ಶಿವನೇ ಜ್ಞಾನಕ್ಕೆ ಮೂಲ ಆಗರ: ಕಾಶಿಶ್ರೀ


Team Udayavani, Mar 12, 2019, 9:11 AM IST

gul-5.jpg

ಸೊಲ್ಲಾಪುರ: ಶಿವನು ಜಗತ್ತಿನ ಆದಿ ಗುರು. ಶಿವನ ಪಂಚ ಮುಖಗಳಿಂದಲೇ ನಾಲ್ಕು ವೇದಗಳು ಹಾಗೂ 28 ಶಿವಾಗಮಗಳು ಪ್ರಕಟವಾಗಿವೆ. ಇಂತಹ ಅಪೂರ್ವವಾದ ಜ್ಞಾನ ಭಂಡಾರವನ್ನು ಜಗತ್ತಿಗೆ ಕೊಡಮಾಡಿರುವ ಶಿವನೇ ಜ್ಞಾನಕ್ಕೆ ಮೂಲ ಆಗರ ಎಂದು ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಮಹಾಶಿವರಾತ್ರಿ ನಿಮಿತ್ತ ಕಾಶಿ ಜ್ಞಾನ ಪೀಠದಲ್ಲಿ ಹಮ್ಮಿಕೊಂಡಿದ್ದ ವಿದ್ವತ್‌ ಚಿಂತನೆ ಜ್ಞಾನ ಸಂಗಮ ಸಮಾರಂಭದಲ್ಲಿ ವಿವಿಧ ವಿದ್ವಾಂಸರಿಗೆ ಜ್ಞಾನ ಪುರಸ್ಕಾರ ಪ್ರದಾನ ಮಾಡಿ ಸ್ವಾಮೀಜಿ ಮಾತನಾಡಿದರು.

ವಿಶ್ವದಲ್ಲಿ ಜ್ಞಾನಕ್ಕಿಂತಲೂ ಪವಿತ್ರವಾದ ವಸ್ತು ಬೇರೊಂದಿಲ್ಲ. ಭಗವಂತನಿಂದ ಪ್ರಾಪ್ತವಾದ ವೇದಾಗಮ ಅಧ್ಯಯನ ಮಾಡಿಯೇ ಭಗವಂತನನ್ನು ಅರಿಯಬೇಕು. ಯಾರು ಅಂತಹ ಶ್ರೇಷ್ಠ ಜ್ಞಾನದಿಂದ ಭಗವಂತನನ್ನು ತಮ್ಮ ಆತ್ಮರೂಪವಾಗಿ ಅರಿತುಕೊಳ್ಳುವರೋ ಅವರೇ ಶ್ರೇಷ್ಠವಾದ  ನಿಗಳೆನಿಸುತ್ತಾರೆ ಎಂದು ಹೇಳಿದರು. 

ಜಗತ್ತೆಲ್ಲವೂ ಶಿವಸ್ವರೂಪವಾದುದು. ಶಿವನಿಗಿಂತಲೂ ಭಿನ್ನವಾದುದು ಬೇರೆ ಯಾವುದೂ ಇಲ್ಲ. ನಾನೂ ಕೂಡ ಶಿವಸ್ವರೂಪನೇ ಇದ್ದೇನೆ ಎನ್ನುವ ನಿಜವಾದ ತಿಳಿವಳಿಕೆಯೇ ಉತ್ಕೃಷ್ಟವಾದ ಜ್ಞಾನವಾಗಿದೆ ಎಂಬುದನ್ನು ವೀರಶೈವ ಧರ್ಮಗ್ರಂಥವಾದ ಸಿದ್ಧಾಂತ
ಶಿಖಾಮಣಿ ಹೇಳುತ್ತದೆ ಎಂದು ಅವರು ಹೇಳಿದರು.

ಪುರಸ್ಕಾರ ಪ್ರದಾನ: ಸಮಾರಂಭದಲ್ಲಿ ಕಾಶಿ ಜ್ಞಾನ ಪೀಠದಿಂದ ಮಹಾರಾಷ್ಟ್ರದ ಪಂಡಿತ ಶಿವಪ್ಪ ಖಕೆ ಅವರಿಗೆ ಶ್ರೀ ಜಗದ್ಗುರು ವಿಶ್ವಾರಾಧ್ಯ ವಿಶ್ವಭಾರತಿ ಪುರಸ್ಕಾರ, ವಾರಣಾಸಿಯ ಪಂಡಿತ ಗಾಯತ್ರಿ ಪ್ರಸಾದ ಪಾಂಡೇಯ ಅವರಿಗೆ ಆಚಾರ್ಯ ದ್ವಿವೇದಿ ಶೈವಭಾರತಿ ಪುರಸ್ಕಾರ, ಕಾಶಿ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ| ಸಿದ್ಧಿದಾತ್ರಿ
ಭಾರದ್ವಾಜ ಅವರಿಗೆ ಮಾತೃಶಕ್ತಿ ಪುರಸ್ಕಾರ ಹಾಗೂ ಹಮೀದ್‌ಪುರ ಮಹಾವಿದ್ಯಾಲಯದ ಪಂಡಿತ ವಿದ್ಯಾಶಂಕರ ತ್ರಿಪಾಠಿ ಅವರಿಗೆ ಕೋಡಿಮಠ ಸಾಹಿತ್ಯ ಪುರಸ್ಕಾರವನ್ನು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರದಾನ ಮಾಡಿದರು. ಕರ್ನಾಟಕ ಹಾಸನ ಜಿಲ್ಲೆ ಕೋಡಿಮಠದ ಡಾ| ಶಿವಾನಂದ ರಾಜೇಂದ್ರ ಸ್ವಾಮೀಜಿ ಹಾಗೂ ಉತ್ತರಪ್ರದೇಶ ಆವಾಸ ವಿಕಾಸ ಪರಿಷತ್ತಿನ ಅಧ್ಯಕ್ಷ ನಿತಿನ್‌ ಗೋಕರ್ಣ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾಶಿ ಸಂಪೂರ್ಣಾನಂದ ವಿಶ್ವವಿದ್ಯಾಲಯದ ಕುಲಪತಿ ಪ್ರೊ|ರಾಜಾರಾಮ ಶುಕ್ಲ ಅಧ್ಯಕ್ಷತೆ ವಹಿಸಿದ್ದರು.

ಕಾಶಿ ಹಿಂದೂ ವಿಶ್ವವಿದ್ಯಾಲಯ, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಶ್ರೀಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯಗಳ ಸುಮಾರು 200ಕ್ಕೂ ಹೆಚ್ಚು ವಿವಿಧ ಪಾಂಡಿತ್ಯ ಹೊಂದಿದ ವಿದ್ವಾಂಸರು ಪಾಲ್ಗೊಂಡಿದ್ದರು. ಕಾಶಿ ವಿದ್ವತ್‌ ಪರಿಷತ್‌ ಅಧ್ಯಕ್ಷ ಡಾ| ವಿನೋದರಾವ್‌ ಪಾಠಕ ನಿರೂಪಿಸಿದರು. ಶ್ರೀಕಾಶಿ ಜ್ಞಾನ ಪೀಠದ ವೇದ ಪಾಠಶಾಲೆ ಅಧ್ಯಾಪಕ ಪಂ. ಮಲ್ಲಿಕಾರ್ಜುನಸ್ವಾಮಿ
ವಂದಿಸಿದರು.

ಟಾಪ್ ನ್ಯೂಸ್

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-aland

Aland: ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವು

5-chincholi

Chincholi: ಸಾಲ ಭಾದೆ, ಮುಂಗಾರು ಬೆಳೆ ಹಾನಿಯಿಂದ ‌ಮನನೊಂದು ರೈತ ಆತ್ಮಹತ್ಯೆ

11-

Chittapur: 120 ಮನೆಗಳಿಗೆ ನುಗ್ಗಿದ ಮಳೆ ನೀರು; ಅಪಾರ ಹಾನಿ

Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ

Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ

Chakravarthy Sulibele

ರಾಜ್ಯದಲ್ಲಿ ಮುಸ್ಲಿಂ ಸರ್ಕಾರವಿದೆ! ಕಾಂಗ್ರೆಸ್‌ನವರು ಸಂಘದ ಟ್ರೈನಿಂಗ್ ತಗೊಳ್ಳಿ: ಸೂಲಿಬೆಲೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.