ಕೈರಂಗಳ ನಾರಾಯಣ ಹೊಳ್ಳರಿಗೆ ಸಮ್ಮಾನ
Team Udayavani, Apr 6, 2019, 6:00 AM IST
ರಾಮಚಂದ್ರ ಹೆಗ್ಡೆ ಬೆಜ್ಜ ಕಲಾ ವೇದಿಕೆಯು ಎ.7ರಂದು ಬೆಜ್ಜದ ಹಳ್ಳಿ ಯಂಗಳದಲ್ಲಿ ಜಾತ್ರೋತ್ಸವದ ಸಂದರ್ಭ ಸಾಲಿಗ್ರಾಮ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಹಿರಿಯ ಕಲಾವಿದ ಕೈರಂಗಳ ನಾರಾಯಣ ಹೊಳ್ಳರಿಗೆ ವಾರ್ಷಿಕ ಸಮ್ಮಾನವನ್ನು ಅರ್ಪಿಸಲಿದೆ.
ಹೊಳ್ಳರದ್ದು ಸುಮಾರು ಏಳು ದಶಕಗಳ ಯಕ್ಷಗಾನದ ಒಡನಾಟ. ಸಂಘಟನೆ, ತರಬೇತಿ, ಸಂಯೋಜನೆ, ಪ್ರಸಾದನ ಹಾಗೂ ನೇಪಥ್ಯ ಚಟುವಟಿಕೆ ತಾಳಮದ್ದಳೆ ಅರ್ಥಗಾರಿಕೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸಿದವರು. ಅಧ್ಯಾಪಕ,ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದರೂ ಪ್ರವೃತ್ತಿಯಿಂದ ಯಕ್ಷಗಾನ ತಾಳಮದ್ದಳೆ ಕಲಾವಿದನಾಗಿ, ಕಲಾ ಸಂಘಟಕನಾಗಿ, ವೇಷ ಭೂಷಣಗಳನ್ನು ಒದಗಿಸುವ ಹಾಗೂ ಮುಖವರ್ಣಿಕೆಗಳನ್ನು ಬರೆಯುವ ನೇಪಥ್ಯ ಕಲಾವಿದನಾಗಿ, ಧ್ವನಿವರ್ಧಕ ಯಕ್ಷಗಾನ ಪ್ರವೇಶಿಸಿದ ಕಾಲಕ್ಕೆ ಧ್ವನಿವರ್ಧಕ ಸೆಟ್ಟನ್ನು ಪೂರೈಸುವ ಹಾಗೇ ಅದರ ತಾಂತ್ರಿಕ ಪರಿಣತಿಯನ್ನು ಪಡೆದ ತಂತ್ರಜ್ಞನಾಗಿ ಮೆರೆದವರು.
ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವನ್ನು ಸ್ಥಾಪಿಸಿ ನಾಡಿನಾದ್ಯಂತ ಪ್ರದರ್ಶನ ನಡೆಸಿಕೊಡುತ್ತಿದ್ದವರು. ಅದೇ ಕಾಲದಲ್ಲಿ ಸಂಸ್ಥೆಗಾಗಿ ಸುಸಜ್ಜಿತ ವೇಷಬೂಷಣ ಸೆಟ್ಟ್ ಒಂದನ್ನು ಸಿದ್ದಗೊಳಿಸಿ ತನ್ನ ಮನೆಯಲ್ಲೇ ತನ್ನ ಉಸ್ತುವಾರಿಯಲ್ಲೇ ವ್ಯವಸ್ಥೆಗೊಳಿಸಿ ಇತರಸಂಘಗಳಿಗೆ ಬಾಡಿಗೆ ನೀಡಿದಾಗ ಬಂದ ಆದಾಯವನ್ನು ಯಕ್ಷಗಾನ ಸಂಘಕ್ಕೆ ನೀಡುತ್ತಾ ಬಂದವರು.
ಯೋಗೀಶ ರಾವ್ ಚಿಗುರುಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.