ಬದುಕು ಸುಂದರವಾಗಿಸುವತ್ತ ಇರಲಿ ಎಲ್ಲರ ಚಿತ್ತ

ಅನುಭವ ಸಂಪತ್ತು

Team Udayavani, Apr 1, 2019, 1:36 PM IST

01-April-10

ಹಂಸಕ್ಷೀರನ್ಯಾಯ ಎಂಬುದು ಬದುಕಿನಲ್ಲಿ ಇರಬೇಕಾದ ಉತ್ತಮ ಗುಣಗಳಲ್ಲೊಂದು. ಹಂಸವು ನೀರು ಬೆರೆಸಿದ ಹಾಲಿನಲ್ಲಿ ಹಾಲನ್ನಷ್ಟೇ ಸ್ವೀಕರಿಸಿ ನೀರನ್ನು ಬಿಟ್ಟುಬಿಡುವಂತೆ ಜೀವನದಲ್ಲಿ ನಾವು ಒಳಿತು-ಕೆಡುಕುಗಳ ನಡುವೆ ಕೇವಲ ಒಳಿತನ್ನೇ ಸ್ವೀಕರಿಸಬೇಕು ಎನ್ನುವುದು ಇದರ ತಾತ್ಪರ್ಯ. ಇನ್ನೊಂದು ರೀತಿಯ ನ್ಯಾಯವಿದೆ. ಅದು ‘ಅಪಸಾರಿತಾಗ್ನಿ ಭೂತಲನ್ಯಾಯ.

ಉತ್ತಮ ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಹೋದ ಅನಂತರವೂ ಆ ವ್ಯಕ್ತಿಯ ಆದರ್ಶ, ಗುಣಗಳ ಪ್ರಭಾವ ಆ ಸ್ಥಳದಲ್ಲಿ ಉಳಿದರೆ ಅದು ಅಪಸಾರಿತಾಗ್ನಿ ಭೂತಲನ್ಯಾಯ ಎನಿಸುವುದಂತೆ.

ಬದುಕಿನಲ್ಲಿ ಸಾಕಷ್ಟು ಬಾರಿ ಅಂಥಹ ಸನ್ನಿವೇಶಗಳಿಗೆ ನಾವು ಸಾಕ್ಷಿಗಳಾಗುತ್ತೇವೆ. ಅಂಥ ಸಂದರ್ಭಗಳಲ್ಲಿ ಆ ವ್ಯಕ್ತಿಗಳ ಆದರ್ಶದ ಪ್ರಭಾವ ಇನ್ನೂ ಅಲ್ಲಿ ಇರುತ್ತದೆ. ಅದು
ಅಲ್ಲಿನ ಇತರರಲ್ಲಿ ಪ್ರತಿಫ‌ಲಿಸ ಬಹುದು. ಆ ಆದರ್ಶದ ಫ‌ಲವಾಗಿಯೇ
ಸಂಸ್ಥೆಯ ಚಟುವಟಿಕೆಗಳು ಎಂದಿನಂತೆ ನಡೆಯಬಹುದು. ಕೆಲವು ಕಾಲದವರೆಗೆ ಇದು ಮುಂದುವರಿಯಬಹುದು.

ಎಲ್ಲ ಗುಣಗಳೂ ಪ್ರಭಾವಿಸುವುದಿಲ್ಲ
ಎಲ್ಲ ಗುಣಗಳೂ ಎಲ್ಲರನ್ನು ಪ್ರಭಾವಿಸುವುದಿಲ್ಲ. ಇದಕ್ಕೆ ಪುರಾಣದ ಒಂದು ಪ್ರಸಂಗವನ್ನು ಇಲ್ಲಿ ಉಲ್ಲೇಖಿಸಬಹುದು. ಯಾಗಗಳ ಹವಿಸ್ಸನ್ನು ಸ್ವೀಕರಿಸಲು ತ್ರಿಮೂರ್ತಿಗಳಲ್ಲಿ ಯಾರು ಆದ್ಯರು ಎಂಬುದನ್ನು ಪರೀಕ್ಷಿಸಲು ದೇವಸಭೆಯಲ್ಲಿ ಭೃಗು ಮಹರ್ಷಿಗಳು ನಿಯೋಜಿತರಾಗುತ್ತಾರೆ. ಅವರು ಸತ್ಯಲೋಕಕ್ಕೆ ಹೋದಾಗ ಭೃಗುವಿನಲ್ಲಿ ಬ್ರಹ್ಮನ ರಜೋಗುಣದ ಆವಿರ್ಭಾವವಾಯಿತು. ಕೈಲಾಸಕ್ಕೆ ಹೋದಾಗ ತಮೋಗುಣ ಪ್ರಭಾವಿಸಿತಂತೆ. ಆದರೆ ವೈಕುಂಠಕ್ಕೆ ಬಂದಾಗ ವಿಷ್ಣುವಿನ ಸತ್ವ ಗುಣ ಪ್ರಭಾವಿಸಲಿಲ್ಲ. ವಿಷ್ಣುವಿನ ಒಳಗಾಗುವುದು ಅಥವಾ ಆತನ ಪ್ರಭಾವಲಯಕ್ಕೆ ಒಳಗಾಗುವುದು ಅಷ್ಟೊಂದು ಸುಲಭವಲ್ಲ ಎಂಬುದು ಭೃಗುವಿಗೆ ಅರ್ಥವಾಯಿತು. ಪರೀಕ್ಷಿಸಲು ಬಂದ ಭೃಗುವನ್ನೇ ಪರೀಕ್ಷಿಸಿ ಅರಿವು ಮೂಡಿಸಿ ಕಳುಹಿಸಿದ ವಿಷ್ಣು.

ಇಲ್ಲಿ ನಾವು ಗುಣಗಳು ಹೇಗೆ ಪ್ರಭಾವಿಸುತ್ತವೆ ಎಂಬುದರ ಕುರಿತಂತೆ ಆಲೋಚಿಸಬೇಕಾಗುತ್ತದೆ. ರಜೋಗುಣ, ತಮೋಗುಣಗಳು ಭೃಗುವನ್ನು ಪ್ರಭಾವಿಸಿದರೆ, ಸತ್ವ ಗುಣ ಏಕೆ ಪ್ರಭಾವಿಸಲಿಲ್ಲ ಎಂಬುದು ಜಿಜ್ಞಾಸೆ. ಲೋಕ ಲೋಕಗಳ ನಿಯಮಗಳೇನಿವೆಯೋ. ಆದರೆ ನಮ್ಮ ಜೀವನದಲ್ಲೂ ಹಾಗೆಯೇ. ಕೆಲವೊಂದು ಗುಣಗಳು ಬೇಗನೇ ಪ್ರಭಾವಿಸಿಬಿಡುತ್ತವೆ. ಕೆಲವೊಂದು ನಮ್ಮ ಸಮೀಪವೂ ಸುಳಿಯುವುದಿಲ್ಲ. ಏನೇ ಇರಲಿ, ಹಂಸಕ್ಷೀರನ್ಯಾಯ, ಅಪಸಾರಿತಾಗ್ನಿ ಭೂತಲನ್ಯಾಯಾದಿಗಳನ್ನು ಮಾದರಿಯಾಗಿರಿಸಿ ನಮ್ಮ ಬದುಕನ್ನು ಸುಂದರವಾಗಿಸುವತ್ತ ನಮ್ಮ ಚಿತ್ತ ಇರುವುದು ಅಗತ್ಯವಾಗಿದೆ.

ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

ಟಾಪ್ ನ್ಯೂಸ್

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Punjab; Aam Aadmi leader shot by Akali Dal leader

Punjab; ಆಮ್‌ ಆದ್ಮಿ ನಾಯಕನಿಗೆ ಗುಂಡೇಟು ಹೊಡೆದ ಅಕಾಲಿ ದಳ ಮುಖಂಡ

10-ckm

Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Varun tej starrer matka movie releasing on Nov 14

Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ

nidradevi next door Kannada Movie

Sandalwood: ಎಚ್ಚರಗೊಂಡ ನಿದ್ರಾದೇವಿ; ಶೂಟಿಂಗ್‌ ಮುಗಿಸಿ, ಪೋಸ್ಟ್‌ ಪ್ರೊಡಕ್ಷನ್‌ ನತ್ತ..

9

Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್‌ ಸ್ಪೋರ್ಟ್ಸ್ ಮತ್ತೆ ಆರಂಭ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

Uttar Pradesh: ಆ ಕಾರಣಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎಸೆದ ಪ್ರಿಯತಮೆ

12-health

Alzheimer’s disease: ಅಲ್ಜೀಮರ್ – ಮರೆಗುಳಿ ಕಾಯಿಲೆಯ ಬಗ್ಗೆ ತಿಳಿಯಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.