ನೋವಿದ್ದರೂ, ಖುಷಿಯಿಂದ್ಲೆ ಹೇಳ್ತೀದೀನಿ, ಗುಡ್‌ಬೈ!


Team Udayavani, Apr 2, 2019, 6:00 AM IST

a-12

ಭಾವನೆಗಳೊಂದಿಗೆ ಆಟವಾಡಿ, ಸಾಕು ಎನ್ನಿಸಿದಾಗ ಎದ್ದು ಹೋದೆ. ಫ್ಲರ್ಟಿಂಗ್‌ ಅಂದ್ರೆ ಇದೇ ಇರಬೇಕಲ್ವಾ? ನೀನು ಕೊಟ್ಟ ಮಾತು, ಮಾಡಿರೋ ಆಣೆ ಪ್ರಮಾಣಗಳು ಬರೀ ಸುಳ್ಳು ಎಂದು ಈಗ ಅನ್ನಿಸುತ್ತಿದೆ. ನಾವಿಬ್ಬರೂ ಒಳ್ಳೆಯ ಜೋಡಿ ಆಗುತ್ತೇವೆ ಎಂದಿದ್ದು ಬರೀ ನಾಟಕಾನ?

ನನ್ನ ಪ್ರೀತಿಯನ್ನು ಮರಳಿ ಕೊಡು ಎಂದು ನಾನು ಕೇಳುವುದಿಲ್ಲ. ಕನಸಿನ ಸೌಧವನ್ನು ಯಾಕೆ ಕೆಡವಿದೆ ಅಂತಲೂ ಕೇಳುವುದಿಲ್ಲ. ಎಲ್ಲ ಹುಡುಗಿಯರಂತೆ ನಾನೆಂದೂ ನಿನ್ನನ್ನು ಕಾಡುವುದಿಲ್ಲ. ಬಿಟ್ಟು ಹೋಗುವುದಾದರೆ ಹೋಗು ಬೇಡ ಎನ್ನುವುದಿಲ್ಲ. ನನ್ನನ್ನು ನಿರ್ಲಕ್ಷಿಸೋಕೆ ನೀನು ಕೊಡೋ ಕಾರಣವೂ ನಂಗೆ ಬೇಕಿಲ್ಲ. ಯಾಕೆ ಗೊತ್ತಾ? ಕಾರಣ ಕೇಳಿ ನಿನ್ನನ್ನು ಕ್ಷಮಿಸೋ ಅಷ್ಟು ಉದಾರ ಮನಸ್ಸು ನನಗಿಲ್ಲ.

ನೀನು ಯಾಕೆ ಹೀಗೆ ಮಾಡಿದೆ ಎಂದು ಕೇಳುವ ಧೈರ್ಯವೂ ನನಗಿಲ್ಲ. ಅದು ನಿನ್ನ ಮನಸ್ಸಿಗೆ ಬಿಟ್ಟಿದ್ದು. ನೀನು ನನ್ನವನಾಗಬೇಕು, ಪೂರ್ತಿಯಾಗಿ ನನ್ನವನೇ ಆಗಬೇಕೆಂಬ ಆಸೆ ಸದ್ಯಕ್ಕೆ ಬರೀ ಕನಸು. ಭಾವನೆಗಳೊಂದಿಗೆ ಆಟವಾಡಿ, ಸಾಕು ಎನ್ನಿಸಿದಾಗ ಎದ್ದು ಹೋದೆ. ಫ್ಲರ್ಟಿಂಗ್‌ ಅಂದ್ರೆ ಇದೇ ಇರಬೇಕಲ್ವಾ? ನೀನು ಕೊಟ್ಟ ಮಾತು, ಮಾಡಿರೋ ಆಣೆ ಪ್ರಮಾಣಗಳು ಬರೀ ಸುಳ್ಳು ಎಂದು ಈಗ ಅನ್ನಿಸುತ್ತಿದೆ. ನಾವಿಬ್ಬರೂ ಒಳ್ಳೆಯ ಜೋಡಿ ಆಗುತ್ತೇವೆ ಎಂದಿದ್ದು ಬರೀ ನಾಟಕಾನ?

ಇದೆಲ್ಲ ನಿಂಗೆ ಮತ್ತೆ ಮತ್ತೆ ನೆನಪು ಮಾಡ್ತಿರೋದು ಮತ್ತೆ ನೀನು ನನ್ನನ್ನು ಪ್ರೀತಿಸಲಿ ಅಂತ ಅಲ್ಲ. ನನ್ನ ಮನಸ್ಸಿನ ಭಾವನೆಗಳನ್ನ ಬಿಚ್ಚಿಡುತ್ತಿದ್ದೇನೆ ಅಷ್ಟೆ.

ನನ್ನ ಪ್ರೀತಿಯ ಜಗತ್ತಿನಲ್ಲಿ ನೀನಿಲ್ಲ ಎಂದು ಅರಿವಾಗಿದೆ. ನಾವಿಬ್ಬರು ಜೊತೆಯಾಗಿ ಕಂಡ ಮುಂದಿನ ಜೀವನದ ಕನಸುಗಳನ್ನು ಒಂದೊಂದಾಗಿ ಮರೆಯುತ್ತಿದ್ದೇನೆ. ನನ್ನ ಮನಸಿನ ಭಾವನೆಗಳನ್ನು ತೇಲಿ ಬಿಡಲು ಜೋರಾದ ಗಾಳಿಗಾಗಿ ಕಾಯುತ್ತಿದ್ದೇನೆ. ನೀನಿಲ್ಲದೆ ತುಂಬಾ ನೋವು ಅನುಭವಿಸುತ್ತಿದ್ದೇನೆ. ನಿನಗೆಂದೇ ಮೀಸಲಿಟ್ಟಿದ್ದ ನನ್ನ ಭಾವನೆಗಳಿಗೆ ಬೆಂಕಿ ಇಟ್ಟಿದ್ದೇನೆ.

ನಂಬಿಕೆಯ ಕನ್ನಡಿ ಒಡೆದು ಹೋಗಿದೆ, ಕಂಡ ಕನಸುಗಳೆಲ್ಲಾ ನುಚ್ಚು ನೂರಾಗಿವೆ. ಎಂಥ ಸಂದರ್ಭದಲ್ಲೂ ಅಪ್ಪನಂತೆ, ಗೆಳೆಯನಂತೆ, ಬಾಳ ಸಂಗಾತಿಯಂತೆ ನೀನು ನನ್ನ ಜೊತೆಗಿರುವೆ ಎಂಬ ನಂಬಿಕೆ ಸುಳ್ಳಾಗಿದೆ. ಇಷ್ಟಾದರೂ, ನಿನ್ನ ಮೇಲಿನ ಪ್ರೀತಿ ಸಾಸಿವೆ ಕಾಳಷ್ಟೂ ಕಡಿಮೆಯಾಗಿಲ್ಲ.
ಕೊನೆಗೆ ಒಂದ್‌ ಮಾತು. ಆದಷ್ಟು ಬೇಗ, ನಿನ್ನ ಕನಸಿನಲ್ಲೂ ಎಣಿಸಿರದ ಸಾಧನೆಯೊಂದಿಗೆ ನಿನ್ನ ಕಣ್ಣ ಮುಂದೆ ಬರುತ್ತೇನೆ. ನನ್ನ ಪ್ರೀತಿ ನಿಜ ಅಂತ ನಿಂಗೆ ಯಾವಾಗ ಅನ್ಸುತ್ತೋ, ಆವಾಗ ಒಂದು ಹನಿ ಕಣ್ಣೀರು ಹಾಕು, ಸದ್ದಾಗದಂತೆ.

ಖುಷಿಯಿಂದ ಹೇಳ್ತಿದೀನಿ, ಗುಡ್‌ ಬೈ.

ಇಂತಿ ನಿನ್ನ
ಅಚ್ಚು

ಟಾಪ್ ನ್ಯೂಸ್

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

BELLARE-MALE

Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್‌

DANDIA-DANCE

Udupi Ucchila Dasara: ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಸಂಭ್ರಮ

siddanna-2

Guarantee ಯೋಜನೆಗಳಿಂದ ಕರ್ನಾಟಕ ನಂ. 1: ಸಿದ್ದರಾಮಯ್ಯ

Prabhakar-Joshi

Bantwala: ಹಿರಿಯ ವಿದ್ವಾಂಸರಾದ ಡಾ.ಪ್ರಭಾಕರ ಜೋಶಿಗೆ ಪೊಳಲಿ ಯಕ್ಷೋತ್ಸವ ಪ್ರಶಸ್ತಿ ಪ್ರದಾನ

Sowthadka

Hunger Strike: ಸರಕಾರದ ಹಿಡಿತದಿಂದ ದೇಗುಲ ಮುಕ್ತಗೊಳಿಸಿ, ಸ್ವಾಯತ್ತ ಮಂಡಳಿ ರಚಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

attack

Public place ಮೂತ್ರ ವಿಸರ್ಜಿಸಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ

rape

Women; 16 ವರ್ಷಗಳಿಂದ ಮನೆಯಲ್ಲೇ ಮಹಿಳೆ ಬಂಧನ: ರಕ್ಷಣೆ

CHampai Soren

Jharkhand ಮಾಜಿ ಸಿಎಂ ಚಂಪಯಿ ಆಸ್ಪತ್ರೆಗೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

attack

Public place ಮೂತ್ರ ವಿಸರ್ಜಿಸಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ

rape

Women; 16 ವರ್ಷಗಳಿಂದ ಮನೆಯಲ್ಲೇ ಮಹಿಳೆ ಬಂಧನ: ರಕ್ಷಣೆ

CHampai Soren

Jharkhand ಮಾಜಿ ಸಿಎಂ ಚಂಪಯಿ ಆಸ್ಪತ್ರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.