ಶಿವರಾಮೇಗೌಡರ ಬಾಯಿ ಬಂದ್
Team Udayavani, Apr 5, 2019, 6:05 AM IST
ಹೇಳಿ, ಕೇಳಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ್ದೇ ಹವಾ. ನಾಯಕರ ಆರೋಪ-ಪ್ರತ್ಯಾರೋಪಗಳು ಇಲ್ಲಿ ಮಾಮೂಲಿ ಎಂಬಂತಾಗಿದೆ. ಈ ಮಧ್ಯೆ, ಮಂಡ್ಯ ಚುನಾವಣಾ ಅಖಾಡದಲ್ಲಿ ಜಾತಿ ವಿಚಾರ ಪ್ರಸ್ತಾಪಿಸಿ, ಆಕ್ರೋಶಕ್ಕೆ ಗುರಿಯಾದ ಸಂಸದ ಶಿವರಾಮೇಗೌಡರಿಗೆ ಬಾಯಿ ಬಂದ್ ಮಾಡಿಕೊಳ್ಳುವಂತೆ ವರಿಷ್ಠರು ತಾಕೀತು ಮಾಡಿದ್ದಾರಂತೆ. ಇನ್ಮೆàಲೆ ನೀವು ಪ್ರಚಾರಕ್ಕೆ ಬರದಿದ್ದರೂ ಪರವಾಗಿಲ್ಲ, ವಿವಾದಾತ್ಮಕ ಹೇಳಿಕೆ ನೀಡಿ ನಮ್ಮ ಅಭ್ಯರ್ಥಿಗೆ ಮತ ನಷ್ಟ ಮಾಡಬೇಡಿ ಎಂದು ಖಡಕ್ಕಾಗಿ ಹೇಳಿದ್ದಾರಂತೆ.
ಇದೇ ಕಾರಣಕ್ಕಾಗಿ ಶಿವರಾಮೇಗೌಡರು ಮಂಡ್ಯಕ್ಕಿಂತ ಹೆಚ್ಚಾಗಿ ಟಿವಿಗಳಲ್ಲೇ ಇತ್ತೀಚೆಗೆ ಹೆಚ್ಚು ಮಿಂಚುತ್ತಿದ್ದಾರಂತೆ. ಆದರೂ, ಜೆಡಿಎಸ್ ನಾಯಕರಿಗೆ ಇವರು ಮಾಧ್ಯಮಗಳ ಮುಂದೆ ಏನಾದರೂ ಮಾತನಾಡಿ ತಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು ಎಂಬ ಆತಂಕ ಇದೆಯಂತೆ. ಅದಕ್ಕಾಗಿ ಒಬ್ಬ ಕಾರ್ಯಕರ್ತನನ್ನು ಸದಾ ಶಿವರಾಮೇಗೌಡರ ಜತೆಗೆ ಬಿಟ್ಟಿದ್ದಾರಂತೆ. ಇದೇ ವೇಳೆ, ಮಂಡ್ಯದ ಬೇರೆ ಜೆಡಿಎಸ್ ನಾಯಕರಿಗೂ ಸುಮಲತಾ ಅಂಬರೀಶ್ ವಿರುದ್ಧ ಟೀಕೆ ಮಾಡುವ ಭರದಲ್ಲಿ ಡ್ಯಾಮೇಜ್ ಆಗುವ ಹೇಳಿಕೆ ಕೊಡಬೇಡಿ ಎಂದು ಫರ್ಮಾನು ಹೊರಡಿಸಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.