ಶ್ರೀನಗರ – ಜಮ್ಮು ಹೆದ್ದಾರಿ ನಿಷೇಧಕ್ಕೆ ಉಮರ್ ಅಬ್ದುಲ್ಲ ಪ್ರತಿಭಟನೆ, ಧರಣಿ
Team Udayavani, Apr 10, 2019, 5:04 PM IST
ಶ್ರೀನಗರ : ಶ್ರೀನಗರ – ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ವಾರಕ್ಕೆ ಎರಡು ದಿನ ನಾಗರಿಕರ ವಾಹನ ಬಳಕೆಗೆ ನಿಷೇಧಿಸಿ ರಾಜ್ಯ ಆಡಳಿತೆಯು ಹೊರಡಿಸಿರುವ ಆದೇಶವನ್ನು ಪ್ರತಿಭಟಿಸಿ ನ್ಯಾಶನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲ ಅವರು ಇಂದು ಬುಧವಾರ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದರು.
ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಪಂಥ ಚೌಕ್ ಸಮೀಪ ಅಬ್ದುಲ್ಲ ಅವರು ತಮ್ಮ ಪಕ್ಷದ ನಾಯಕರು, ಕಾರ್ಯಕರ್ತರೊಡಗೂಡಿ ಧರಣಿ ಕುಳಿತು ಆದೇಶದ ತೆರವಿಗೆ ಆಗ್ರಹಿಸಿದರು.
ಈ ತುಘಲಕ್ ಫರ್ಮಾನ್ ಹೊರಡಿಸಲಾದ ದಿನದಿಂದಲೇ ನಾವು ನಿರಂತರವಾಗಿ ಈ ಆದೇಶದ ಬಗ್ಗೆ ಮರು ಚಿಂತನೆ ನಡೆಸುವಂತೆ ಆಗ್ರಹಿಸುತ್ತಾ ಬಂದಿದ್ದೇವೆ; ಈ ರೀತಿಯ ನಿಷೇಧದ ಅಗತ್ಯವೇ ಇಲ್ಲ ಎಂದು ಉಮರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hyderabad: ಯುಪಿ ವಿರುದ್ಧ ಗೆದ್ದ ಬೆಂಗಾಲ್
BBK11: ಬಿಗ್ ಬಾಸ್ ಮನೆಗೆ ಬಂದು ಧಿಕ್ಕಾರ ಹಾಕಿದ ಜನಸಾಮಾನ್ಯರು..! ಅಂಥದ್ದೇನಾಯಿತು?
New Delhi: ಸರಕಾರದ ಹಸ್ತಕ್ಷೇಪ ಕುಸ್ತಿ ವಿಶ್ವ ಪಂದ್ಯಾವಳಿಯಿಂದ ಭಾರತ ಹೊರಕ್ಕೆ
Shootout: ಜರ್ಮನಿಗೆ ಹಾಕಿ ಟೆಸ್ಟ್ ಸರಣಿ ದ್ವಿತೀಯ ಪಂದ್ಯ; ಭಾರತ 5-3 ಗೆಲುವು
New Delhi: ವನಿತಾ ಹಾಕಿ ಮಾಜಿ ನಾಯಕಿ ರಾಣಿ ರಾಂಪಾಲ್ ನಿವೃತ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.