿನಂತೆ ಸರಿಯಾದ ಸಮಯಕ್ಕೆ ಆರಂಭವಾಗಿ ಗ್ಲೋಬ್-1, ಸುಕೊಯಿ, ಡಕೊಟ, ಪ್ರೊಟೊ, ಯಾಕ್, ನೇತ್ರಾ, ರಫೆಲ್, ಧನುಷ್, ತೇಜಸ್, ಸಾರಸ್ ಹಾಗೂ ಸೂರ್ಯಕಿರಣ್ ಹಾರಾಟ ನಡೆದಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!
Bengaluru: ಮೆಜೆಸ್ಟಿಕ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು
Bengaluru: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 9 ಮೊಬೈಲ್ ಫೋನ್ಗಳು ಪತ್ತೆ!
Leopard: ಎಲೆಕ್ಟ್ರಾನಿಕ್ ಸಿಟಿ ಎನ್ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ
Anekal: ಶಾಲಾ ಬಸ್ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.