![CCTV: ಪ್ರಯಾಣಿಕರೇ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…](https://www.udayavani.com/wp-content/uploads/2024/07/bus-2-415x234.jpg)
ಸುಂದರಿಯ ಸ್ಕೆಚ್ ಗೆ ರೌಡಿ ಲಕ್ಷ್ಮಣ ಕೊಲೆ?6 ಆರೋಪಿಗಳು ಪೊಲೀಸ್ ವಶಕ್ಕೆ
Team Udayavani, Mar 12, 2019, 9:10 AM IST
![attack.jpg](https://www.udayavani.com/wp-content/uploads/2019/03/12/attack.jpg)
ಬೆಂಗಳೂರು:ರೌಡಿಶೀಟರ್ ಲಕ್ಷ್ಮಣ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಯುವತಿಯೊಬ್ಬಳು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದು, ಮಂಗಳವಾರ ಕೋರ್ಟ್ ಗೆ ಹಾಜರುಪಡಿಸಿದ್ದರು. ಆರು ಮಂದಿ ಆರೋಪಿಗಳಿಗೂ 1ನೇ ಎಸಿಎಂಎಂ ಕೋರ್ಟ್ ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಮಾರ್ಚ್ 7ರಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ಹಾಡಹಗಲೇ ರೌಡಿ ಲಕ್ಷ್ಮಣನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದೇವರಾಜ್, ಹೇಮಂತ್, ಕ್ಯಾಟ್ ರಾಜ, ರೂಪೇಶ್ ಚೇತನ್ ಹಾಗೂ ವರ್ಷಿಣಿಯನ್ನು ಕಳೆದ ರಾತ್ರಿ ಬಂಧಿಸಿದ್ದರು.
ಸುಂದರಿಯ ಸ್ಕೆಚ್ ಗೆ ರೌಡಿ ಲಕ್ಷ್ಮಣ ಬಲಿ?
ರೌಡಿಶೀಟರ್ ಲಕ್ಷ್ಮಣ ಕೊಲೆಯ ಹಿಂದೆ ವರ್ಷಿಣಿ ಕೈವಾಡ ಇದ್ದಿರುವುದನ್ನು ಪೊಲೀಸರು ತನಿಖೆ ವೇಳೆ ಪತ್ತೆಹಚ್ಚಿದ್ದಾರೆ. ಲಂಡನ್ ನ ಕೇಂಬ್ರಿಡ್ಜ್ ವಿವಿಯಲ್ಲಿ ಎಂಎಸ್ (ಸೈಕಾಲಜಿ) ವಿದ್ಯಾರ್ಥಿನಿಯಾಗಿದ್ದ ವರ್ಷಿಣಿ ರೌಡಿ ಲಕ್ಷ್ಮಣ ಜೊತೆ ಸಂಪರ್ಕದಲ್ಲಿದ್ದಳು. ಊರಿನಲ್ಲಿದ್ದುಕೊಂಡೇ ಲಕ್ಷ್ಮಣನಿಗೆ ತಾನು ಲಂಡನ್ ನಲ್ಲಿಯೇ ಇದ್ದಿರುವುದಾಗಿ ನಂಬಿಸಿದ್ದಾಳೆ ಎನ್ನಲಾಗಿದೆ.
ಏತನ್ಮಧ್ಯೆ ರೂಪೇಶ್ ಎಂಬ ರೌಡಿ ಜೊತೆ ವರ್ಷಿಣಿ ಸಂಪರ್ಕದಲ್ಲಿದ್ದಳು. ಲಕ್ಷ್ಮಣನಿಂದ ಲಕ್ಷಾಂತರ ರೂಪಾಯಿ ಪಡೆದಿದ್ದ ವರ್ಷಿಣಿ ಆತನ ಕೊಲೆಗೆ ಸ್ಕೆಚ್ ಹಾಕಿದ್ದಳು. 4 ತಿಂಗಳ ಹಿಂದೆ ವರ್ಷಿಣಿ ತಂದೆಗೂ, ಲಕ್ಷ್ಮಣನಿಗೂ ಜಾಗದ ವಿಚಾರದಲ್ಲಿ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ. ಅಲ್ಲದೇ ರೂಪೇಶ್ ನನ್ನು ಪ್ರೀತಿಸುತ್ತಿದ್ದ ವರ್ಷಿಣಿ ಲಕ್ಷ್ಮಣನ ಜೊತೆ ನಿಕಟ ಸಂಪರ್ಕ ಹೊಂದಿದ್ದಳು ಎಂದು ವರದಿ ತಿಳಿಸಿದೆ.
ಪೂರ್ವ ಯೋಜನೆಯಂತೆ ರೂಪೇಶ್ ಹಾಗೂ ಆತನ ಸಹಚರರು ಸ್ಕಾರ್ಪಿಯೋ ವಾಹನದಲ್ಲಿ ಬಂದು ಲಕ್ಷ್ಮಣನನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಕೊಲೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
![CCTV: ಪ್ರಯಾಣಿಕರೇ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…](https://www.udayavani.com/wp-content/uploads/2024/07/bus-2-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Renukaswamy Case: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ](https://www.udayavani.com/wp-content/uploads/2024/07/12-3-150x90.jpg)
Renukaswamy Case: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ
![Sagara: ಗಾಳಿ ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ](https://www.udayavani.com/wp-content/uploads/2024/07/sagara-150x98.jpg)
Sagara: ಮಳೆಯ ಆರ್ಭಟಕ್ಕೆ ಸಾಲು ಸಾಲು ವಿದ್ಯುತ್ ಕಂಬಗಳು ಧರಾಶಾಹಿ
![Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ](https://www.udayavani.com/wp-content/uploads/2024/07/charmadi-150x83.jpg)
Charmadi: ಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು… ಕುಸಿಯುವ ಭೀತಿ
![Transfer of four IPS officers; New SP for Raichur, Koppal](https://www.udayavani.com/wp-content/uploads/2024/07/IPS-150x83.jpg)
IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ
![Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ](https://www.udayavani.com/wp-content/uploads/2024/07/yakshagana-150x84.jpg)
Thirthahalli: ಗಾಳಿ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಯಕ್ಷಗಾನ ಕಲಾವಿದನ ಮನೆ
MUST WATCH
ಹೊಸ ಸೇರ್ಪಡೆ
![CCTV: ಪ್ರಯಾಣಿಕರೇ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…](https://www.udayavani.com/wp-content/uploads/2024/07/bus-2-150x84.jpg)
Video: ಪ್ರಯಾಣಿಕರೇ ಗಮನಿಸಿ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…
![Renukaswamy Case: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ](https://www.udayavani.com/wp-content/uploads/2024/07/12-3-150x90.jpg)
Renukaswamy Case: ದರ್ಶನ್, ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಮತ್ತೆ ಜೈಲೇ ಗತಿ
![13-uv-fusion](https://www.udayavani.com/wp-content/uploads/2024/07/13-uv-fusion-150x90.jpg)
UV Fusion: ಪ್ರಯತ್ನಂ ಸರ್ವತ್ರ ಸಾಧನಂ
![Indian Cricket Team met with PM Narendra Modi](https://www.udayavani.com/wp-content/uploads/2024/07/team-India-modi-150x83.jpg)
T20 World Cup ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ
![Kerala: ಮೆದುಳು ತಿನ್ನೋ ಅಮೀಬಾ ಸೋಂಕಿಗೆ 14 ವರ್ಷದ ಬಾಲಕ ಮೃತ್ಯು; 3ನೇ ಪ್ರಕರಣ](https://www.udayavani.com/wp-content/uploads/2024/07/Amiba-150x90.jpg)
Kerala: ಮೆದುಳು ತಿನ್ನೋ ಅಮೀಬಾ ಸೋಂಕಿಗೆ 14 ವರ್ಷದ ಬಾಲಕ ಮೃತ್ಯು; 3ನೇ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.