![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 24, 2019, 6:41 AM IST
ಹೊಸದಿಲ್ಲಿ: ಪಾಕಿಸ್ಥಾನದ ರಾಷ್ಟ್ರೀಯ ದಿನಾಚರಣೆ ಹಿನ್ನೆಲೆಯಲ್ಲಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮೋದಿಯವರು ನೆರೆ ರಾಷ್ಟ್ರಕ್ಕೆ ಲವ್ ಲೆಟರ್ ಬರೆಯುವುದನ್ನು ಮೊದಲು ನಿಲ್ಲಿಸಲಿ ಎಂದು ಲೇವಡಿಯನ್ನೂ ಮಾಡಿದೆ.
ಶನಿವಾರ ಪಾಕ್ ರಾಷ್ಟ್ರೀಯ ದಿನ ಆಚರಿಸಿದ್ದು, ಶುಕ್ರವಾರ ರಾತ್ರಿಯೇ ಮೋದಿಯವರಿಂದ ಶುಭಾಶಯ ಬಂದಿದೆ ಎಂದು ಇಮ್ರಾನ್ ಖಾನ್ ಅವರೇ ಘೋಷಿಸಿದ್ದರು. ಇದಕ್ಕೆ ಟಾಂಗ್ ನೀಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲಾ, “ಮೋದಿ ಯವರ ಪರಾಕ್ರಮದ ರಾಜಕೀಯ ವೆಲ್ಲ ನಮ್ಮ ಜನರು ಮತ್ತು ಮಾಧ್ಯಮ ಗಳ ಮೇಲೆ ಮಾತ್ರವೇ ತೋರಿಸುವುದೇ? ಪಾಕಿಸ್ಥಾನದ ರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ಭಯೋತ್ಪಾದನೆ ಬಗ್ಗೆ ಚಕಾರವೆತ್ತದೆ ಆ ದೇಶದ ಪ್ರಧಾನಿಗೆ ಶುಭಾಶಯ ಕಳುಹಿಸಿದ್ದನ್ನೇ ಮೋದಿ ಮುಚ್ಚಿಟ್ಟಿದ್ದರು. ಇನ್ನಾ ದರೂ ಪಾಕ್ಗೆ ಪ್ರೇಮಪತ್ರ ಬರೆಯುವುದನ್ನು ಮೋದಿ ನಿಲ್ಲಿಸಬೇಕು’ ಎಂದಿದ್ದಾರೆ.
ಇದೇ ವೇಳೆ, ಮೋದಿ ಶುಭಾಶಯಕ್ಕೆ ಧನ್ಯವಾದ ಹೇಳಿರುವ ಇಮ್ರಾನ್ ಖಾನ್, ಎರಡೂ ದೇಶಗಳ ನಡುವೆ ಸಮಗ್ರ ಮಾತುಕತೆ ನಡೆಯ ಬೇಕು ಮತ್ತು ಕಾಶ್ಮೀರ ಸಹಿತ ಎಲ್ಲ ಪ್ರಮುಖ ವಿವಾದಗಳು ಬಗೆಹರಿಯ ಬೇಕು ಎಂದಿದ್ದಾರೆ. ಪ್ರತ್ಯೇಕತಾವಾದಿ ಗಳಿಗೆ ಆಹ್ವಾನ ನೀಡಿದ್ದನ್ನು ಖಂಡಿಸಿ ಶುಕ್ರವಾರವಷ್ಟೇ ಕೇಂದ್ರ ಸರಕಾರವು ಪಾಕ್ ಹೈಕಮಿಷನ್ನಲ್ಲಿ ನಡೆಯಲಿದ್ದ ರಾಷ್ಟ್ರೀಯ ದಿನದ ಕಾರ್ಯಕ್ರಮವನ್ನು ಬಹಿಷ್ಕರಿಸಿತ್ತು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.